ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

೮೯೭೫ ಎನ್ ಜಿ ಒ ಗಳ ಪರವಾನಗಿ ರದ್ದುಪಡಿಸಿದ ಗೃಹಸಚಿವಾಲಯ

ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ

ನವದೆಹಲಿ: ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ೮೯೭೫ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಒ) ಪರವಾನಗಿ ರದ್ದುಪಡಿಸಿದೆ.

೨೦೦೯-೨೦೧೦, ೨೦೧೦-೨೦೧೧ ಮತ್ತು ೨೦೧೧-೨೦೧೨ ರ ಸಮಯದಲ್ಲಿ ಈ ಸಂಸ್ಥೆಗಳು ಕಡ್ಡಾಯ ವಾರ್ಷಿಕ ಆದಾಯ ಅರ್ಜಿ ಎಫ್ ಸಿ-೬ ಸಲ್ಲಿಸಿಲ್ಲ ಎಂದು ದೂರಿ ಗೃಹ ಸಚಿವಾಲಯ ಈ ಸಂಸ್ಥೆಗಳ ಪರವಾನಗಿ ರದ್ದುಪಡಿಸಿದೆ.

ಕಳೆದ ಅಕ್ಟೋಬರ್ ನಲ್ಲಿ ರೆಟರ್ನ್ಸ್ ಅರ್ಜಿ ಸಲ್ಲಿಸಿದ್ದಕ್ಕೆ ಸ್ಪಷ್ಟನೆ ಕೋರಿ ಸಚಿವಾಲಯ ಈ ಸಂಸ್ಥೆಗಳಿಗೆ ನೋಟಿಸ್ ನೀಡಿತ್ತು. "೧೦೩೪೩ ಸಂಸ್ಥೆಗಳಿಗೆ ನೀಡಿದ್ದ ನೋಟಿಸ್ ಗಳಲ್ಲಿ ಕೇಳ್ವಲ ೨೨೯ ಸಂಸ್ಥೆಗಳು ಉತ್ತರ ನೀಡಿದ್ದು, ಉಳಿದ ಸಂಸ್ಥೆಗಳಿಂದ ಯಾವುದೇ ಉತ್ತರ ಬಂದಿಲ್ಲವಾದ್ದರಿಂದ ಆ ಸಂಸ್ಥೆಗಳನ್ನು ಪರಿಶೀಲನೆಗೆ ಒಡ್ಡಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.

ವಿದೇಶಿ ಹಣ ಸ್ವೀಕರಿಸುವ ಎನ್ ಜಿ ಒ ಗಳು ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡಿರುವುದರಿಂದ ತಮ್ಮ ವಾರ್ಷಿಕ ವರದಿಯನ್ನು ಎಫ್ ಸಿ -೬ ಅರ್ಜಿಯ ಮೂಲಕ ಸಲ್ಲಿಸಬೇಕು. ಇದರ ಜೊತೆಗೆ ವಿತ್ತೀಯ ವರ್ಷ ಕಳೆದ ೯ ತಿಂಗಳೊಳಗೆ ಆದಾಯ ಮತ್ತು ಖರ್ಚಿನ ವರದಿಯನ್ನು ಸಲ್ಲಿಸಬೇಕು.

ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೀಡಿದ ಪರವಾನಗಿಯನ್ನು ರದ್ದುಪಡಿಸಿರುವ ಸಂಸ್ಥೆಗಳು ದೆಹಲಿ, ಮುಂಬೈ ಮತ್ತು ಆಂಧ್ರಪ್ರದೇಶಕ್ಕೆ ಸೇರಿದ್ದವು ಹಾಗೂ ೫೧೦ ಷೋ ಕಾಸ್ ನೋಟಿಸ್ ಗಳು ಹಿಂದಿರುಗಿವೆ ಎಂದು ಸಚಿವಾಲಯ ತಿಳಿಸಿದೆ.

ಮಾರ್ಚ್ ೧ ರಂದು ಗೃಹಸಚಿವಾಲಯ ಆಂದ್ರಪ್ರದೇಶದ ೧೧೪೨ ಎನ್ ಜಿ ಒ ಗಳು ನೋಟಿಸ್ ಗೆ ಉತ್ತರ ನೀಡಲು ಸಫಲವಾಗದೆ ಹೋದದ್ದರಿಂದ ಪರವಾನಡಿ ರದ್ದುಪಡಿಸಿತ್ತು.

ಈ ತಿಂಗಳ ಮೊದಲಭಾಗದಲ್ಲಿ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯ ಪರವಾನಗಿ ರದ್ದುಮಾಡಿ, ಅದರ ಬ್ಯಾಂಕ್ ಖಾತೆಗಳನ್ನೆಲ್ಲಾ ವಶಪಡಿಸಿಕೊಂಡಿತ್ತು. ವಿದೇಶಿ ಹಣವನ್ನು ದುರ್ಬಳಕೆ ಮಾಡಿ ದೇಶದ ಸಾರ್ವಜನಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಹಾಳುಗೆಡವುತ್ತಿರುವ ಆರೋಪವನ್ನು ಈ ಸಂಸ್ಥೆಯ ಮೇಲೆ ಹೇರಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT