ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ 
ಪ್ರಧಾನ ಸುದ್ದಿ

ರೇಪ್ ಆರೋಪಿಗೆ ಥಳಿತ, ಜನರ ಆಕ್ರೋಶವನ್ನು ತೋರಿಸುತ್ತದೆ: ಶಿವಸೇನಾ

ದಿಮಾಪುರದಲ್ಲಿ ರೇಪ್ ಆರೋಪಿಗೆ ಜನರು ಮನಬಂದಂತೆ ಥಳಿಸಿರುವ ಪ್ರಕರಣದ ವರದಿಯನ್ನು ಕೇಂದ್ರ ಸರ್ಕಾರವೂ ಕೇಳಿದೆ, ಅದರ ಮೈತ್ರಿ ಪಕ್ಷ ಶಿವಸೇನೆ

ಮುಂಬೈ: ದಿಮಾಪುರದಲ್ಲಿ ರೇಪ್ ಆರೋಪಿಗೆ ಜನರು ಮನಬಂದಂತೆ ಥಳಿಸಿರುವ ಪ್ರಕರಣದ ವರದಿಯನ್ನು ಕೇಂದ್ರ ಸರ್ಕಾರವೂ ಕೇಳಿದೆ, ಅದರ ಮೈತ್ರಿ ಪಕ್ಷ ಶಿವಸೇನೆ ಜನರ ಗುಂಪು ನಡೆಸಿದ ಈ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ. ಮಹಿಳೆಯರ ವಿರುದ್ಧದ ಲೈಂಗಿಕ ಅಪರಾಧಗಳ ಮೇಲೆ ಜನಕ್ಕಿರುವ ಆಕ್ರೋಶವನ್ನು ಇದು ತೋರಿಸುತ್ತದೆ ಎಂದಿದೆ.

ಡಿಸೆಂಬರ್ ೧೬ ರಂದು ನಡೆದ ದೆಹಲಿ ಗ್ಯಾಂಗ್ ರೇಪ್ ತಪ್ಪಿತಸ್ಥರಿಗೂ ನಾಗಲ್ಯಾಂಡ್ ನಲ್ಲಿ ನಡೆದ ಹಾಗೇ ಆಗಬೇಕಿತ್ತು ಎಂದಿದೆ ಶಿವಸೇನೆ.

"ಬಾಂಗ್ಲಾದೇಶದಿಂದ ಅನಧಿಕೃತವಾಗಿ ಭಾರತಕ್ಕೆ ನುಸುಳುತ್ತಿರುವವರ ವಿರುದ್ಧ ಮೊದಲಿನಿಂದಲೂ ನಾಗಾಲ್ಯಾಂಡಿನ ಜನ ಪ್ರತಿಭಟಿಸುತ್ತಿದ್ದಾರೆ. ಆದರೆ ಅವರ ಪ್ರತಿಭಟನೆಯನ್ನು ನಿರ್ಲ್ಯಕ್ಷಿಸಲಾಗಿತ್ತು. ಇಂತಹ ಪ್ರತಿಭಟನೆಗಳ ನಡುವೆ ಈ ರೇಪ್ ಘಟನೆ ನಡೆದಿದ್ದು ಜನರು ತಮ್ಮ ಶಾಂತಿಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಲೈಂಗಿಕ ಅಪರಾಧಗಳು ಹೆಚ್ಚುತ್ತಿರುವುದರ ವಿರುದ್ಧ ಜನರ ಆಕ್ರೋಶ ಇದು" ಎಂದು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ನುಡಿಯಲಾಗಿದೆ.

ಮಹಿಳೆಯರ ವಿರುದ್ಧದ ಲೈಂಗಿಕ ಅಪರಾಧಗಳ ವಿರುದ್ಧ ಕಣ್ಣು ಕೂಡ ಮಿಟುಕಿಸದ ಸರ್ಕಾರ ಈ ಪ್ರಕರಣವನ್ನು ಕಾನೂನು ಸುವ್ಯವಸ್ಥೆಯ ಸೋಲು ಎಂದು ಬಣ್ಣಿಸುವುದು ಅಪಹಾಸ್ಯ ಎಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT