ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಮಹಾರಾಷ್ಟ್ರ ಎ ಟಿ ಎಸ್ ನಿಂದ ಇಬ್ಬರು ಮಾವೋವಾದಿ ಮುಖಂಡರ ಬಂಧನ

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ ಟಿ ಎಸ್) ಪುಣೆಯ ಹೊರವಲಯದ ಆಸ್ಪತ್ರೆಯಿಂದ ಇಬ್ಬರು ಪ್ರಮುಖ ಮಾವೋವಾದಿ ಮುಖಂಡರನ್ನು ಸೆರೆಹಿಡಿದಿದೆ

ಪುಣೆ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ ಟಿ ಎಸ್) ಪುಣೆಯ ಹೊರವಲಯದ ಆಸ್ಪತ್ರೆಯಿಂದ ಇಬ್ಬರು ಪ್ರಮುಖ ಮಾವೋವಾದಿ ಮುಖಂಡರನ್ನು ಸೆರೆಹಿಡಿದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇವರಿಬ್ಬರನ್ನು ಕೇರಳದ ಎರ್ನಾಕುಲಂ ಮೂಲದ ಕೆ ಮುರಳೀಧರನ್(೬೨) ಅಲಿಯಾಸ್ ಥಾಮಸ್ ಜೋಸೆಫ್ ಮತ್ತು ಮಾಲ್ಲಾಪುರಂ ಮೂಲದ ಇಸ್ಮಾಯಿಲ್ ಹಮ್ಜಾ ಚಿರಾಗಪಿಲ್ಲಿ(೨೯) ಅಲಿಯಾಸ್ ಜೇಮ್ಸ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ.

ಸುಳಿವಿನ ಜಾಡು ಹಿಡಿದ ಪೊಲೀಸರು ತಾಲೆಗಾಂವ್ ನ ಮೋರ್ಯಾ ಆಸ್ಪತ್ರೆಯಿಂದ ಶುಕ್ರವಾರ ಇವರಿಬ್ಬರನ್ನು ಬಂಧಿಸಲಾಗಿದೆ ಹಾಗು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ವಿ ಮಾನೆ ಅವರ ಎದುರು ಶನಿವಾರ ಹಾಜರುಪಡಿಸಿದ್ದು ಇಬ್ಬರನ್ನೂ ಒಂದು ವಾರದ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಮಾವೋವಾದಿ ನಾಯಕ ಗಣಪತಿಗೆ ಮುರಳೀಧರನ್ ಆಪ್ತ ಸಹಚರ ಹಾಗೂ ಚಿರಾಗಪಲ್ಲಿ ಅವರ ನಂಬಿಕಸ್ಥ ಎಂದು ಎ ಟಿ ಎಸ್ ತಿಳಿಸಿದೆ.

ನಕಲಿ ಗುರುತಿನೊಂದಿಗೆ ಇವರಿಬ್ಬರೂ ಪುಣೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಎಷ್ಟು ಕಾಲದಿಂದ ಇವರಿಬ್ಬರೂ ಇಲ್ಲಿ ವಾಸಿಸುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT