ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ದೆಹಲಿ ಉದ್ದಿಮೆದಾರನ ಕೊಲೆ; ಪತ್ನಿ ಮತ್ತು ಪ್ರಿಯಕರನ ಬಂಧನ

ದೆಹಲಿ ಮೂಲದ ಉದ್ದಿಮೆದಾರನ ಕೊಲೆಯ ಪ್ರಕರಣವನ್ನು ಭೇದಿಸಿರುವುದಾಗಿ ಶನಿವಾರ ತಿಳಿಸಿರುವ ದೆಹಲಿ ಪೊಲೀಸರು, ಉದ್ದಿಮೆದಾರನ ಪತ್ನಿ ಮತ್ತು

ಗಜಿಯಾಬಾದ್: ದೆಹಲಿ ಮೂಲದ ಉದ್ದಿಮೆದಾರನ ಕೊಲೆಯ ಪ್ರಕರಣವನ್ನು ಭೇದಿಸಿರುವುದಾಗಿ ಶನಿವಾರ ತಿಳಿಸಿರುವ ದೆಹಲಿ ಪೊಲೀಸರು, ಉದ್ದಿಮೆದಾರನ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿರಿದ್ದಾರೆ. ಆ ಪ್ರಿಯಕರ ಮೃತ ಉದ್ದಿಮೆದಾರನ ದಾಯಾದಿ ಎಂದು ತಿಳಿದುಬಂದಿದೆ.

ತನ್ನ ಆಡಿ ಕಾರಿನಲ್ಲಿ ಪತ್ನಿ ಶಾಲಿನಿ (೩೮), ದಾಯಾದಿ ವಿಪುಲ್ (೩೬) ಇವರುಗಳೊಂದಿಗೆ ಹರಿದ್ವಾರಕ್ಕೆ, ರಿಯಲ್ ಎಸ್ಟೇಟ್ ಉದ್ದಿಮೆದಾರ ಮನ್ನು ವಾಲಿಯಾ (೪೦) ತೆರಳುತ್ತಿದ್ದಾಗ, ಮೋಟಾರ್ ಸೈಕಲ್ ನಲ್ಲಿ ಬಂದ ದಾಳಿಕೋರರು ಬುಧವಾರ ಗುಂಡು ಹಾರಿಸಿ ಕೊಂದಿದ್ದರು.

ಗುರುವಾರ ಸಂತ್ರಸ್ತನ ಕಿರಿಯ ಸಹೋದರ ಅಲೋಕ್ ಸಿಂಗ್ ಗಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ, ಶಾಲಿನಿ ಮತ್ತು ವಿಪುಲ್ ಈ ಕೊಲೆಯ ಹಿಂದಿದ್ದಾರೆ ಎಂದು ದೂರಿದ್ದರು.

ಈ ಘಟನೆ ರಾಜ್ ನಗರ ಎಕ್ಸ್ಟೆಂಶನ್ ಪ್ರದೇಶದಲ್ಲಿ ನಡೆದಿತ್ತು.

ದೆಹಲಿ ಮತ್ತು ಇತರ ನಗರಗಳಲ್ಲಿ ಮನ್ನು ವಾಲಿಯಾ ಅವರ ಆಸ್ತಿಯನ್ನು ಕಬಳಿಸಲು ಹಾಗೂ ಶಾಲಿನಿ ಮತ್ತು ವಿಪುಲ್ ನಡುವೆ ಇದ್ದ ಅಕ್ರಮ ಸಂಬಂಧ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

"ವಿಚಾರಣೆ ವೇಳೆಯಲ್ಲಿ ವಿಪುಲ್ ತಪ್ಪು ಒಪ್ಪಿಕೊಂಡಿದ್ದಾನೆ. ಇಬ್ಬರೂ ಆಪಾದಿತರನ್ನು ಬಂಧಿಸಲಾಗಿದೆ ಹಾಗೂ ಗುಂಡು ಹಾರಿಸಿದ ಗುತ್ತಿಗೆ ಕೊಲೆಗಾರರನ್ನು ಬಂಧಿಸಲು ಪ್ರಯತ್ನ ನಡೆಯುತ್ತಿದೆ" ಎಂದು ಪೊಲೀಸ್ ಮಹಾ ಆಯುಕ್ತ ಅಜಯ್ ಪಾಲ್ ತಿಳಿಸಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ವಿಪುಲ್, ಹಾಗು ಸಂತ್ರಸ್ತನ ಪಕ್ಕಕ್ಕೆ ಕುಳಿತಿದ್ದ ಶಾಲಿನಿ ಅವರಿಗೆ ಯಾವುದೇ ಗಾಯಗಳಾಗದಿದ್ದರಿಂದ ನಮಗೆ ಸಂದೇಹ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುತ್ತಿಗೆ ಕೊಲೆಗಾರರನ್ನು ಐದು ಲಕ್ಷ ಮೊತ್ತಕ್ಕೆ ಒಪ್ಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!