ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ಪ್ರತಿಭಟಿಸಿ ಘೋಷಣೆ ಕೂಗುತ್ತಿರುವ ಎಸ್ ಡಿಪಿಐ ಕಾರ್ಯಕರ್ತರು (ಕೃಪೆ: ಎಪಿ ಫೋಟೋ) 
ಪ್ರಧಾನ ಸುದ್ದಿ

ಯಾಕೂಬ್ ಮೆಮನ್ ಕುಣಿಕೆಯ ಹಾದಿ

22 ವರ್ಷಗಳ ಕಾನೂನು ಪ್ರಕ್ರಿಯೆಗಳ ನಂತರ ಕೊನೆಗೂ 1993 ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ಗೆ ಗಲ್ಲು...

22 ವರ್ಷಗಳ ಕಾನೂನು ಪ್ರಕ್ರಿಯೆಗಳ ನಂತರ ಕೊನೆಗೂ 1993 ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ತನ್ನ 54 ನೇ ಹುಟ್ಟುಹಬ್ಬದಂದೇ ಯೂಕೂಬ್ ಗಲ್ಲಿಗೇರಿದ್ದಾನೆ.

ಯಾಕೂಬ್ ಮೆಮನ್‌ನ ಕುಣಿಕೆಯ ಹಾದಿ...

1993 ಮಾರ್ಚ್  12: ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ. 13 ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು 277 ಮಂದಿ ಸಾವಿಗೀಡಾಗಿದ್ದರು. 713 ಮಂದಿಗೆ ಗಾಯಗಳಾಗಿತ್ತು.

ನವೆಂಬರ್ 4 : ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ 189 ಜನರ ವಿರುದ್ಧ 10,000 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಯಿತು. ನವೆಂಬರ್ 19 ರಂದು ಕೇಸು ಸಿಬಿಐ ವಗೆ ಹಸ್ತಾಂತರಿಸಲಾಯಿತು

1995 ಏಪ್ರಿಲ್ 10
: 26 ಆರೋಪಿಗಳನ್ನು ಟಾಡಾ ಕೋರ್ಟ್ ಆರೋಪ ಮುಕ್ತಗೊಳಿಸಿತು,   

ಏಪ್ರಿಲ್ 19: ವಿಚಾರಣೆ ಆರಂಭ

ಅಕ್ಟೋಬರ್ 14 :  ಸಂಜಯ್ ದತ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು

ಮಾರ್ಚ್ 29  :
ಪಿ.ಡಿ ಕೋಡೆ ಟಾಡಾ ಕೋರ್ಟ್‌ನ ವಿಶೇಷ ನ್ಯಾಯಾಧೀಶರಾಗಿ ನೇಮಕಗೊಂಡರು

2000 ಅಕ್ಟೋಬರ್ : 684 ರಂದು ಸಾಕ್ಷಿಗಳ ವಿಚಾರಣೆ ಮುಕ್ತಾಯವಾಯಿತು

2003 ಸಪ್ಟೆಂಬರ್ : ಪ್ರಕರಣದ ವಿಚಾರಣೆ ಮುಗಿಯಿತು. ಶಿಕ್ಷೆ ಪ್ರಕಟಣೆ ಮುಂದೂಡಲಾಯಿತು

2006 ಜೂನ್ 13
: ಮಾಫಿಯಾ ದೊರೆ ಅಬು ಸಲೇಂ ಬಗ್ಗೆ ತನಿಖೆ ಆರಂಭ

ಸಪ್ಟೆಂಬರ್ 12 : ಯಾಕೂಬ್ ಮೆಮನ್ ಸೇರಿಂದತೆ  12 ಜನರಿಗೆ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತು. 20 ಜನರಿಗೆ ಜೀವಾವಧಿ ಶಿಕ್ಷೆ. ಮೆಮನ್ ಕುಟುಂಬದ ನಾಲ್ವರು ದೋಷಿಗಳೆಂದು ನ್ಯಾಯಾಲಯ ತೀರ್ಪು ಪ್ರಕಟಿಸಿತು. ಮೂವರನ್ನು ಆರೋಪ ಮುಕ್ತಗೊಳಿಸಿತು.

2013 ಮಾರ್ಚ್ 21: ಯಾಕೂಬ್ ಮೆಮನ್‌ನ ಗಲ್ಲುಶಿಕ್ಷೆಗೆ ಸುಪ್ರೀಂ ಅಸ್ತು. 10 ಜನರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ತೀರ್ಪು ಪ್ರಕಟಿಸಲಾಯಿತು.

ಜುಲೈ 30: ಮೆಮನ್‌ನ ಪುನರ್‌ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.

2014 ಏಪ್ರಿಲ್ 11:
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ತಳ್ಳಿದರು.
ಜೂನ್ 2: ಮೆಮನ್  ಮೇಲ್ಮನವಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಗೆ ತಡೆಯೊಡ್ಡಿತು.

2015 ಏಪ್ರಿಲ್ 9 : ಮೆಮನ್ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತು

ಜುಲೈ 21:  ಗಲ್ಲುಶಿಕ್ಷೆ ರದ್ದತಿಗೆ ಸಲ್ಲಿಸಿದ ಅರ್ಜಿ ವಜಾ
ಜುಲೈ 23 : ಜುಲೈ 30ನೇ ತಾರೀಖಿಗೆ ಗಲ್ಲಿಗೇರಿಸಬಾರದು ಎಂಬ ಅರ್ಜಿಯನ್ನು ಮೆಮನ್  ಸುಪ್ರೀಂಕೋರ್ಟ್‌ಗೆ ಸಲ್ಲಿಸಿದರು .
ಜುಲೈ 28 :ಗಲ್ಲು ಶಿಕ್ಷೆ ಬಗ್ಗೆ ನ್ಯಾಯಪೀಠದಲ್ಲಿ ಭಿನ್ನಾಭಿಪ್ರಾಯವೆದ್ದಿತು

ಜುಲೈ 29:  ಮುಖ್ಯ ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠ ಮೆಮನ್ ಅರ್ಜಿಯನ್ನು ತಳ್ಳಿ ಹಾಕಿತು.  ಮಹಾರಾಷ್ಟ್ರ ಗವರ್ನರ್ ಮತ್ತು ರಾಷ್ಟ್ರಪತಿ ಮೆಮನ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು.

ಜುಲೈ 30: ಮುಂಜಾನೆ 3 ಗಂಟೆಗೆ ಮೆಮನ್ ಅರ್ಜಿಯನ್ನು ತಿರಸ್ಕರಿಸಿ ಗಲ್ಲು ಶಿಕ್ಷೆಗೆ ಆಜ್ಞೆ ನೀಡಲಾಯಿತು.

ಜುಲೈ 30:
ಮುಂಜಾನೆ 6.30ಕ್ಕೆ ಮೆಮನ್‌ಗೆ ಗಲ್ಲಿಗೇರಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT