ಪ್ರಧಾನ ಸುದ್ದಿ

ಭಾರತೀಯರು ನನ್ನ ಗುರುಗಳು : ದಲೈಲಾಮ

Rashmi Kasaragodu

ಸೂರತ್:  ಗುರುವಾರ ಗುಜರಾತ್‌ಗೆ ಭೇಟಿ ನೀಡಿದ ಟಿಬೆಟ್‌ನ ಧರ್ಮಗುರು ಹಾಗೂ ಶಾಂತಿ ನೋಬೆಲ್ ಪ್ರಶಸ್ತಿ ವಿಜೇತ ದಲೈಲಾಮ, ಭಾರತೀಯರು ನನ್ನ 'ಗುರುಗಳು' ಎಂದಿದ್ದಾರೆ.

ನನ್ನ ಮನಸ್ಸಲ್ಲಿ ನಲಂದಾದಲ್ಲಿನ ಯೋಚನೆಗಳೇ ತುಂಬಿವೆ. ಇದು ಭಾರತದ ಪುರಾತನ ವಿದ್ಯಾಲಯ. ಆದ್ದರಿಂದ ನಾನು ಭಾರತೀಯರು ಪ್ರಾಚೀನತೆಯಲ್ಲೂ, ಸಂಸ್ಕೃತಿಯಲ್ಲೂ ನನ್ನ ಗುರುಗಳಾಗಿದ್ದಾರೆ ಎಂದು ಹೇಳಿದ್ದಾರೆ.

ನಾವು ಅವರ ಶಿಷ್ಯರು. ನಾನೊಬ್ಬ ಸಾಮಾನ್ಯ ಶಿಷ್ಯನಾಗಿದ್ದು, ನನ್ನ ಗುರುಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ದಲೈಲಾಮಾ ನುಡಿದಿದ್ದಾರೆ.

ಸಾಮಾಜಿಕ ಕಾರ್ಯಗಳಿಗಾಗಿ ನೀಡಲ್ಪಡುವ ಸಂತೋಕ್ಬಾ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕಾಗಿ ದಲೈಲಾಮ ಸೂರತ್‌ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ.

SCROLL FOR NEXT