ವಿವಾದಾತ್ಮ 'ಢುಂಢಿ' ಕಾದಂಬರಿಯ ಮುಖಪುಟ 
ಪ್ರಧಾನ ಸುದ್ದಿ

ಯೋಗೇಶ್ ಮಾಸ್ಟರ್ ಕೂಡ ಗುರಿಯಾಗಿದ್ದರೆ?

ವಿವಾದಾತ್ಮ 'ಢುಂಢಿ' ಕಾದಂಬರಿಯ ಲೇಖಕ ಯೋಗೇಶ್ ಮಾಸ್ಟರ್ ಕೂಡ ಮೂಲಭೂತವಾದಿಗಳ ಗುರಿಯಾಗಿದ್ದಾರೆ? ಲೇಖಕರೆ ಹೇಳುವ ಪ್ರಕಾರ ಹಿರಿಯ ಲೇಖಕ ಎಂ ಎಂ ಕಲ್ಬುರ್ಗಿ ಅವರನ್ನು

ಬೆಂಗಳೂರು: ವಿವಾದಾತ್ಮ 'ಢುಂಢಿ' ಕಾದಂಬರಿಯ ಲೇಖಕ ಯೋಗೀಶ್ ಮಾಸ್ಟರ್ ಕೂಡ ಮೂಲಭೂತವಾದಿಗಳ ಗುರಿಯಾಗಿದ್ದಾರೆ? ಲೇಖಕರೆ ಹೇಳುವ ಪ್ರಕಾರ ಹಿರಿಯ ಲೇಖಕ ಎಂ ಎಂ ಕಲ್ಬುರ್ಗಿ ಅವರನ್ನು ಭಾನುವಾರ ಗುಂಡಿಟ್ಟು ಕೊಲ್ಲುವುದಕ್ಕೂ ಎರಡು ವಾರದ ಮುಂಚಿತವಾಗಿ ಇಬ್ಬರು ಬಂಧೂಕುಧಾರಿಗಳು ಯೋಗೀಶ್ ಅವರ ಮನೆಗೆ ಹೋಗಿದ್ದರಂತೆ.

"ಇಬ್ಬರು ನಮ್ಮ ಮನೆ ಹೊಕ್ಕಲು ಪ್ರಯತ್ನಿಸಿದರು. ನನಗೆ ಸಂಶಯ ಮೂಡಿ ನಾನು ಬಾಗಿಲು ತೆರಯಲಿಲ್ಲ. ಈಗ ಅವರು ಕಲ್ಬುರ್ಗಿಯವರನ್ನು ಗುರಿಯಾಗಿಸಿ ಕೊಂದಿರುವುದು ದುರದೃಷ್ಟಕರ" ಎಂದು ಯೋಗೀಶ್ ಹೇಳಿದ್ದಾರೆ.

ಆದರೆ ಶಂಕಿತರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದಿರುವ ಅವರು, ಕಲ್ಬುರ್ಗಿಯವರ ಕೊಲೆಯ ನಂತರ ತಮ್ಮ ಮನೆಗೆ ಸರ್ಕಾರ ಪೊಲೀಸ್ ರಕ್ಷಣೆ ನೀಡಿದೆ ಎಂದು ತಿಳಿಸಿದ್ದಾರೆ.

"ಮೊದಲ ಬಾರಿಗೆ ಆಹ್ವಾನ ನಿಡುವ ನೆಪದಲ್ಲಿ ಬೈಕಿನ ಮೇಲೆ ಇಬ್ಬರು ಬಂದಿದ್ದರು. ಎರಡನೇ ಬಾರಿ ಬಂದಾಗ ಹಿರೇಮಠ್ ಪುಸ್ತಕ ಕಳುಹಿಸಿದ್ದಾರೆ ಎಂದು ಹೇಳಿಕೊಂಡು ಬಂದಿದ್ದರು" ಎಂದು ತಿಳಿಸಿದ ಅವರು ಯಾವ ಹಿರೇಮಠ್ ಎಂದು ಸ್ಪಷ್ಟವಾಗಲಿಲ್ಲ. ಅವರಲ್ಲಿ ಒಬ್ಬ ಮಂಜುನಾಥ್ ಬಿಜಾಪುರದ ನಿವಾಸಿ ಎಂದು ತಿಳಿಸಿದ. "ನಾನು ಒಳಗೆ ಕರೆದಾಗ ಅವನಿಗೆ ಭಯವಾಗಿತ್ತು. ಅವನು ಬೆವರುತ್ತಿದ್ದನ್ನು ನಾನು ಗಮನಿಸಿದೆ" ಎಂದು ಅವರು ಹೇಳಿದ್ದಾರೆ.

ಇದೇ ಜೋಡಿ ನಾಲ್ಕು ಬಾರಿಗೆ ಅವರ ಮನೆ ಹುಡುಕಿ ಬಂದಿದ್ದರಂತೆ. "ಒಮ್ಮೆ ನನ್ನ ಪತ್ನಿ ಮನೆ ಬಿಟ್ಟ ನಂತರ ಬಂದಿದ್ದರು. ಅವರಲ್ಲಿ ಒಬ್ಬ ಹೆಲ್ಮೆಟ್ ಧರಿಸಿದ್ದ. ಹಿಂದೆ ಕೂತಿದ್ದವ ಚಿನ್ನದ ಬಣ್ಣದ ವಿಗ್ ಧರಿಸಿದ್ದ ಮತ್ತು ಕೈನಲ್ಲಿ ಬಂಧೂಕು ಹಿಡಿದಿದ್ದ" ಎಂದು ತಿಳಿಸಿದ ಅವರು ಪೊಲೀಸರಿಗೂ ಇದರ ಬಗ್ಗೆ ತಿಳಿಸಿದ್ದೆ ಎಂದು ಕೂಡ ಹೇಳಿದ್ದಾರೆ.

ಇವರ ಢುಂಢಿ ಕಾದಂಬರಿ ಧಾರ್ಮಿಕ ಭಾವನೆಗಳಿಗೆ ಅಡ್ಡಿ ಮಾಡುತ್ತದೆ ಎಂದು ಕೆಲವು ಹಿಂದೂ ಸಂಘಟನೆಗಳು ಕೆಲವು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದವು. ಆಗ ಯೋಗೀಶ್ ಅವರನ್ನು ಪೊಲೀಸರು ಬಂಧಿಸಿದ್ದರು ಕೂಡ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT