ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಚತ್ತೀಸ್ ಘರ್ ನಲ್ಲಿ ಪೊಲೀಸ್ ನನ್ನು ಅಪಹರಿಸಿದ ಶಂಕಿತ ಮಾವೋವಾದಿಗಳು

ತೀವ್ರ ನಕ್ಸಲ್ ಚಟುವಟಿಕೆಯ ಚತ್ತೀಸ್ ಘರ್ ನ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ಮಾವೋವಾದಿಗಳು ಪೊಲೀಸ್ ಜವಾನನೊಬ್ಬನನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಇಂದು ಆಪಾದಿಸಿದ್ದಾರೆ.

ರಾಯಪುರ: ತೀವ್ರ ನಕ್ಸಲ್ ಚಟುವಟಿಕೆಯ ಚತ್ತೀಸ್ ಘರ್ ನ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ಮಾವೋವಾದಿಗಳು ಪೊಲೀಸ್ ಜವಾನನೊಬ್ಬನನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಇಂದು ಆಪಾದಿಸಿದ್ದಾರೆ.

ಪಾಂಡು ರಾಮ್ ಕುಡಿಯಂ ಎಂದು ಗುರುತಿಸಲಾಗಿರುವ ಉಪ ಕಾಂಸ್ಟೆಬಲ್ ನನ್ನು, ಫಾರ್ಸೆಘರ್ ಪೊಲೀಸ್ ಠಾಣೆಗೆ ಸೇರುವ ದಟ್ಟ ಅರಣ್ಯದಿಂದ ನೆನ್ನೆ ಸಂಜೆ ಅಪಹರಿಸಲಾಗಿದೆ ಎಂದು ಬಿಜಾಪುರದ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಕಲ್ಯಾಣ್ ಎಲೆಸೇಲ ತಿಳಿಸಿದ್ದಾರೆ. ತಮ್ಮ ಅತ್ತೆಯವರ ಕೊನೆಯ ವಿಧಿಗಳನ್ನು ಪೂರೈಸಿ ಈ ಉಪ ಕಾಂಸ್ಟೆಬಲ್ ಪಾಲ್ಮೆಂಡ್ರಿ ಗ್ರಾಮದಿಂದ ಫಾರ್ಸೆಘರ್ ಗೆ ಹಿಂತಿರುಗುತ್ತಿದ್ದರು ಎಂದು ತಿಳಿಯಲಾಗಿದೆ.

"ಕುಡಿಯಂ ದ್ವಿಚಕ್ರ ವಾಹನದಲ್ಲಿ ಹಿಂದಿರುಗುವಾಗ ತಡೆದ ನಕ್ಸಲರು ಅವರನ್ನು ಅಪಹರಿಸಿ ದಟ್ಟಾರಣ್ಯಕ್ಕೆ ಕರೆದೊಯ್ದಿದ್ದಾರೆ" ಎಂದು ಅವರು ತಿಳಿಸಿದ್ದಾರೆ. ಈ ಘಟನೆ ನಡೆದಿದೆ ಎಂದು ಹೇಳಲಾದ ಸ್ಥಳಕ್ಕೆ ಭದ್ರತಾ ಪಡೆಗಳನ್ನು ಕಳುಹಿಸಲಾಗಿದ್ದು ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಪೊಲೀಸ್ ನ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬಿಜಾಪುರ ಜಿಲ್ಲೆಯಲ್ಲಿ ಜುಲೈ ೧೪ ರಂದು ನಕ್ಸಲರು ನಾಲ್ಕು ಜನ ಉಪ ಕಾಂಸ್ಟೆಬಲ್ ಗಳನ್ನು ಅಪಹರಿಸಿ ಮುಂದಿನ ದಿನ ಕೊಂದು ಹಾಕಿದ್ದರು. ಹಾಗೆಯೇ ಕಳೆದ ತಿಂಗಳು ಸುಕ್ಮ ಜಿಲ್ಲೆಯಿಂದ ಮತ್ತೊಬ್ಬ ಉಪ ಕಾಂಸ್ಟೆಬಲ್ ನನ್ನು ಮಾವೋವಾದಿಗಳು ಅಪಹರಿಸಿ ನಂತರ ಬಿಡುಗಡೆ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜಾಗಿತ್ತು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT