ಉಪೇಂದ್ರ ಕುಶ್ವಾಹಾ 
ಪ್ರಧಾನ ಸುದ್ದಿ

ಹಿಂದುತ್ವ , ಮತಾಂತರ ವಿವಾದ ಎನ್ ಡಿ ಎ ಭವಿಷ್ಯಕ್ಕೆ ಮಾರಕ

ಕೇಂದ್ರ ಸರ್ಕಾರ ಎದುರಿಸುತ್ತಿರುವ ಹಿಂದುತ್ವ ವಿವಾದ ಮತ್ತು ಮತಾಂತರ ವಿವಾದಗಳು ಎನ್ಡಿಎ ಭವಿಷ್ಯಕ್ಕೆ ಮಾರಕವಾಗಲಿದೆ...

ನವದೆಹಲಿ: ಕೇಂದ್ರ ಸರ್ಕಾರ ಎದುರಿಸುತ್ತಿರುವ ಹಿಂದುತ್ವ ವಿವಾದ ಮತ್ತು ಮತಾಂತರ ವಿವಾದಗಳು ಎನ್ಡಿಎ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಹೇಳಿದ್ದಾರೆ.

ಮತಾಂತರದ ಬಗ್ಗೆ ಯಾವುದೇ ಕಾನೂನು ಇರಲಿ, ನಾನದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ಕುಶ್ವಾಹಾ, ಇಂಥಾ ವಿಚಾರಗಳು ಸರ್ಕಾರವನ್ನು ಅಭಿವೃದ್ಧಿ ಪಥದಿಂದ ವಿಮುಖಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸಬೇಕಿದೆ. ಅಭಿವೃದ್ಧಿಯನ್ನು ಸಾಕಾರಗೊಳಿಸಲು ಪಕ್ಷದ  ಸದಸ್ಯರು ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಸಹಕರಿಸಬೇಕಿದೆ.

ಸಮಸ್ಯೆಯೊಂದನ್ನು ಎತ್ತಿ ತೋರಿಸಲು ವಿಪಕ್ಷಗಳಿಗೆ ಆಗಾಗ್ಗೆ ಅವಕಾಶವನ್ನು ನೀಡಬಾರದು. ನಮ್ಮ ಗಮನ ಯಾವತ್ತೂ ಅಭಿವೃದ್ಧಿಯತ್ತ ಮಾತ್ರ ಇರಬೇಕು ಎಂಬುದೇ ಪ್ರಧಾನಿ ಮೋದಿಯವರ ಬಯಕೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ಕುಶ್ವಾಹ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT