ರವಿಶಂಕರ್ ಪ್ರಸಾದ್ 
ಪ್ರಧಾನ ಸುದ್ದಿ

ಭೂಕಂಪನ ವದಂತಿಗಳನ್ನು ನಂಬದಂತೆ ಎಚ್ಚರಿಸಿದ ಕೇಂದ್ರ ಸರ್ಕಾರ

ಸಾಮಾಜಿಕ ಜಾಲತಾಣ ಮತ್ತು ಸಂದೇಶಗಳ ಮೂಲಕ ಹಬ್ಬಿಸಲಾಗುತ್ತಿರುವ ಭೂಕಂಪನದ ವದಂತಿಗಳನ್ನು ನಂಬದಂತೆ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್...

ನವದೆಹಲಿ: ಸಾಮಾಜಿಕ ಜಾಲತಾಣ ಮತ್ತು ಸಂದೇಶಗಳ ಮೂಲಕ ಹಬ್ಬಿಸಲಾಗುತ್ತಿರುವ ಭೂಕಂಪನದ ವದಂತಿಗಳನ್ನು ನಂಬದಂತೆ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಎಚ್ಚರಿಸಿದ್ದು, ನೇಪಾಳದಲ್ಲಿ ಉಂಟಾದ ಅಪಾರ ಸಾವು ನೋವಿಗೆ ರಾಜ್ಯಸಭೆಯಲ್ಲಿ ಸಂತಾಪ ಸೂಚಿಸಿದ್ದಾರೆ.

"ರಾತ್ರಿ ಒಂಭತ್ತಕೆ ಅಥವಾ ರಾತ್ರಿ ೮ ಕ್ಕೆ ಭೂಕಂಪವಾಗುತ್ತದೆ ಎಂಬಂತಹ ಸಂದೇಶಗಳು ಹರಿದಾಡುತ್ತಿವೆ" ಎಂದು ರಾಜ್ಯಸಭೆಯಲ್ಲಿ ಪ್ರಸಾದ್ ತಿಳಿಸಿದ್ದಾರೆ.

"ಇಂತಹ ವದಂತಿಗಳನ್ನು ಕಡೆಗಣಿಸಿ. ಇವಕ್ಕೆ ಯಾವುದೇ ಆಧಾರಗಳಿಲ್ಲ. ಅಂತಹ ಅಧಿಕೃತ ಎಚ್ಚರಿಕೆಗಳಿದ್ದರೆ ಸರ್ಕಾರ ಕಾರ್ಯನಿರತವಾಗುತ್ತದೆ" ಎಂದು ಪ್ರಸಾದ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮುಂದಾಗಲಿರುವ ಭೂಕಂಪದ ಬಗ್ಗೆ ಸಂದೇಶಗಳು ಹರಿದಾಡುತ್ತಲೇ ಇವೆ.

ಭೂಕಂಪದಿಂದ ನೇಪಾಳದಲ್ಲಾದ ಸಾವು-ನೋವಿಗೆ ಸಂತಾಪ ಸೂಚಿಸಿರುವ ಸದಸ್ಯರು ನೇಪಾಳದ ಜನರ ರಕ್ಷಣೆಗೆ ಹಾಗು ಪರಿಹಾರ ಕಾರ್ಯಕ್ಕೆ ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ರಿಕ್ಟರ್ ಮಾಪನದಲ್ಲಿ ದಾಖಲಾದ ೭.೯ ಅಂಶದ ಭೂಕಂಪನದಿಂದ ೩೬೦೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ೫೦೦೦ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ. ಭೂಕಂಪನದ ನಂತರದ ಕಂಪನಗಳು ಕೂಡ ಜನರಲ್ಲಿ ಭಯಭೀತಿ ಸೃಷ್ಟಿಸಿವೆ.

ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಪಕ್ಕದ ರಾಷ್ಟ್ರ ನೇಪಾಳದ ಜನರಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT