ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ತಮಿಳರಿಗೆ ಜಾಗ ಹಿಂದಿರುಗಿಸಲು ಮುಂದಾದ ಲಂಕಾ

ಪೂರ್ವ ಪ್ರಾಂತ್ಯದ ಸಂಪುರದಲ್ಲಿ ತಮಿಳು ರೈತರಿಗೆ ೧೦೫೨ ಎಕರೆ ಜಮೀನನ್ನು ಹಿಂದಿರುಗಿಸಲು ಮೈತ್ರಿಪಾಲ ಸಿರಿಸೇನ ಅವರ ಸರ್ಕಾರ

ಕೊಲೊಂಬೋ: ಪೂರ್ವ ಪ್ರಾಂತ್ಯದ ಸಂಪುರದಲ್ಲಿ ತಮಿಳು ರೈತರಿಗೆ ೧೦೫೨ ಎಕರೆ ಜಮೀನನ್ನು ಹಿಂದಿರುಗಿಸಲು ಮೈತ್ರಿಪಾಲ ಸಿರಿಸೇನ ಅವರ ಸರ್ಕಾರ ಚಾಲನೆ ನಿಡಿದೆ. ಏಪ್ರಿಲ್ ಕೊನೆಯ ವಾರದ ವೇಳೆಗೆ ಈ ಯೋಜನೆ ಪೂರ್ಣಗೊಳ್ಳಲಿದ್ದು ಇದು ತಮಿಳು ಹೊಸ ವರ್ಷದ ಕೊಡುಗೆಯಾಗಲಿದೆ. ಈ ೧೦೫೨ ಎಕರೆಗಳಲ್ಲಿ ಶ್ರೀಲಂಕಾ ನೌಕಾದಳ ಹೊಂದಿರುವ ೨೩೪ ಎಕರೆ ಕೂಡ ಸೇರಿಕೊಂಡಿದೆ.

ಆಗಸ್ಟ್ ೨೦೦೬ ರಲ್ಲಿ ತಮಿಳು ಸ್ವಾತಂತ್ರ್ಯ ಹೋರಾಟಗಾರರ ಜೊತೆ ನಡೆದ ಯುದ್ಧದ ವೇಳೆಯಲ್ಲಿ ಈ ಜಾಗವನ್ನು ಶ್ರೀಲಂಕಾ ಸೇನೆ ವಶಪಡಿಸಿಕೊಂಡಿತ್ತು.

ಎಲ್ ಟಿ ಟಿ ಇ ವಿರುದ್ಧದ ಈ ಯುದ್ಧದಲ್ಲಿ ಶ್ರೀಲಂಕಾ ಸೇನೆ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆಯಲ್ಲಿ ೮೨೫ ಕುಟುಂಬಗಳು ಸಂಪುರದಿಂದ ಓಡಿ ಹೋಗಿದ್ದವು. ೨೦೦೭ ರಲ್ಲಿ ಈ ಯುದ್ಧ ಮುಗಿದ ನಂತರವೂ ತಮ್ಮ ಜಮೀನನ್ನು ವಾಪಸ್ ಪಡೆಯಲು ಈ ಕುಟುಂಬಗಳು ವಿಫಲವಾಗಿದ್ದವು. ಇದು ಏಕೆಂದರೆ ಸಂಪುರ್ ಅನ್ನು ಅತಿ ಹೆಚ್ಚಿನ ಭದ್ರತಾ ಪ್ರದೇಶ ಎಂದು ಘೋಷಿಸಲಾಗಿತ್ತು. ಇದು ತ್ರಿಂಕೊಮಾಲೇ ನೌಕಾ ಯಾನದ ಎದುರಿಗೇ ಇದ್ದ ಪ್ರದೇಶವಾಗಿತ್ತು.

ಸಂಪುರದಿಂದ ಓಡಿಹೋಗಿದ್ದ ಕುಟುಂಬ ಸದಸ್ಯರನ್ನು ನಿರಾಶ್ರಿತರ ಶಿಬಿರದಲ್ಲಿ  ಇರಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT