ಪುದುಚೆರಿಯ ಅರಬಿಂದೊ ಆಶ್ರಮ 
ಪ್ರಧಾನ ಸುದ್ದಿ

ಅರಬಿಂದೊ ಆಶ್ರಮದಿಂದ ಹೊರಕ್ಕೆ: ಪುದುಚೆರಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಕುಟುಂಬ, ೩ ಸಾವು

ಪುದುಚೆರಿಯ ಅರಬಿಂದೊ ಆಶ್ರಮದಿಂದ ಹೊರಗೆ ಕಳಿಸಿದ ಒಂದು ದಿನದ ನಂತರ ಇಡಿ ಕುಟುಂಬದ

ಪುದುಚೆರಿ: ಪುದುಚೆರಿಯ ಅರಬಿಂದೊ ಆಶ್ರಮದಿಂದ ಹೊರಗೆ ಕಳಿಸಿದ ಒಂದು ದಿನದ ನಂತರ ಇಡಿ ಕುಟುಂಬದ ೫ ಸಹೋದರಿಯರು ಮತ್ತು ಅವರ ಪೋಷಕರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಅವರಲ್ಲಿ ಇಬ್ಬರು ಸಹೋದರಿಯರು ಮತ್ತು ತಾಯಿ ಮೃತಗೊಂಡಿದ್ದು, ಉಳಿದ ಮೂವರು ಸಹೋದರಿಯರು ಮತ್ತು ತಂದೆಯನ್ನು ಅಲ್ಲಿನ ಬೆಸ್ತರು ರಕ್ಷಿಸಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಿಹಾರದ ಕುಟುಂಬ ಅರಬಿಂದೊ ಆಶ್ರಮದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಆಶ್ರಮವನ್ನು ನಡೆಸುವ ಟ್ರಸ್ಟ್, ೧೦ ವರ್ಷದ ಹಿಂದೆ ಒಬ್ಬಳು ಸಹೋದರಿಯ ಕೆಟ್ಟ ನಡವಳಿಕೆಯನ್ನು ದೂರಿತ್ತು. ಟ್ರಸ್ಟ್ ನ ಪರವಾಗಿ ತೀರ್ಪು ಕೊಟ್ಟಿದ್ದ ಸುಪ್ರೀಂ ಕೋರ್ಟ್, ಎಲ್ಲ ಸಹೋದರಿಯರಿಗೂ ಕೊಠಡಿಯನ್ನು ತೆರವು ಮಾಡುವಂತೆ ಸೂಚನೆ ನೀಡಿತ್ತು, ನಿರಾಕರಿಸಿದ್ದಲ್ಲಿ, ಪೊಲೀಸರು ಅವರನ್ನು ಅಲ್ಲಿಂದ ಹೊರಹಾಕಬೇಕು ಎಂದು ಹೇಳಿತ್ತು.

ಅವರನ್ನು ಹೊರದೂಡಿದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರಿಯರು ನಿನ್ನೆ ಬೆದರಿಕೆ ಹಾಕಿದ್ದರು. ಅದರಲ್ಲಿ ಒಬ್ಬಳು ಸಹೋದರಿ, ನೀರಿನ ಟ್ಯಾಂಕ್ ಹತ್ತಿ, ಕೆಳಗೆ ಬಿದ್ದು ಸಾಯುವುದಾಗಿ ಬೆದರಿಸಿದ್ದಳು, ಆದರೆ ನಂತರ ಅವಳ ಮನ ಒಲಿಸಲಾಗಿತ್ತು. ಹಲವಾರು ಸುತ್ತಿನ ಮಾತುಕತೆಯ ನಂತರ ಪೊಲೇಸರು, ಆ ಸಹೋದರಿಯನ್ನು ಕೊಠಡಿಯಿಂದ ತೆರವುಗೊಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT