ಪ್ರಧಾನ ಸುದ್ದಿ

ಗುಜರಾತ್ ಧರ್ಮಾರ್ಥ ಆಸ್ಪತ್ರೆಯಲ್ಲಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ: ದೃಷ್ಟಿ ಕಳೆದುಕೊಂಡ ಏಳು ಮಂದಿ

Guruprasad Narayana

ನವದೆಹಲಿ: ಗುಜರಾತಿನ ರಾಜ್ಕೋಟ್ ನ ಧರ್ಮಾರ್ಥ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಪೊರೆ (ಕ್ಯಾಟರಾಕ್ಟ್) ತೆಗೆಸಿಕೊಳ್ಳುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಏಳು ಜನರು ದೃಷ್ಟಿ  ಕಳೆದುಕೊಂಡ ದುರ್ಘಟನೆ ನಡೆದಿದೆ.

ಈ ದುರ್ಘಟನೆಗೆ ಕಾರಣಗಳು ಇನ್ನೂ ತಿಳಿಯಬೇಕಿದೆ.

ಆಸ್ಪತ್ರೆಯ ಪರೀಕ್ಷಣಾ ಕೊಠಡಿ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಗೆ ಬೀಗ ಜಡಿಯಲಾಗಿದ್ದು, ಸೋಂಕು ತಗಲಿರುವ ಕಾರಣಗಳನ್ನು ತಿಳಿಯಲಾಗುತ್ತಿದೆ. ಮೂರು ದಿನಗಳ ನಂತರ ವರದಿ ದೊರಕಲಿದ್ದು, ನಂತರವಷ್ಟೇ ಈ ಶಸ್ತ್ರಚಿಕ್ತಿತ್ಸೆಯ ತೊಂದರೆಗೆ ಕಾರಣಗಳು ತಿಳಿಯಲಿವೆ ಎನ್ನಲಾಗಿದೆ.

SCROLL FOR NEXT