ರಾಷ್ಟ್ರಪತಿಯವರೊಂದಿಗೆ ನಸೀಮ್ ಜೈದಿ, ವಿ ಎಸ್ ಸಂಪತ್ ಮತ್ತು ಎಚ್ ಎಸ್ ಬ್ರಹ್ಮ 
ಪ್ರಧಾನ ಸುದ್ದಿ

ನಸೀಮ್ ಜೈಯ್ದಿ ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ

ಚುನಾವಣಾ ಮಹಾನಿರ್ದೇಶಕ ನಸೀಮ್ ಜೈಯ್ದಿ ಅವರನ್ನು ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ನವದೆಹಲಿ: ಚುನಾವಣಾ ಮಹಾನಿರ್ದೇಶಕ ನಸೀಮ್ ಜೈಯ್ದಿ ಅವರನ್ನು ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ನೇಮಕಕ್ಕೆ ಸಹಿ ಹಾಕಿದ್ದಾರೆ ಎಂದು ಕಾನೂನು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಈ ನೇಮಕ ಏಪ್ರಿಲ್ ೧೯ ನೆ ತಾರೀಖಿನಿಂದ ಜಾರಿಗೆ ಬರಲಿದ್ದು ಇವರು ಹರಿ ಶಂಕರ್ ಬ್ರಹ್ಮ ಅವರನ್ನು ಬದಲಾಯಿಸಲಿದ್ದಾರೆ,

ಜುಲೈ ೨೦೧೭ ರವರೆಗೆ ಅವರ ಅವಧಿ ಮುಂದುವರೆಯಲಿದೆ.

ಈಗ ಸದ್ಯದ ಮೂರು ಸದಸ್ಯರ ಸಾಂವಿಧಾನಕ ಸಮಿತಿ ಚುನಾವಣಾ ಆಯೋಗಯಲ್ಲಿ ಇವರೊಬ್ಬರೇ ಉಳಿಯುವುದು. ವಿ ಸಂಪತ್ ಆಗಲೇ ನಿವೃತ್ತಿಯಾಗಿದ್ದು, ಹರಿ ಶಂಕರ್ ಬ್ರಹ್ಮ ಕೂಡ ಶೀಘ್ರದಲ್ಲೇ ನಿವೃತ್ತಿಯಾಗಲಿದ್ದಾರೆ.

೧೯೭೬ ಬ್ಯಾಚಿನ ಐ ಎ ಎಸ್ ಅಧಿಕಾರಿ ಜೈಯ್ದಿ, ನಾಗರಿಕ ವಿಮಾನಯಾನ ಇಲಾಖೆಯಲ್ಲಿ ದೀರ್ಘ ಕಾಲದವರೆಗೆ ಕೆಲಸ ಮಾಡಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜಾಗಿತ್ತು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT