ಐಐಟಿ ಮದ್ರಾಸ್ 
ಪ್ರಧಾನ ಸುದ್ದಿ

ನಿಷೇಧ ವಿವಾದ: ಐಐಟಿ ಮದ್ರಾಸ್ ಹೊರಗೆ ಪ್ರತಿಭಟನೆ ನಡೆಸಿದ ಡಿಎಂಕೆ ಕಾರ್ಯಕರ್ತರು

ಅಂಬೇಡ್ಕರ್-ಪೆರಿಯಾರ್ ಅಧ್ಯಯನ ಬಳಗದ(ಎ ಪಿ ಎಸ್ ಸಿ) ಮಾನ್ಯತೆಯನ್ನು ಐಐಟಿ ಮದ್ರಾಸ್ ರದ್ದುಪಡಿಸಿರುವುದನ್ನು ವಿರೋಧಿಸಿ ಡಿಎಂಕೆ ಪಕ್ಷದ ವಿದ್ಯಾರ್ಥಿ ಘಟಕ

ಚೆನ್ನೈ: ಅಂಬೇಡ್ಕರ್-ಪೆರಿಯರ್ ಅಧ್ಯಯನ ಬಳಗದ(ಎ ಪಿ ಎಸ್ ಸಿ) ಮಾನ್ಯತೆಯನ್ನು ಐಐಟಿ ಮದ್ರಾಸ್ ರದ್ದುಪಡಿಸಿರುವುದನ್ನು ವಿರೋಧಿಸಿ ಡಿಎಂಕೆ ಪಕ್ಷದ ವಿದ್ಯಾರ್ಥಿ ಘಟಕ ಹಾಗು ಇತರ ರಾಜಕೀಯ ಸಂಘಟನೆಗಳು ಐಐಟಿ ಆವರಣದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಎ ಪಿ ಎಸ್ ಸಿ ಬಳಗ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದ್ದರು ಎಂಬ ಆರೋಪದ ಮೇಲೆ ಐಐಟಿ ಮದ್ರಾಸ್ ಕಳೆದ ಶುಕ್ರವಾರ ಈ ವಿದ್ಯಾರ್ಥಿ ಅಧ್ಯಯನ ಬಳಗದ ಮಾನ್ಯತೆಯನ್ನು ರದ್ದು ಮಾಡಿತ್ತು. ಈ ನಡೆಯನ್ನು ವಿರೋಧಿಸಿ ಎಎಪಿ ಪಕ್ಷವೂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ದೆಹಲಿಯಲ್ಲೂ ಪ್ರತಿಭಟನೆ ನಡೆಸಿದ್ದವು.

ಈ ಆದೇಶವನ್ನು ಹಿತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಆಗ್ರಹಿಸಿದ್ದಾರೆ.

ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಹಸ್ತಕ್ಷೇಪವನ್ನು ಕೂಡ ಕರುಣಾನಿಧಿ ತೀವ್ರವಾಗಿ ವಿರೋಧಿಸಿದ್ದಾರೆ.

"ಈ ಘಟನೆಯಿಂದಾಗಿ ಸಾಮಾನ್ಯವಾಗಿ ಶಾಂತಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆ ಇಂದು ಕಾಳಗದ ಪ್ರದೇಶವಾಗಿದೆ" ಎಂದು ಅವರು ಹೇಳಿದ್ದಾರೆ.

ಇರಾನಿ ಅವರ ಹೆಸರನ್ನು ಹೇಳದೆ ಮೋದಿ ಅವರ ಕೆಲವು ಸಚಿವರ 'ಏಕಪಕ್ಷೀಯ' ಹಾಗೂ 'ಸರ್ವಾಧಿಕಾರ' ಧೋರಣೆಯಿಂದಾಗಿ ದೇಶದ ಶಾಂತಿ ಮತ್ತು ಯುವ ಜನರಿಗೆ ಧಕ್ಕೆಯುಂಟಾಗುತ್ತಿದೆ ಎಂದು ಕರುಣಾನಿಧಿ ಟೀಕಿಸಿದ್ದಾರೆ.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಮೇಲಿನ ಕ್ರಮದ ಮೇಲೆ ಐಐಟಿ ಮದ್ರಾಸ್ ಸಂಸ್ಥೆಗೆ ಭಾನುವಾರ ನೋಟಿಸ್ ಜಾರಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT