ಭಾರತೀಯ ರೈಲ್ವೇ (ಕೃಪೆ : ರಾಯಿಟರ್ಸ್) 
ಪ್ರಧಾನ ಸುದ್ದಿ

ರೈಲ್ವೇ ಸೇವೆ ಖಾಸಗಿ ವಲಯಕ್ಕೆ ಸೇರಿಸುವಂತೆ ಶಿಫಾರಸು?

ಸರಕು ಸಾಗಾಣಿಕೆ ರೈಲಿನ ನಂತರ ಪ್ಯಾಸೆಂಜರ್ (ಪ್ರಯಾಣಿಕ) ರೈಲು ಸೇವೆಗಳನ್ನು ಖಾಸಗಿ ವಲಯಕ್ಕೆ ಸೇರಿಸಬೇಕೆಂದು ಬಿಬೇಕ್ ...

ನವದೆಹಲಿ: ಸರಕು ಸಾಗಾಣಿಕೆ ರೈಲಿನ ನಂತರ ಪ್ಯಾಸೆಂಜರ್ (ಪ್ರಯಾಣಿಕ) ರೈಲು ಸೇವೆಗಳನ್ನು ಖಾಸಗಿ ವಲಯಕ್ಕೆ ಸೇರಿಸಬೇಕೆಂದು ಬಿಬೇಕ್ ದೆಬ್ರೋಯ್ ನೇತೃತ್ವದ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಭಾರತೀಯ ರೇಲ್ವೆಯಲ್ಲಿ ಸಮಯಾನುಸಾರವಾಗಿ ಬದಲಾವಣೆಗಳನ್ನು ತರುವ ಬಗ್ಗೆ ನಿರ್ದೇಶನ ನೀಡುವ ಸಮಿತಿಯೇ ಖಾಸಗಿ ವಲಯಕ್ಕೆ ಸೇರಿಸುವ ಬಗ್ಗೆ ಶಿಫಾರಸು ಮಾಡಿದೆ.

ಪ್ರಯಾಣಿಕ ರೈಲು ಸಂಚಾರವನ್ನು ಖಾಸಗಿ ಕಂಪನಿಗಳು ನಡೆಸುವುದಾದರೆ ಅದಕ್ಕೆ ಒಪ್ಪಿಗೆ ನೀಡಬೇಕು ಎಂಬುದಾಗಿದೆ ದೆಬ್ರೋಯ್ ಸಮಿತಿಯ ಶಿಫಾರಸು. ಈ ಶಿಫಾರಸು ಒಪ್ಪಿಕೊಂಡರೆ ಟಾಟಾ ಅಥವಾ ಬಿರ್ಲಾ ಸೇರಿದಂತೆ ಪ್ರಧಾನ ಖಾಸಗಿ ಕಂಪನಿಗಳು ರೈಲು ಸಂಚಾರ ಆರಂಭಿಸಬಹುದಾಗಿದೆ. ಆದರೆ ರೈಲ್ವೆಯನ್ನೇ ಖಾಸಗೀಕರಣಗೊಳಿಸಬೇಕೆಂದು ಸಮಿತಿ ಹೇಳಲಿಲ್ಲ.  

ಒಂದು ವೇಳೆ ಈ ಶಿಫಾರಸನ್ನು ಸರ್ಕಾರ ಒಪ್ಪಕೊಂಡರೆ ರೈಲ್ವೇ ವಲಯದಲ್ಲಿ ಭಾರೀ ಬದಲಾವಣೆಗಳು ಉಂಟಾಗಲಿವೆ.

ಅದೇ ವೇಳೆ ರೇಲ್ವೇ ಸೇವೆಗಳ ಜತೆ ರೈಲ್ವೇಗಾಗಿ ಕಾರ್ಯವೆಸಗುವ ಶಾಲೆ, ಆಸ್ಪತ್ರೆ, ಕೆಟರಿಂಗ್  ಸೇವೆಗಳಲ್ಲಿ ಬದಲಾವಣೆ ಇಲ್ಲವೇ ಅವುಗಳು ನಿರ್ಬಂಧಕ್ಕೊಳಗಾಗುವ ಸಾಧ್ಯತೆಗಳೂ ಇರುತ್ತವೆ. ಮಾತ್ರವಲ್ಲದೆ ರೈಲ್ವೇಯನ್ನು ವಿವಿಧ ಬ್ಯುಸಿನೆಸ್ ಯುನಿಟ್‌ಗಳಾಗಿ ವಿಭಜಿಸುವ ಬಗ್ಗೆಯೂ ಶಿಫಾರಸು ಇದೆ.

ಪ್ರಸ್ತುತ ಸಮಿತಿ, ಈ ಎಲ್ಲ ಶಿಫಾರಸುಗಳನ್ನು ಇಂದು ಸರ್ಕಾರದ ಮುಂದಿಡಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT