ಸಾಪ್ತಾಹಿಕಪ್ರಭ

C Plus Plus ಗೌರಮ್ಮ

ಕಾಲವಿ ಎಂಬ ಕಾವ್ಯನಾಮದಿಂದ c++ ಗೌರಮ್ಮ ಸಂಕಲನದಲ್ಲಿ ಕವಿತೆಗಳನ್ನು ಬರೆದಿರುವ ವಿ. ಲಕ್ಷ್ಮೀಕಾಂತ್ ಅವರು

ಕಾಲವಿ ಎಂಬ ಕಾವ್ಯನಾಮದಿಂದ 'c++ ಗೌರಮ್ಮ' ಸಂಕಲನದಲ್ಲಿ ಕವಿತೆಗಳನ್ನು ಬರೆದಿರುವ ವಿ. ಲಕ್ಷ್ಮೀಕಾಂತ್ ಅವರು ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಅವರಲ್ಲೊಬ್ಬ ಕವಿ ಕೀಬೋರ್ಡ್ ಕೀಗಳ ಸದ್ದಿನಂತೆ ಸದ್ದುಮಾಡುತ್ತಲೇ ಇದ್ದ. ಅವರೊಳಗಿನ ಕವಿ ಜಾಗೃತನಾದದ್ದು ಹಂಸಲೇಖ ಅವರ ಪ್ರಚೋದನೆಯಿಂದ. 'ಹಂಸಲೇಖರವರೇ ನನ್ನ ಕವನಗಳಿಗೆ ಮಾರ್ಗ/ ಏಕೆಂದರೆ ಅವರದು ಸಾಹಿತ್ಯದಲ್ಲಿ ಪ್ರತ್ಯೇಕ ವರ್ಗ/ ನನ್ನ ಕವನಗಳೆಲ್ಲಾ ಅವರಿಗೆ ಅರ್ಪಣೆ' ಎಂದು ಕಾಲವಿಯವರೇ ಹೇಳಿಕೊಂಡಿದ್ದಾರೆ. ಕೃತಿಯಲ್ಲಿ ಸ್ಮಾಲ್ ಸಾಂಗ್ಸ್ ಮತ್ತು ಲಾಂಗ್ ಸಾಂಗ್ಸ್ ಎಂಬ ಎರಡು ಭಾಗಗಳಿವೆ. 'ತಪಸ್ಸಿಗೆ ಕುಳಿತನು/ ವಿಶ್ವಾಮಿತ್ರ/ ಮೇನಕೆ ಬಂದು ನಲಿದಾಗ/ ಆದನು ಆಕೆಯ ಮಿತ್ರ!/'- ಇದು ಅವರ ಸ್ಮಾಲ್ ಸಾಂಗ್ಸ್‌ನ ಒಂದು ಉದಾಹರಣೆ. ಅವರ ಲಾಂಗ್ ಸಾಂಗ್ಸ್‌ನ 'C++ ಗೌರಮ್ಮ' ಕವಿತೆಯಲ್ಲಿ ಬೇರು ಗಟ್ಟಿಯಿಲ್ಲದೆ ಕಂಪ್ಯೂಟರ್ ವಿಜ್ಞಾನ ಕಲಿಯಲು ಬರುವವರನ್ನು ಅವರು ವಿಡಂಬನೆ ಮಾಡಿದ್ದಾರೆ. ಕಾಲವಿಯವರ ಆಲೋಚನೆಗಳು ಪದ್ಯದ ಹಿಡಿತದಿಂದ ತಪ್ಪಿಸಿಕೊಂಡು ಗದ್ಯವಾಗಲು ಹಟಮಾಡುತ್ತಿರುವಂತೆ ಕಂಡರೂ ಅವುಗಳ ಸಂದೇಶದಲ್ಲಿ ಕವಿತ್ವವಿದೆ.

ಕೃತಿ:  c++ ಗೌರಮ್ಮ,
ಪ್ರಕಾರ:  ಕವಿತೆ,
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಟೋಟಲ್‌ಕನ್ನಡ, ಬೆಂಗಳೂರು,
ಪುಟಗಳು 103, ಬೆಲೆ ರು. 80


- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ

ಸೆಲ್ಫಿ ಕೇಳಿ ಬಂದ ಮಹಿಳಾ ಅಭಿಯಾನಿಯಿಂದ 'ಲಿಪ್ ಲಾಕ್': ತಬ್ಬಿಬ್ಬಾದ ಬಾಲಿವುಡ್ ನಟಿ ನಿಕಿತಾ ರಾವಲ್, Video ವೈರಲ್

ಇರಾನ್ ಯುದ್ಧದ ಎಫೆಕ್ಟ್: ಅಮೆರಿಕದ ಶಸ್ತ್ರಾಸ್ತ್ರ ದಾಸ್ತಾನು ಖಾಲಿ? ರಕ್ಷಣಾ ಕಂಪನಿಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಪೆಂಟಗನ್ ಸೂಚನೆ

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?