ಪ್ರಧಾನ ಸುದ್ದಿ

ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ: ಸಂಸತ್ ಕಲಾಪ ವ್ಯರ್ಥವಾಗಿದ್ದಕ್ಕೆ ವಿಷಾದ

Lingaraj Badiger

ನವದೆಹಲಿ: ಯಾವುದೇ ಚರ್ಚೆ ಇಲ್ಲದೆ ಶೂನ್ಯ ಸಾಧನೆಯೊಂದಿಗೆ ಅಂತ್ಯಗೊಂಡ ಮುಂಗಾರು ಅಧಿವೇಶನದ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಹತ್ವದ ಚರ್ಚೆಗೆ ವೇದಿಕೆಯಾಗಬೇಕಿದ್ದ ಸಂಸತ್, ರಣರಂಗವಾಗಿ ಮಾರ್ಪಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

69ನೇ ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಪ್ರಜಾಪ್ರಭುತ್ವ ಸಂಸ್ಥೆಗಳು ಆತಂಕದಲ್ಲಿದ್ದು, ಜನರು ತಮ್ಮ ರಾಜಕೀಯ ಪಕ್ಷಗಳ ಬಗ್ಗೆ ಗಂಭೀರ ಚಿಂತನೆ ಮಾಡುವ ಸಮಯ ಇದು ಎಂದಿದ್ದಾರೆ.

ಗಡಿಯಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಣಬ್ ಮುಖರ್ಜಿ, ಭಾರತಕ್ಕೆ ಕೇಡು ತರುವಂಥ ಚಟುವಟಿಕೆಗಳು ಗಡಿಯಲ್ಲಿ ನಡೆಯುತ್ತಿಲ್ಲ ಎಂಬುದನ್ನು ನೆರೆ ರಾಷ್ಟ್ರಗಳು ಖಚಿತಪಡಿಸಬೇಕು ಎಂದರು.

ಭಾರತವನ್ನು ಉಗ್ರರು ಟಾರ್ಗೆಟ್ ಮಾಡಿದ್ದಾರೆ. ಭಯೋತ್ಪಾದನೆಗೆ ಯಾವುದೇ ಧರ್ಮ, ಸಿದ್ಧಾಂತಗಳ ಕಟ್ಟುಪಾಡುಗಳಿಲ್ಲ. ಹೀಗಾಗಿ ದೇಶಕ್ಕೆ ನುಸುಳುವ ಉಗ್ರರನ್ನು ತಡೆಯಲು ಶಕ್ತಿಯುತ ಅಸ್ತ್ರ ಬಳಸಲಾಗುವುದು ಎಂದು ಹೇಳಿದ್ದಾರೆ.

SCROLL FOR NEXT