ನಿರ್ಭಯಾ ಹೆತ್ತವರ ಅಳಲು... 
ಪ್ರಧಾನ ಸುದ್ದಿ

ಅಪರಾಧ ಗೆದ್ದಿತು; ನಾವು ಸೋತೆವು: ನಿರ್ಭಯಾ ಹೆತ್ತವರ ಅಳಲು

ಕೊನೆಗೂ ಅಪರಾಧವೇ ಗೆದ್ದಿತು, ನಾವು ಸೋತುಬಿಟ್ಟೆವು.'' ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ವಿಧಿಸಲು ಸಾಧ್ಯವಿಲ್ಲ...

ನವದೆಹಲಿ: ``ಕೊನೆಗೂ ಅಪರಾಧವೇ ಗೆದ್ದಿತು, ನಾವು ಸೋತುಬಿಟ್ಟೆವು.'' ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ವಿಧಿಸಲು ಸಾಧ್ಯವಿಲ್ಲ ಎಂಬ ದೆಹಲಿ ಹೈಕೋರ್ಟ್ ತೀರ್ಪಿಗೆ ನಿರ್ಭಯಾ ಹೆತ್ತವರು ನೀಡಿದ ನಿರಾಶಾದಾಯಕ ಪ್ರತಿಕ್ರಿಯೆಯಿದು. 
ನಮ್ಮ ಮೂರು ವರ್ಷಗಳ ಹೋರಾಟದ ಹೊರತಾಗಿಯೂ, ನಮ್ಮ ಸರ್ಕಾರ ಮತ್ತು ನ್ಯಾಯಾಲಯವು ಒಬ್ಬ ಅಪರಾಧಿಯನ್ನು ಬಿಡುಗಡೆ ಮಾಡಿತು. ನಮಗೆ ಖಂಡಿತಾ ನ್ಯಾಯ ಒದಗಿಸಲಾಗುವುದು ಎಂಬ ಆಶ್ವಾಸನೆ ನೀಡಲಾಗಿತ್ತು. ಆದರೆ, ಅದನ್ನು ಪೂರೈಸಲಿಲ್ಲ ಎಂದು ನಿರ್ಭಯಾಳ ತಾಯಿ ಆಶಾದೇವಿ ನೋವು ತೋಡಿಕೊಂಡರು. 
ಕೋರ್ಟ್ ಆದೇಶ ನೀಡುವಾಗ ಸಮಾಜದ ಹಿತದೃಷ್ಟಿ ಬಗ್ಗೆಯಾದರೂ ಯೋಚಿಸಬೇಕಿತ್ತು. ಭವಿಷ್ಯದಲ್ಲಿ ಯಾರೂ ಇಂತಹ ಅಪರಾಧ ಎಸಗದಂತೆ ಕಠಿಣ ನಿಲುವು ತಾಳಬಹುದಿತ್ತು ಎಂದು ನಿರ್ಭಯಾ ತಂದೆ ಹೇಳಿದರು. ಜತೆಗೆ, ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT