ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ 
ಪ್ರಧಾನ ಸುದ್ದಿ

ಉತ್ತರಪ್ರದೇಶದಲ್ಲಿ 'ಗೂಂಡಾ ಸರ್ಕಾರ' ಕಿತ್ತೊಗೆಯಲು ಮಾಯಾವತಿ ಪಣ

ಉತ್ತರಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಹಿಂದಿರುಗುವುದಾಗಿ ಪಣ ತೊಟ್ಟಿರುವ ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ,

ಲಕನೌ: ಉತ್ತರಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಹಿಂದಿರುಗುವುದಾಗಿ ಪಣ ತೊಟ್ಟಿರುವ ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ, "ಭೂಗತ ದೊರೆಗಳ ಮತ್ತು ಗೂಂಡಾ ಸರ್ಕಾರವನ್ನು" ಕೊನೆಗಾಣಿಸಲಿದ್ದೇನೆ ಎಂದಿದ್ದಾರೆ.

ಡಾ| ಭೀಮರಾವ್ ಅಂಬೇಡ್ಕರ್ ಅವರ೧೨೫ನೇ ಜಯಂತಿಯಂದು ಪಕ್ಷದ ಕಾರ್ಯಕರ್ತರ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಲ್ಕು ಅವಧಿಗಳ ಮಾಜಿ ಮುಖ್ಯಮಂತ್ರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೂ ಚಾಟಿ ಬೀಸಿದ್ದಾರೆ.

ಎಲ್ಲ ಪಕ್ಷಗಳನ್ನು 'ಅವಕಾಶವಾದಿಗಳು' ಎಂದಿರುವ ಮಾಯಾವತಿ ರಾಜಕೀಯ ಮತ್ತು ಚುನಾವಣೆಯ ಲಾಭಕ್ಕಾಗೆ ಮಾತ್ರ ದಲಿತರನ್ನು ಓಲೈಸುತ್ತಾರೆ ಎಂದು ಆರೋಪಿಸಿದ್ದಾರೆ.

"ಉತ್ತರ ಪ್ರದೇಶದ ದಲಿತರಷ್ಟೇ ಅಲ್ಲ, ಇಡೀ ದೇಶದ ದಲಿತರು ಯಾವುದೇ ಬದ್ಧತೆ ಇಲ್ಲದೆ ರಾಜಕೀಯ ಲಾಭಕ್ಕಾಗಿ ಸಿಹಿ ಮಾತುಗಳನ್ನಾಡುವ ಈ ಪಕ್ಷಗಳ ಬಗ್ಗೆ ಎಚ್ಚರದಿಂದಿರಬೇಕು" ಎಂದು ಕೂಡ ಅವರು ಹೇಳಿದ್ದಾರೆ.

ಮುಂದಿನ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ 'ರಾಜಕೀಯ ಅಧಿಕಾರದ ಮಾಸ್ಟರ್'ಗಳಂತೆ ವರ್ತಿಸಿ ದಲಿತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಕರೆ ನೀಡಿದ್ದಾರೆ.

ಆನೆಯ ಪ್ರತಿಮೆಗಳನ್ನು ಸ್ಥಾಪಿಸಿದ್ದಕ್ಕೆ ಇತರ ಪಕ್ಷಗಳು ನನ್ನ ವಿರುದ್ಧ ಪಿತೂರಿ ಹೂಡಿದರು ಎಂದು ಹೇಳಿರುವ ಅವರು "ಅವರು ನಮ್ಮ ಪಕ್ಷದ ಪ್ರಚಾರಕ್ಕಾಗಿ ಇವುಗಳನ್ನು ನಿಲ್ಲಿಸಿದ್ದು ಎಂದಿದ್ದರು ಬದಲಾಗಿ ಅವುಗಳನ್ನು ಸ್ಥಾಪಿಸಿದ್ದು ಸ್ವಾಗತ ಚಿಹ್ನೆಯಾಗಿ" ಎಂದಿದ್ದಾರೆ ಮಾಯಾವತಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT