ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

೮೯೭೫ ಎನ್ ಜಿ ಒ ಗಳ ಪರವಾನಗಿ ರದ್ದುಪಡಿಸಿದ ಗೃಹಸಚಿವಾಲಯ

ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ

ನವದೆಹಲಿ: ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ೮೯೭೫ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಒ) ಪರವಾನಗಿ ರದ್ದುಪಡಿಸಿದೆ.

೨೦೦೯-೨೦೧೦, ೨೦೧೦-೨೦೧೧ ಮತ್ತು ೨೦೧೧-೨೦೧೨ ರ ಸಮಯದಲ್ಲಿ ಈ ಸಂಸ್ಥೆಗಳು ಕಡ್ಡಾಯ ವಾರ್ಷಿಕ ಆದಾಯ ಅರ್ಜಿ ಎಫ್ ಸಿ-೬ ಸಲ್ಲಿಸಿಲ್ಲ ಎಂದು ದೂರಿ ಗೃಹ ಸಚಿವಾಲಯ ಈ ಸಂಸ್ಥೆಗಳ ಪರವಾನಗಿ ರದ್ದುಪಡಿಸಿದೆ.

ಕಳೆದ ಅಕ್ಟೋಬರ್ ನಲ್ಲಿ ರೆಟರ್ನ್ಸ್ ಅರ್ಜಿ ಸಲ್ಲಿಸಿದ್ದಕ್ಕೆ ಸ್ಪಷ್ಟನೆ ಕೋರಿ ಸಚಿವಾಲಯ ಈ ಸಂಸ್ಥೆಗಳಿಗೆ ನೋಟಿಸ್ ನೀಡಿತ್ತು. "೧೦೩೪೩ ಸಂಸ್ಥೆಗಳಿಗೆ ನೀಡಿದ್ದ ನೋಟಿಸ್ ಗಳಲ್ಲಿ ಕೇಳ್ವಲ ೨೨೯ ಸಂಸ್ಥೆಗಳು ಉತ್ತರ ನೀಡಿದ್ದು, ಉಳಿದ ಸಂಸ್ಥೆಗಳಿಂದ ಯಾವುದೇ ಉತ್ತರ ಬಂದಿಲ್ಲವಾದ್ದರಿಂದ ಆ ಸಂಸ್ಥೆಗಳನ್ನು ಪರಿಶೀಲನೆಗೆ ಒಡ್ಡಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.

ವಿದೇಶಿ ಹಣ ಸ್ವೀಕರಿಸುವ ಎನ್ ಜಿ ಒ ಗಳು ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡಿರುವುದರಿಂದ ತಮ್ಮ ವಾರ್ಷಿಕ ವರದಿಯನ್ನು ಎಫ್ ಸಿ -೬ ಅರ್ಜಿಯ ಮೂಲಕ ಸಲ್ಲಿಸಬೇಕು. ಇದರ ಜೊತೆಗೆ ವಿತ್ತೀಯ ವರ್ಷ ಕಳೆದ ೯ ತಿಂಗಳೊಳಗೆ ಆದಾಯ ಮತ್ತು ಖರ್ಚಿನ ವರದಿಯನ್ನು ಸಲ್ಲಿಸಬೇಕು.

ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೀಡಿದ ಪರವಾನಗಿಯನ್ನು ರದ್ದುಪಡಿಸಿರುವ ಸಂಸ್ಥೆಗಳು ದೆಹಲಿ, ಮುಂಬೈ ಮತ್ತು ಆಂಧ್ರಪ್ರದೇಶಕ್ಕೆ ಸೇರಿದ್ದವು ಹಾಗೂ ೫೧೦ ಷೋ ಕಾಸ್ ನೋಟಿಸ್ ಗಳು ಹಿಂದಿರುಗಿವೆ ಎಂದು ಸಚಿವಾಲಯ ತಿಳಿಸಿದೆ.

ಮಾರ್ಚ್ ೧ ರಂದು ಗೃಹಸಚಿವಾಲಯ ಆಂದ್ರಪ್ರದೇಶದ ೧೧೪೨ ಎನ್ ಜಿ ಒ ಗಳು ನೋಟಿಸ್ ಗೆ ಉತ್ತರ ನೀಡಲು ಸಫಲವಾಗದೆ ಹೋದದ್ದರಿಂದ ಪರವಾನಡಿ ರದ್ದುಪಡಿಸಿತ್ತು.

ಈ ತಿಂಗಳ ಮೊದಲಭಾಗದಲ್ಲಿ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯ ಪರವಾನಗಿ ರದ್ದುಮಾಡಿ, ಅದರ ಬ್ಯಾಂಕ್ ಖಾತೆಗಳನ್ನೆಲ್ಲಾ ವಶಪಡಿಸಿಕೊಂಡಿತ್ತು. ವಿದೇಶಿ ಹಣವನ್ನು ದುರ್ಬಳಕೆ ಮಾಡಿ ದೇಶದ ಸಾರ್ವಜನಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಹಾಳುಗೆಡವುತ್ತಿರುವ ಆರೋಪವನ್ನು ಈ ಸಂಸ್ಥೆಯ ಮೇಲೆ ಹೇರಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT