ಪುದುಚೆರಿಯ ಅರಬಿಂದೊ ಆಶ್ರಮ 
ಪ್ರಧಾನ ಸುದ್ದಿ

ಅರಬಿಂದೊ ಆಶ್ರಮದಿಂದ ಹೊರಕ್ಕೆ: ಪುದುಚೆರಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಕುಟುಂಬ, ೩ ಸಾವು

ಪುದುಚೆರಿಯ ಅರಬಿಂದೊ ಆಶ್ರಮದಿಂದ ಹೊರಗೆ ಕಳಿಸಿದ ಒಂದು ದಿನದ ನಂತರ ಇಡಿ ಕುಟುಂಬದ

ಪುದುಚೆರಿ: ಪುದುಚೆರಿಯ ಅರಬಿಂದೊ ಆಶ್ರಮದಿಂದ ಹೊರಗೆ ಕಳಿಸಿದ ಒಂದು ದಿನದ ನಂತರ ಇಡಿ ಕುಟುಂಬದ ೫ ಸಹೋದರಿಯರು ಮತ್ತು ಅವರ ಪೋಷಕರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಅವರಲ್ಲಿ ಇಬ್ಬರು ಸಹೋದರಿಯರು ಮತ್ತು ತಾಯಿ ಮೃತಗೊಂಡಿದ್ದು, ಉಳಿದ ಮೂವರು ಸಹೋದರಿಯರು ಮತ್ತು ತಂದೆಯನ್ನು ಅಲ್ಲಿನ ಬೆಸ್ತರು ರಕ್ಷಿಸಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಿಹಾರದ ಕುಟುಂಬ ಅರಬಿಂದೊ ಆಶ್ರಮದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಆಶ್ರಮವನ್ನು ನಡೆಸುವ ಟ್ರಸ್ಟ್, ೧೦ ವರ್ಷದ ಹಿಂದೆ ಒಬ್ಬಳು ಸಹೋದರಿಯ ಕೆಟ್ಟ ನಡವಳಿಕೆಯನ್ನು ದೂರಿತ್ತು. ಟ್ರಸ್ಟ್ ನ ಪರವಾಗಿ ತೀರ್ಪು ಕೊಟ್ಟಿದ್ದ ಸುಪ್ರೀಂ ಕೋರ್ಟ್, ಎಲ್ಲ ಸಹೋದರಿಯರಿಗೂ ಕೊಠಡಿಯನ್ನು ತೆರವು ಮಾಡುವಂತೆ ಸೂಚನೆ ನೀಡಿತ್ತು, ನಿರಾಕರಿಸಿದ್ದಲ್ಲಿ, ಪೊಲೀಸರು ಅವರನ್ನು ಅಲ್ಲಿಂದ ಹೊರಹಾಕಬೇಕು ಎಂದು ಹೇಳಿತ್ತು.

ಅವರನ್ನು ಹೊರದೂಡಿದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರಿಯರು ನಿನ್ನೆ ಬೆದರಿಕೆ ಹಾಕಿದ್ದರು. ಅದರಲ್ಲಿ ಒಬ್ಬಳು ಸಹೋದರಿ, ನೀರಿನ ಟ್ಯಾಂಕ್ ಹತ್ತಿ, ಕೆಳಗೆ ಬಿದ್ದು ಸಾಯುವುದಾಗಿ ಬೆದರಿಸಿದ್ದಳು, ಆದರೆ ನಂತರ ಅವಳ ಮನ ಒಲಿಸಲಾಗಿತ್ತು. ಹಲವಾರು ಸುತ್ತಿನ ಮಾತುಕತೆಯ ನಂತರ ಪೊಲೇಸರು, ಆ ಸಹೋದರಿಯನ್ನು ಕೊಠಡಿಯಿಂದ ತೆರವುಗೊಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT