ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ತೆಲಂಗಾಣ ಅಣೆಕಟ್ಟಿನಲ್ಲಿ ಮುಳುಗಿದ ೬ ಯುವ ಬಾಲಕರು

ತೆಲಂಗಾಣದ ಕರೀಂನಗರ ಜಿಲ್ಲೆಯ ಅಣೆಕಟ್ಟಿನಲ್ಲಿ ಸೋಮವಾರ ಆರು ಯುವ ಬಾಲಕರು ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್: ತೆಲಂಗಾಣದ ಕರೀಂನಗರ ಜಿಲ್ಲೆಯ ಅಣೆಕಟ್ಟಿನಲ್ಲಿ ಸೋಮವಾರ ಆರು ಯುವ ಬಾಲಕರು ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನಾನಕ್ಕಾಗಿ ೮ ರಿಂದ ೧೩ ವರ್ಷದ ಒಳಗಿನ ಬಾಲಕರು ಕರೀಂನಗರ ಹೊರವಲಯದ ಪದಮನಗರ ಕೆಳ ಮನೈರ್ ಡ್ಯಾಮ್ ನಲ್ಲಿ ಇಳಿದಾಗ ಈ ಘಟನೆ ನಡೆದಿದೆ.

ಹತ್ತಿರದ ಮೈದಾನದಲ್ಲಿ ಕ್ರಿಕೆಟ್ ಆಡಿದ್ದ ಈ ಬಾಲಕರು ಸ್ನಾನಕ್ಕಾಗಿ ಅಣೆಕಟ್ಟಿಗೆ ಇಳಿದ ಪರಿಣಾಮ ಒಬ್ಬರ ನಂತರ ಇನ್ನೊಬ್ಬರು ಎಲ್ಲರೂ ಮುಳುಗಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರು ಮನೆ ತಲುಪದಿದ್ದರಿಂದ ಅವರನ್ನು ಹುಡುಕುತ್ತಾ ಬಂದ ಪೋಷಕರು ಅಣೆಕಟ್ಟಿನ ದಡದಲ್ಲಿ ನೀರಿಗೆ ಇಳಿಯದ ಅವರ ಸ್ನೇಹಿತನೊಬ್ಬ ಅಘಾತಕ್ಕೊಳಗಾಗಿ ಕುಳಿತಿದ್ದನ್ನು ನೋಡಿದ್ದಾರೆ.

ನಂತರ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದು ಆರು ಸಂತ್ರಸ್ತ ಬಾಲಕರ ದೇಹಗಳನ್ನು ಪತ್ತೆ ಹಚ್ಚಿ ಅವರ ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT