ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ 
ಪ್ರಧಾನ ಸುದ್ದಿ

ಗುಲಾಂ ಅಲಿ ಸಂಗೀತ ಕಛೇರಿಗೆ ರಕ್ಷಣೆ ನೀಡಲಿರುವ ಆಪ್ ಸೇನೆ

ಅವಶ್ಯಕತೆ ಮೂಡಿದರೆ ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ದೇಶದ ರಾಜಧಾನಿಯಲ್ಲಿ ಯಾವುದೇ ಆಡಚಣೆಗಳಿಲ್ಲದೆ ನೆರವೇರಲು 'ಕಾರ್ಯಕರ್ತರ ಸೇನೆಯನ್ನು'

ನವದೆಹಲಿ: ಅವಶ್ಯಕತೆ ಮೂಡಿದರೆ ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ದೇಶದ ರಾಜಧಾನಿಯಲ್ಲಿ ಯಾವುದೇ ಆಡಚಣೆಗಳಿಲ್ಲದೆ ನೆರವೇರಲು 'ಕಾರ್ಯಕರ್ತರ ಸೇನೆಯನ್ನು' ನಿಯೋಜಿಸಲು ಪಕ್ಷ ಸನ್ನದ್ಧವಾಗಿದೆ ಎಂದು ಎ ಎ ಪಿ ಪಕ್ಷದ ಹಿರಿಯ ಮುಖಂಡ ಸಂಜಯ್ ಸಿಂಗ್ ಇಂದು ಹೇಳಿದ್ದಾರೆ.

ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಯಾವುದೇ ತೊಂದರೆಯಿಲ್ಲದೆ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳುವುದು ದೆಹಲಿ ಪೊಲೀಸರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

"ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಅಡಿಯಲ್ಲಿ ಬಿಜೆಪಿ ಪೊಲೀಸಿದೆ ಮತ್ತು ದೆಹಲಿಯಲ್ಲಿ ಮೋದಿ ಪೊಲೀಸ್ ಇದೆ ಮತ್ತು ರಾಜನಾಥ್ ಸಿಂಗ್ ಅಡಿಯಲ್ಲಿ ಕೆಲಸ ಮಾಡು ಗೃಹ ಸಚಿವಾಲಯ ದೆಹಲಿ ಭದ್ರತೆಯನ್ನು ನೋಡಿಕೊಳ್ಳುತ್ತದೆ.

"ಅವಶ್ಯಕತೆ ಮುಡಿದರೆ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಪಕ್ಷ ಕಾರ್ಯಕರ್ತರ ಸೇನೆಯನ್ನು ನಿಯೋಜಿಸಲಿದೆ. ಕಾರ್ಯಕ್ರಮದಲ್ಲಿ ಯಾವುದೇ ದಾಂಧಲೆಯಾಗಲು ಬಿಡುವುದಿಲ್ಲ" ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಶಿವಸೇನೆ ಪಕ್ಷ ಬೆದರಿಕೆ ಹಾಕಿದ್ದಕ್ಕೆ ಮುಂಬೈನಲ್ಲಿ ನಡೆಯಬೇಕಿದ್ದ ಪಾಕಿಸ್ತಾನಿ ಗಾಯಕನ ಗಜಲ್ ಕಾರ್ಯಕ್ರಮ ರದ್ದಾಗಿತ್ತು. ನಂತರ ಗುಲಾಂ ಅಲಿ ಯವರನ್ನು ದೆಹಲಿಯಲ್ಲಿ ಕಛೇರಿ ನೀಡಲು ಅರವಿಂದ್ ಕೇಜ್ರಿವಾಲ್ ಸರ್ಕಾರ ಆಹ್ವಾನಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT