ಪ್ರಧಾನ ಸುದ್ದಿ

ಮಹದಾಯಿ ಯೋಜನೆ ಕಿಚ್ಚು ಹೆಚ್ಚಿಸಿದ ಸ್ಯಾಂಡಲ್‌ವುಡ್

Vishwanath S
ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳು ಅನುಷ್ಠಾನಕ್ಕೆ ಒತ್ತಾಯಿಸಿ ಸ್ಯಾಂಡಲ್‌ವುಡ್ ನ ನಟ-ನಟಿಯರು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸುತ್ತಿದ್ದಾರೆ. 
ಮೊದಲಿಗೆ ಮೂರು ಸಾವಿರ ಮಠದ ಶ್ರೀಗಳ ಬಳಿ ಆಶೀರ್ವಾದ ಪಡೆದ ಚಿತ್ರತಂಡ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟಿದ್ದಾರೆ. 
ಮೂರು ಸಾವಿರ ಮಠದಿಂದ ಪದ್ಮಾ ಟಾಕೀಸ್, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮೂಲಕ ಹಾದು ಚೆನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ತೆರಳಿದೆ. ನಂತರ ಚೆನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಸ್ಯಾಂಡಲ್ವುಡ್ ಮಂದಿ ಮಾತನಾಡಲಿದ್ದಾರೆ. 
ತಮ್ಮ ನೆಚ್ಚಿನ ನಟ-ನಟಿಯರನ್ನು ಕಾಣುವ ಸಲುವಾಗಿ ಹುಬ್ಬಳ್ಳಿಯಲ್ಲಿ ಲಕ್ಷಾಂತರ ಮಂದಿ ಸೇರಿದ್ದು, ಮೆರವಣಿಗೆಯಲ್ಲಿ ಭಾಗಿಯಾಗಿರುವ ಅಭಿಮಾನಿಗಳತ್ತ ಚಿತ್ರತಂಡ ಕೈ ಬೀಸುತ್ತಿದೆ. 
SCROLL FOR NEXT