ರವಿಶಂಕರ್ ಪ್ರಸಾದ್ 
ಪ್ರಧಾನ ಸುದ್ದಿ

ಭೂಕಂಪನ ವದಂತಿಗಳನ್ನು ನಂಬದಂತೆ ಎಚ್ಚರಿಸಿದ ಕೇಂದ್ರ ಸರ್ಕಾರ

ಸಾಮಾಜಿಕ ಜಾಲತಾಣ ಮತ್ತು ಸಂದೇಶಗಳ ಮೂಲಕ ಹಬ್ಬಿಸಲಾಗುತ್ತಿರುವ ಭೂಕಂಪನದ ವದಂತಿಗಳನ್ನು ನಂಬದಂತೆ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್...

ನವದೆಹಲಿ: ಸಾಮಾಜಿಕ ಜಾಲತಾಣ ಮತ್ತು ಸಂದೇಶಗಳ ಮೂಲಕ ಹಬ್ಬಿಸಲಾಗುತ್ತಿರುವ ಭೂಕಂಪನದ ವದಂತಿಗಳನ್ನು ನಂಬದಂತೆ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಎಚ್ಚರಿಸಿದ್ದು, ನೇಪಾಳದಲ್ಲಿ ಉಂಟಾದ ಅಪಾರ ಸಾವು ನೋವಿಗೆ ರಾಜ್ಯಸಭೆಯಲ್ಲಿ ಸಂತಾಪ ಸೂಚಿಸಿದ್ದಾರೆ.

"ರಾತ್ರಿ ಒಂಭತ್ತಕೆ ಅಥವಾ ರಾತ್ರಿ ೮ ಕ್ಕೆ ಭೂಕಂಪವಾಗುತ್ತದೆ ಎಂಬಂತಹ ಸಂದೇಶಗಳು ಹರಿದಾಡುತ್ತಿವೆ" ಎಂದು ರಾಜ್ಯಸಭೆಯಲ್ಲಿ ಪ್ರಸಾದ್ ತಿಳಿಸಿದ್ದಾರೆ.

"ಇಂತಹ ವದಂತಿಗಳನ್ನು ಕಡೆಗಣಿಸಿ. ಇವಕ್ಕೆ ಯಾವುದೇ ಆಧಾರಗಳಿಲ್ಲ. ಅಂತಹ ಅಧಿಕೃತ ಎಚ್ಚರಿಕೆಗಳಿದ್ದರೆ ಸರ್ಕಾರ ಕಾರ್ಯನಿರತವಾಗುತ್ತದೆ" ಎಂದು ಪ್ರಸಾದ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮುಂದಾಗಲಿರುವ ಭೂಕಂಪದ ಬಗ್ಗೆ ಸಂದೇಶಗಳು ಹರಿದಾಡುತ್ತಲೇ ಇವೆ.

ಭೂಕಂಪದಿಂದ ನೇಪಾಳದಲ್ಲಾದ ಸಾವು-ನೋವಿಗೆ ಸಂತಾಪ ಸೂಚಿಸಿರುವ ಸದಸ್ಯರು ನೇಪಾಳದ ಜನರ ರಕ್ಷಣೆಗೆ ಹಾಗು ಪರಿಹಾರ ಕಾರ್ಯಕ್ಕೆ ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ರಿಕ್ಟರ್ ಮಾಪನದಲ್ಲಿ ದಾಖಲಾದ ೭.೯ ಅಂಶದ ಭೂಕಂಪನದಿಂದ ೩೬೦೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ೫೦೦೦ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ. ಭೂಕಂಪನದ ನಂತರದ ಕಂಪನಗಳು ಕೂಡ ಜನರಲ್ಲಿ ಭಯಭೀತಿ ಸೃಷ್ಟಿಸಿವೆ.

ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಪಕ್ಕದ ರಾಷ್ಟ್ರ ನೇಪಾಳದ ಜನರಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT