ವಿವಾದಾತ್ಮ 'ಢುಂಢಿ' ಕಾದಂಬರಿಯ ಮುಖಪುಟ 
ಪ್ರಧಾನ ಸುದ್ದಿ

ಯೋಗೇಶ್ ಮಾಸ್ಟರ್ ಕೂಡ ಗುರಿಯಾಗಿದ್ದರೆ?

ವಿವಾದಾತ್ಮ 'ಢುಂಢಿ' ಕಾದಂಬರಿಯ ಲೇಖಕ ಯೋಗೇಶ್ ಮಾಸ್ಟರ್ ಕೂಡ ಮೂಲಭೂತವಾದಿಗಳ ಗುರಿಯಾಗಿದ್ದಾರೆ? ಲೇಖಕರೆ ಹೇಳುವ ಪ್ರಕಾರ ಹಿರಿಯ ಲೇಖಕ ಎಂ ಎಂ ಕಲ್ಬುರ್ಗಿ ಅವರನ್ನು

ಬೆಂಗಳೂರು: ವಿವಾದಾತ್ಮ 'ಢುಂಢಿ' ಕಾದಂಬರಿಯ ಲೇಖಕ ಯೋಗೀಶ್ ಮಾಸ್ಟರ್ ಕೂಡ ಮೂಲಭೂತವಾದಿಗಳ ಗುರಿಯಾಗಿದ್ದಾರೆ? ಲೇಖಕರೆ ಹೇಳುವ ಪ್ರಕಾರ ಹಿರಿಯ ಲೇಖಕ ಎಂ ಎಂ ಕಲ್ಬುರ್ಗಿ ಅವರನ್ನು ಭಾನುವಾರ ಗುಂಡಿಟ್ಟು ಕೊಲ್ಲುವುದಕ್ಕೂ ಎರಡು ವಾರದ ಮುಂಚಿತವಾಗಿ ಇಬ್ಬರು ಬಂಧೂಕುಧಾರಿಗಳು ಯೋಗೀಶ್ ಅವರ ಮನೆಗೆ ಹೋಗಿದ್ದರಂತೆ.

"ಇಬ್ಬರು ನಮ್ಮ ಮನೆ ಹೊಕ್ಕಲು ಪ್ರಯತ್ನಿಸಿದರು. ನನಗೆ ಸಂಶಯ ಮೂಡಿ ನಾನು ಬಾಗಿಲು ತೆರಯಲಿಲ್ಲ. ಈಗ ಅವರು ಕಲ್ಬುರ್ಗಿಯವರನ್ನು ಗುರಿಯಾಗಿಸಿ ಕೊಂದಿರುವುದು ದುರದೃಷ್ಟಕರ" ಎಂದು ಯೋಗೀಶ್ ಹೇಳಿದ್ದಾರೆ.

ಆದರೆ ಶಂಕಿತರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದಿರುವ ಅವರು, ಕಲ್ಬುರ್ಗಿಯವರ ಕೊಲೆಯ ನಂತರ ತಮ್ಮ ಮನೆಗೆ ಸರ್ಕಾರ ಪೊಲೀಸ್ ರಕ್ಷಣೆ ನೀಡಿದೆ ಎಂದು ತಿಳಿಸಿದ್ದಾರೆ.

"ಮೊದಲ ಬಾರಿಗೆ ಆಹ್ವಾನ ನಿಡುವ ನೆಪದಲ್ಲಿ ಬೈಕಿನ ಮೇಲೆ ಇಬ್ಬರು ಬಂದಿದ್ದರು. ಎರಡನೇ ಬಾರಿ ಬಂದಾಗ ಹಿರೇಮಠ್ ಪುಸ್ತಕ ಕಳುಹಿಸಿದ್ದಾರೆ ಎಂದು ಹೇಳಿಕೊಂಡು ಬಂದಿದ್ದರು" ಎಂದು ತಿಳಿಸಿದ ಅವರು ಯಾವ ಹಿರೇಮಠ್ ಎಂದು ಸ್ಪಷ್ಟವಾಗಲಿಲ್ಲ. ಅವರಲ್ಲಿ ಒಬ್ಬ ಮಂಜುನಾಥ್ ಬಿಜಾಪುರದ ನಿವಾಸಿ ಎಂದು ತಿಳಿಸಿದ. "ನಾನು ಒಳಗೆ ಕರೆದಾಗ ಅವನಿಗೆ ಭಯವಾಗಿತ್ತು. ಅವನು ಬೆವರುತ್ತಿದ್ದನ್ನು ನಾನು ಗಮನಿಸಿದೆ" ಎಂದು ಅವರು ಹೇಳಿದ್ದಾರೆ.

ಇದೇ ಜೋಡಿ ನಾಲ್ಕು ಬಾರಿಗೆ ಅವರ ಮನೆ ಹುಡುಕಿ ಬಂದಿದ್ದರಂತೆ. "ಒಮ್ಮೆ ನನ್ನ ಪತ್ನಿ ಮನೆ ಬಿಟ್ಟ ನಂತರ ಬಂದಿದ್ದರು. ಅವರಲ್ಲಿ ಒಬ್ಬ ಹೆಲ್ಮೆಟ್ ಧರಿಸಿದ್ದ. ಹಿಂದೆ ಕೂತಿದ್ದವ ಚಿನ್ನದ ಬಣ್ಣದ ವಿಗ್ ಧರಿಸಿದ್ದ ಮತ್ತು ಕೈನಲ್ಲಿ ಬಂಧೂಕು ಹಿಡಿದಿದ್ದ" ಎಂದು ತಿಳಿಸಿದ ಅವರು ಪೊಲೀಸರಿಗೂ ಇದರ ಬಗ್ಗೆ ತಿಳಿಸಿದ್ದೆ ಎಂದು ಕೂಡ ಹೇಳಿದ್ದಾರೆ.

ಇವರ ಢುಂಢಿ ಕಾದಂಬರಿ ಧಾರ್ಮಿಕ ಭಾವನೆಗಳಿಗೆ ಅಡ್ಡಿ ಮಾಡುತ್ತದೆ ಎಂದು ಕೆಲವು ಹಿಂದೂ ಸಂಘಟನೆಗಳು ಕೆಲವು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದವು. ಆಗ ಯೋಗೀಶ್ ಅವರನ್ನು ಪೊಲೀಸರು ಬಂಧಿಸಿದ್ದರು ಕೂಡ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT