ಗಲಭೆಗೆ ಒಳಗಾಗಿರುವ ಯೆಮನ್ 
ಪ್ರಧಾನ ಸುದ್ದಿ

ಯೆಮನ್ ನಿಂದ ರಕ್ಷಣೆಗೊಳಗಾದ ೩೪೯ ಭಾರತೀಯರು ಜಿಬೂಟಿಗೆ ಆಗಮನ

ಯುದ್ಧದ ಗಲಭೆಗೆ ಒಳಗಾಗಿರುವ ಯೆಮನ್ ನ ಆಡೆನ್ ನಗರದಿಂದ ಕಳೆದ ರಾತ್ರಿ ಭಾರತೀಯ ಯುದ್ಧ ನೌಕೆ ರಕ್ಷಿಸಿರುವ ೩೪೯ ಜನ ಭಾರತೀಯರು ಇಂದು

ನವದೆಹಲಿ: ಯುದ್ಧದ ಗಲಭೆಗೆ ಒಳಗಾಗಿರುವ ಯೆಮನ್ ನ ಆಡೆನ್ ನಗರದಿಂದ ಕಳೆದ ರಾತ್ರಿ ಭಾರತೀಯ ಯುದ್ಧ ನೌಕೆ ರಕ್ಷಿಸಿರುವ ೩೪೯ ಜನ ಭಾರತೀಯರು ಇಂದು ಜಿಬೂಟಿಗೆ ಬಂದಿಳಿದಿದ್ದು, ಶೀಘ್ರದಲ್ಲೆ ಮುಂಬೈಗೆ ಹಾರಲಿದ್ದಾರೆ.

ಐ ಎನ್ ಎಸ ಸುಮಿತ್ರಾ ಹಡಗಿಗೆ ಆಡೆನ್ ಬಂದರಿಗೆ ತೆರಳುವ ಅನುಮತಿ ಸಿಕ್ಕ ಕೂಡಲೆ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿ ೩೪೯ ಭಾರತೀಯರನ್ನು ರಕ್ಷಿಸಲಾಗಿದೆ. ಯೆಮನ್ ನಲ್ಲಿ ಸಿಲುಕಿರುವ ೪೦೦೦ ಭಾರತೀಯರನ್ನು ರಕ್ಷಿಸಲು ವೈಮಾನಿಕ ಮತ್ತು ಸಮುದ್ರದ ಮೂಲಕ ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ಭಾರತ ಕೈಗೊಂಡಿದೆ. ಇದನ್ನು 'ಆಪರೇಶನ್ ರಾಹತ್' ಎಂದು ಹೆಸರಿಸಲಾಗಿದೆ.

ಆಡೆನ್ ಗಲ್ಫ್ ನಲ್ಲಿ ಕಡಲ್ಗಳ್ಳರ ಪರಿವೀಕ್ಷಣೆಗೆ ಇರಿಸಲಾಗಿರುವ ಐ ಎನ್ ಎಸ್ ಸುಮಿತ್ರ ಹಡಗು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಮೊದಲ ಹಡಗು.

೩೪೯ ಜನರು ಈಗ ಸುರಕ್ಷಿತವಾಗಿ ಜೆಬೂಟಿಯಲ್ಲಿ ಇಳಿದಿರುವ ಹಿನ್ನಲೆಯಲ್ಲಿ, ಐ ಎನ್ ಎಸ್ ಸುಮಿತ್ರ ಮತ್ತೆ ಆಡೆನ್ ಬಂದರಿಗೆ ಹಿಂದಿರುಗಲಿದೆ. ವೈಮಾನಿಕ ದಾಳಿಯಿಂದ ಯುದ್ಧದ ತೀವ್ರತೆ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆಯಾಗಿದ್ದು, ಸ್ವಲ್ಪ ತಡವಾಗುತ್ತಿದೆ ಎನ್ನಲಾಗಿದೆ.

ಹಡಗು ಜಿಬೂಟಿ ತಲುಪಿರುವ ಹಿನ್ನಲೆಯಲ್ಲಿ ರಕ್ಷಣೆಯ ಉಸ್ತುವಾರಿ ಹೊತ್ತಿರುವ ರಕ್ಷಣಾ ಸಚಿವಾಲಯದ ರಾಜ್ಯ ಮಂತ್ರಿ ವಿ ಕೆ ಸಿಂಗ್ ರಕ್ಷಣೆಗೊಳಗಾದ ಭಾರತೀಯರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

ಪ್ರಾಣ ಉಳಿಸಿದ ಹೀರೋಗೆ ಪ್ರವಾಹವೇ ಕಂಟಕ: ತನ್ನ ಲೈಫ್ ಜಾಕೆಟ್ ಕೊಟ್ಟು ಜೀವ ರಕ್ಷಿಸಿದ ತರಬೇತುದಾರನ ದುರಂತ ಸಾವು!

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

'ಸಾವು ಉತ್ತಮ': ಉದಯನಿಧಿ ಸ್ಟಾಲಿನ್ ಬಂಧನ ಬೆನ್ನಲ್ಲೇ ನಟಿ nivetha pethuraj ಪೋಸ್ಟ್ ವೈರಲ್!