ಐಐಟಿ ಮದ್ರಾಸ್ 
ಪ್ರಧಾನ ಸುದ್ದಿ

ಐಐಟಿ ಮದ್ರಾಸ್ ವಿವಾದ: ವಿಶ್ವವಿದ್ಯಾಲಯದ ಆವರಣದ ಹೊರಗೆ ವಿದ್ಯಾರ್ಥಿಗಳ ಪ್ರತಿಭಟನೆ

ಜಾತೀಯತೆಯ ಕಾರಣಗಳಿಗಾಗಿ ಐ ಐ ಟಿ ಮದ್ರಾಸ್ ಸಂಸ್ಥೆಯ ಅಂಬೇಡ್ಕರ್ ಪೆರಿಯಾರ್ ಅಧ್ಯಯನ ಸಂಘಟನೆಯ(ಎ ಪಿ ಎಸ್ ಸಿ) ಮಾನ್ಯತೆಯನ್ನು ರದ್ದುಪಡಿಸಿರುವ

ಚೆನ್ನೈ: ಜಾತೀಯತೆಯ ಕಾರಣಗಳಿಗಾಗಿ ಐ ಐ ಟಿ ಮದ್ರಾಸ್ ಸಂಸ್ಥೆಯ ಅಂಬೇಡ್ಕರ್ ಪೆರಿಯಾರ್ ಅಧ್ಯಯನ ಸಂಘಟನೆಯ(ಎ ಪಿ ಎಸ್ ಸಿ) ಮಾನ್ಯತೆಯನ್ನು ರದ್ದುಪಡಿಸಿರುವ ಹಿನ್ನಲೆಯಲ್ಲಿ ಬಲಪಂಥೀಯ ಗುಂಪುಗಳು ಹಾಗೂ ಎಡಪಂಥೀಯ ಗುಂಪುಗಳು ವಿಶ್ವವಿದ್ಯಾಲಯದ ಆವರಣದ ಹೊರಗೆ ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ನಿಯಂತ್ರಿಸಲು ಬೆಳಗ್ಗಿನಿಂದಲೆ ವಿಶ್ವವಿದ್ಯಾಲಯವನ್ನು ಪೊಲೀಸರು ದಟ್ಟವಾಗಿ ಸುತ್ತುವರೆದಿದ್ದ ದೃಶ್ಯ ಕಂಡು ಬಂತು.

ಕ್ರಾಂತಿಕಾರಿ ವಿದ್ಯಾರ್ಥಿ ಯುವ ಪಡೆಯ ಸದಸ್ಯರು ವಿಶ್ವವಿದ್ಯಾಲಯದ ಒಳಗೆ ಮನುಧರ್ಮ ತುಂಬಿತುಳುಕುತ್ತಿದೆ ಎಂದು ಬಿಲ್ಲೆಗಳನ್ನು ಹಂಚಿ ಪ್ರತಿಭಟನೆ ಮಾಡಿದರು.

ಸಿ ಪಿ ಎಂ ಯುವ ಘಟಕ, ಡಿ ವೈ ಎಫ್ ಐ ಸದಸ್ಯರು ಕೂಡ ಎ ಪಿ ಎಸ್ ಸಿ ಬೆಂಬಲಿಸಿ ಪ್ರತಿಭಟನೆ ನಡೆಸಿದವು. ಅಲ್ಲೇ ಹತ್ತಿರದ ಮಧ್ಯ ಕೈಲಾಶ್ ವೃತ್ತದ ಬಳಿ ದ್ರಾವಿಡ ಸಂಘಟನೆ ಪೆರಿಯಾರ್ ದ್ರಾವಿಡರ್ ಕಝಾಗಂ ಸದಸ್ಯರು ಕೂಡ ಐಐಟಿ ಆಡಳಿತ ಮಂಡಲಿಯ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆಗಳನ್ನೂ ಕೂಗಿದರು.

ಆಸಕ್ತಿದಾಯಕವಾಗಿ ಬಲಪಂಥೀಯ ಸಂಘಟನೆ 'ಹಿಂದು ಮಕ್ಕಳ ಕಟ್ಚಿ'ಯಾ ಅಧ್ಯಕ್ಷ ಅರ್ಜುನ್ ಸಂಪತ್ ಕೂಡ ಪ್ರತಿಭಟನೆ ನಡೆಸಿ ಸಂಸ್ಥೆಯನ್ನು ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಈ ಮಧ್ಯೆ ಬರಹಗಾರ್ತಿ, ಹೋರಾಟಗಾರ್ತಿ ಅರುಂಧತಿ ರಾಯ್ ಎ ಪಿ ಎಸ್ ಸಿ ಸಂಘಟನೆಗೆ ಇಮೇಲ್ ಮೂಲಕ ಬೆಂಬಲ ವ್ಯಕ್ತಪಡಿಸಿ ಹೋರಾಟ ಜಾರಿಯಲ್ಲಿಡುವಂತೆ ಕಿವಿಮಾತು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT