ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

೮೯೭೫ ಎನ್ ಜಿ ಒ ಗಳ ಪರವಾನಗಿ ರದ್ದುಪಡಿಸಿದ ಗೃಹಸಚಿವಾಲಯ

ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ

ನವದೆಹಲಿ: ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ೮೯೭೫ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಒ) ಪರವಾನಗಿ ರದ್ದುಪಡಿಸಿದೆ.

೨೦೦೯-೨೦೧೦, ೨೦೧೦-೨೦೧೧ ಮತ್ತು ೨೦೧೧-೨೦೧೨ ರ ಸಮಯದಲ್ಲಿ ಈ ಸಂಸ್ಥೆಗಳು ಕಡ್ಡಾಯ ವಾರ್ಷಿಕ ಆದಾಯ ಅರ್ಜಿ ಎಫ್ ಸಿ-೬ ಸಲ್ಲಿಸಿಲ್ಲ ಎಂದು ದೂರಿ ಗೃಹ ಸಚಿವಾಲಯ ಈ ಸಂಸ್ಥೆಗಳ ಪರವಾನಗಿ ರದ್ದುಪಡಿಸಿದೆ.

ಕಳೆದ ಅಕ್ಟೋಬರ್ ನಲ್ಲಿ ರೆಟರ್ನ್ಸ್ ಅರ್ಜಿ ಸಲ್ಲಿಸಿದ್ದಕ್ಕೆ ಸ್ಪಷ್ಟನೆ ಕೋರಿ ಸಚಿವಾಲಯ ಈ ಸಂಸ್ಥೆಗಳಿಗೆ ನೋಟಿಸ್ ನೀಡಿತ್ತು. "೧೦೩೪೩ ಸಂಸ್ಥೆಗಳಿಗೆ ನೀಡಿದ್ದ ನೋಟಿಸ್ ಗಳಲ್ಲಿ ಕೇಳ್ವಲ ೨೨೯ ಸಂಸ್ಥೆಗಳು ಉತ್ತರ ನೀಡಿದ್ದು, ಉಳಿದ ಸಂಸ್ಥೆಗಳಿಂದ ಯಾವುದೇ ಉತ್ತರ ಬಂದಿಲ್ಲವಾದ್ದರಿಂದ ಆ ಸಂಸ್ಥೆಗಳನ್ನು ಪರಿಶೀಲನೆಗೆ ಒಡ್ಡಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.

ವಿದೇಶಿ ಹಣ ಸ್ವೀಕರಿಸುವ ಎನ್ ಜಿ ಒ ಗಳು ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡಿರುವುದರಿಂದ ತಮ್ಮ ವಾರ್ಷಿಕ ವರದಿಯನ್ನು ಎಫ್ ಸಿ -೬ ಅರ್ಜಿಯ ಮೂಲಕ ಸಲ್ಲಿಸಬೇಕು. ಇದರ ಜೊತೆಗೆ ವಿತ್ತೀಯ ವರ್ಷ ಕಳೆದ ೯ ತಿಂಗಳೊಳಗೆ ಆದಾಯ ಮತ್ತು ಖರ್ಚಿನ ವರದಿಯನ್ನು ಸಲ್ಲಿಸಬೇಕು.

ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೀಡಿದ ಪರವಾನಗಿಯನ್ನು ರದ್ದುಪಡಿಸಿರುವ ಸಂಸ್ಥೆಗಳು ದೆಹಲಿ, ಮುಂಬೈ ಮತ್ತು ಆಂಧ್ರಪ್ರದೇಶಕ್ಕೆ ಸೇರಿದ್ದವು ಹಾಗೂ ೫೧೦ ಷೋ ಕಾಸ್ ನೋಟಿಸ್ ಗಳು ಹಿಂದಿರುಗಿವೆ ಎಂದು ಸಚಿವಾಲಯ ತಿಳಿಸಿದೆ.

ಮಾರ್ಚ್ ೧ ರಂದು ಗೃಹಸಚಿವಾಲಯ ಆಂದ್ರಪ್ರದೇಶದ ೧೧೪೨ ಎನ್ ಜಿ ಒ ಗಳು ನೋಟಿಸ್ ಗೆ ಉತ್ತರ ನೀಡಲು ಸಫಲವಾಗದೆ ಹೋದದ್ದರಿಂದ ಪರವಾನಡಿ ರದ್ದುಪಡಿಸಿತ್ತು.

ಈ ತಿಂಗಳ ಮೊದಲಭಾಗದಲ್ಲಿ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯ ಪರವಾನಗಿ ರದ್ದುಮಾಡಿ, ಅದರ ಬ್ಯಾಂಕ್ ಖಾತೆಗಳನ್ನೆಲ್ಲಾ ವಶಪಡಿಸಿಕೊಂಡಿತ್ತು. ವಿದೇಶಿ ಹಣವನ್ನು ದುರ್ಬಳಕೆ ಮಾಡಿ ದೇಶದ ಸಾರ್ವಜನಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಹಾಳುಗೆಡವುತ್ತಿರುವ ಆರೋಪವನ್ನು ಈ ಸಂಸ್ಥೆಯ ಮೇಲೆ ಹೇರಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT