ಪ್ರಧಾನ ಸುದ್ದಿ

ಮುಂಬೈನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ ನರೇಂದ್ರ ಮೋದಿ ಸಹೋದರ

Guruprasad Narayana

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ತಮ್ಮ ಪ್ರಹ್ಲಾದ ಮೋದಿ, ಸಾರ್ವಜನಿಕ ವಿತರಣಾ ಯೋಜನೆ ನೀತಿಯ ವಿರುದ್ಧ ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಖಿಲ ಬಾರತ ನ್ಯಾಯ ಬೆಲೆ ಅಂಗಡಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಪ್ರಹ್ಲಾದ ಮೋದಿ, ಸೋಮವಾರ ಆಜಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಹಾಗೂ ಮಾರ್ಚ್ ೧೭ ರಂದು ಈ ಪ್ರತಿಭಟನೆಯನ್ನು ದೆಹಲಿಯ ಜಂತರ್ ಮಂತರ್ ಗೆ ಕೊಂಡೊಯ್ಯುವುದಾಗಿ ಕೂಡ ತಿಳಿಸಿದ್ದಾರೆ.

"ಸುಮಾರು ೭೫ ಸಾವಿರ ರೇಶನ್ ವಿತರಕರು ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಆದುದರಿಂದಲೇ ೮೦ ರಲ್ಲಿ ೭೩ ಸ್ಥಾನಗಳನ್ನು ಬಿಜೆಪಿ ಗೆದ್ದದ್ದು. ಆದರೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ವಿರುದ್ಧ ಕೆಲಸ ಮಾಡಿದ್ದರಿಂದ ೭೦ ಕ್ಷೇತ್ರಗಲ್ಲಿ ಬರಿ ೩ ಸ್ಥಾನಗಳನ್ನು ಉಳಿಸಿಕೊಂಡರು. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಪುರೈಸದೆ ಹೋದರೆ, ಬಿಜೆಪಿ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಚುನಾವಣೆಗಳಲ್ಲಿ ಸೋಲನುಭವಿಸಲಿದೆ" ಎಂದಿದ್ದಾರೆ ಪ್ರಧಾನಿ ಅವರ ಸಹೋದರ.

SCROLL FOR NEXT