ಹುಚ್ಚ ವೆಂಕಟ್ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಬಿಗ್ ಬಾಸ್ ಹುಚ್ಚ ವೆಂಕಟ್ ಇಂದು ಬಿಡುಗಡೆ

ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ `ಬಿಗ್ ಬಾಸ್ ವೆಂಕಟ್' ಮಂಗಳವಾರ ಸಂಜೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ...

ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ `ಬಿಗ್ ಬಾಸ್ ವೆಂಕಟ್' ಮಂಗಳವಾರ ಸಂಜೆ  ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಳೆದ ಬುಧವಾರವೇ (ನ. 25) ವೆಂಕಟ್‍ಗೆ ಜಾಮೀನು ಸಿಕ್ಕಿದೆ. ಆದರೆ, ಉದ್ದೇಶಪೂರ್ವಕವಾಗಿ ಅವರನ್ನು ಜೈಲಿನಿಂದ ಹೊರಕ್ಕೆ ಕರೆ ತಂದಿಲ್ಲ. ನ್ಯಾಯಾಲಯದ ಷರತ್ತಿನಂತೆ ವೆಂಕಟ್  ಸೋದರಿ ಶ್ಯೂರಿಟಿ ನೀಡುತ್ತಿದ್ದು ರು.25 ಸಾವಿರ ಬಾಂಡ್ ನೀಡಲಾಗುತ್ತಿದೆ ಎಂದು ವೆಂಕಟ್ ಪರ ವಕೀಲ ಮಂಜುನಾಥ ರಾಮಚಂದ್ರಪ್ಪ ತಿಳಿಸಿದರು. ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವೆಂಕಟ್ ಅವರು ಕ್ಷಣಕ್ಕೊಂದು ರೀತಿ ಮಾತನಾಡುತ್ತಾರೆ. ಅವರ ಬುದ್ಧಿ ಸ್ಥಿಮಿತದಲ್ಲಿರದು.

ಅಂತಹುದರಲ್ಲಿ ಸುದ್ದಿ ವಾಹಿನಿಗಳು ಅವರನ್ನು ಕರೆಸಿ ಮಾತನಾಡಿಸಿದಾಗ ಭಾವೋದ್ವೇಗಕ್ಕೆ ಒಳಗಾಗಿ ಪ್ರಚೋದನೆಯಿಂದಾಗಿ ವೆಂಕಟ್ ಆ ರೀತಿ ಮಾತನಾಡಿರಬಹುದು. ಅದು ತಪ್ಪು. ಹೀಗಾಗಿ  ಜೈಲಿಗೆ ಹೋಗಿದ್ದಾರೆ. ಅವರು ಬಿಡುಗಡೆಯಾದರೂ, ಮತ್ತೆ ಏನಾದರೂ ಮಾತನಾಡಿ ಯಡವಟ್ಟು ಮಾಡಿಕೊಳ್ಳುವ ಭೀತಿ ಇದೆ ಎಂದು ವಕೀಲರು ಕನ್ನಡಪ್ರಭಕ್ಕೆ ತಿಳಿಸಿದರು.

ಹೇಳಿಕೆ ತಂದ ಫಜೀತಿ: ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ ನಂತರ ವಿವಿಧ ಸಂಘಟನೆಗಳು ವೆಂಕಟ್ ಮನೆಗೆ ತೆರಳಿ ಪ್ರತಿಭಟನೆ ನಡೆಸಿದ್ದವು. ಇದರಿಂದ ವೆಂಕಟ್ ಮಾತ್ರವಲ್ಲದೇ ಅವರ ಕುಟುಂಬ ಸದಸ್ಯರಿಗೂ ತೀವ್ರ ತೊಂದರೆ ಉಂಟಾಯಿತು. ಜೈಲಿನಿಂದ ಬಿಡುಗಡೆಯಾಗಿ ಬಂದರೆ ಟಿವಿ ವಾಹಿನಗಳ ಜತೆ ಮಾತನಾಡಿ ಮತ್ತೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣಕ್ಕೆ ಸೋದರಿ, ಕುಟುಂಬ ಸದಸ್ಯರು, ಹಿರಿಯರು ಹಾಗೂ ವಕೀಲರೊಂದಿಗೆ ಚರ್ಚೆ ನಡೆಸಿದರು.

ಬಿಡುಗಡೆಯಾಗಿ ಬಂದ ನಂತರ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿದರು. ಮಾಧ್ಯಮಗಳಿಂದ ದೂರವಿರಲು ಹಾಗೂ ಮಾನಸಿಕ ಶಾಂತಿ ಕಾಪಾಡಲು ವೆಂಕಟ್ ಬಿಡುಗಡೆಯನ್ನು  ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಅವರಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿಲ್ಲ ಎನ್ನುವುದು ಸುಳ್ಳು. ಅವರ ಕುಟುಂಬ ಸದಸ್ಯರು ಮಾತ್ರವಲ್ಲದೇ ಹೊರಗಿನ ಸಾಕಷ್ಟು ಜನ  ಜಾಮೀನು ನೀಡಲು ಮುಂದೆ ಬಂದಿದ್ದಾರೆಂದು ವಕೀಲ ಮಂಜುನಾಥ ರಾಮಚಂದ್ರಪ್ಪ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT