ವಿಡಿಯೋದ ಒಂದು ದೃಶ್ಯ 
ಪ್ರಧಾನ ಸುದ್ದಿ

೪ ವರ್ಷದ ಅಪ್ರಾಪ್ತನಿಗೆ ಮದ್ಯ ನೀಡಿದ ಯುವಕರು; ವಿಡಿಯೋ ಜಾಡು ಹಿಡಿದು ಇಬ್ಬರ ಬಂಧನ

ಯುವಕರ ಗುಂಪೊಂದು ೪ ವರ್ಷದ ಬಾಲಕನೋಬ್ಬನಿಗೆ ಮದ್ಯಪಾನ ಸೇವಿಸುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ

ತಿರುವಣ್ಣಾಮಲೈ: ಯುವಕರ ಗುಂಪೊಂದು ೪ ವರ್ಷದ ಬಾಲಕನೋಬ್ಬನಿಗೆ ಮದ್ಯಪಾನ ಸೇವಿಸುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ ಘಂಟೆಗಳಲ್ಲಿ ಕಾರ್ಯನಿರತರಾದ ತಿರುವಣ್ಣಾಮಲೈ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ, ಬಾಲಕನ ಮಾವನನ್ನು ಸೇರಿದಂತೆ ಇನ್ನೂ ನಾಲ್ವರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಒಂದು ನಿಮಿಷ ೩೭ ಸೆಕಂಡ್ ಗಳ ಈ ವಿಡಿಯೋ ವಾಟ್ಸ್ ಆಪ್, ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಟ್ವಿಟ್ಟರ್ ಗಳಲ್ಲಿ ಹರಿದಾಡುತ್ತಿತ್ತು. ಈ ವಿಡಿಯೋದಲ್ಲಿ ೬ ರಿಂದ ಏಳು ಜನರ ಗುಂಪು ನಾಲ್ಕು ವರ್ಷದ ಬಾಲಕನಿಗೆ ಪ್ಲಾಸ್ಟಿಕ್ ಲೋಟದಿಂದ ಬಿಯರ್ ಕುಡಿಯುವಂತೆ ಮಾಡಿ ನಗಾಡುತ್ತಿದ್ದ ಆಘಾತಕಾರಿ ಘಟನೆ ದಾಖಲಾಗಿತ್ತು.

ಬಾಲಕ ಬಿಯರ್ ಕುಡಿಯುತ್ತಿದ್ದಂತೆ ಅವನ ಸುತ್ತ ನೆರೆದಿದ್ದ ಈ ಯುವಕರು ಗಹಗಹಿಸಿ ನಗುತ್ತ ಇನ್ನು ಹೆಚ್ಚು ಕುಡಿಯುವಂತೆ ಪುಸಲಾಯಿಸುತ್ತಿದ್ದರು. ಬಾಲಕ ಕುಡಿಯಲಾಗುವುದಿಲ್ಲ ಎಂದು ಸನ್ನೆ ಮಾಡಿದ್ದರೂ ಕುಡಿಯುವಂತೆ ಪ್ರೇರೇಪಿಸಿದ್ದರು ಈ ಯುವಕರು.

ಈ ವಿಡಿಯೋ ಹರಡುತ್ತಿದ್ದಂತೆ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿಡಿಯೋದಲ್ಲಿ ಕಂಡ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಜಾಡು ಹಿಡಿದು ಆ ಯುವಕರಲ್ಲಿ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಬಂಧಿತರಾದ ಏಳುಮಲೈ(೨೩) ಮತ್ತು ಪ್ರೇಮಕುಮಾರ್(೨೨) ತಮ್ಮ ಗ್ರಾಮದ ಬಳಿಯಿರುವ ಕೆರೆಯ ಬಳಿ ಈ ಘಟನೆ ನಡೆದಿದ್ದು ಎಂದು ಒಪ್ಪಿಕೊಂಡಿದ್ದಾರೆ.

ಮುರುಗನ್ ಎಂಬುವವನ ಸೋದರ ಅಳಿಯ ಈ ಬಾಲಕ. ಮುರುಗನ್ ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ತೆರಳುವಾಗ ಈ ಬಾಲಕನ್ನನ್ನು ಕರೆದೊಯ್ದು, ಆಟದ ನಂತರ ಗೆಳೆಯರೊಂದಿಗೆ ಮದ್ಯ ಸೇವಿಸಿ ಬಾಲಕನಿಗೂ ಮದ್ಯ ಸೇವಿಸುವಂತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ