ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ 
ಪ್ರಧಾನ ಸುದ್ದಿ

ಉತ್ತರಪ್ರದೇಶದಲ್ಲಿ 'ಗೂಂಡಾ ಸರ್ಕಾರ' ಕಿತ್ತೊಗೆಯಲು ಮಾಯಾವತಿ ಪಣ

ಉತ್ತರಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಹಿಂದಿರುಗುವುದಾಗಿ ಪಣ ತೊಟ್ಟಿರುವ ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ,

ಲಕನೌ: ಉತ್ತರಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಹಿಂದಿರುಗುವುದಾಗಿ ಪಣ ತೊಟ್ಟಿರುವ ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ, "ಭೂಗತ ದೊರೆಗಳ ಮತ್ತು ಗೂಂಡಾ ಸರ್ಕಾರವನ್ನು" ಕೊನೆಗಾಣಿಸಲಿದ್ದೇನೆ ಎಂದಿದ್ದಾರೆ.

ಡಾ| ಭೀಮರಾವ್ ಅಂಬೇಡ್ಕರ್ ಅವರ೧೨೫ನೇ ಜಯಂತಿಯಂದು ಪಕ್ಷದ ಕಾರ್ಯಕರ್ತರ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಲ್ಕು ಅವಧಿಗಳ ಮಾಜಿ ಮುಖ್ಯಮಂತ್ರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೂ ಚಾಟಿ ಬೀಸಿದ್ದಾರೆ.

ಎಲ್ಲ ಪಕ್ಷಗಳನ್ನು 'ಅವಕಾಶವಾದಿಗಳು' ಎಂದಿರುವ ಮಾಯಾವತಿ ರಾಜಕೀಯ ಮತ್ತು ಚುನಾವಣೆಯ ಲಾಭಕ್ಕಾಗೆ ಮಾತ್ರ ದಲಿತರನ್ನು ಓಲೈಸುತ್ತಾರೆ ಎಂದು ಆರೋಪಿಸಿದ್ದಾರೆ.

"ಉತ್ತರ ಪ್ರದೇಶದ ದಲಿತರಷ್ಟೇ ಅಲ್ಲ, ಇಡೀ ದೇಶದ ದಲಿತರು ಯಾವುದೇ ಬದ್ಧತೆ ಇಲ್ಲದೆ ರಾಜಕೀಯ ಲಾಭಕ್ಕಾಗಿ ಸಿಹಿ ಮಾತುಗಳನ್ನಾಡುವ ಈ ಪಕ್ಷಗಳ ಬಗ್ಗೆ ಎಚ್ಚರದಿಂದಿರಬೇಕು" ಎಂದು ಕೂಡ ಅವರು ಹೇಳಿದ್ದಾರೆ.

ಮುಂದಿನ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ 'ರಾಜಕೀಯ ಅಧಿಕಾರದ ಮಾಸ್ಟರ್'ಗಳಂತೆ ವರ್ತಿಸಿ ದಲಿತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಕರೆ ನೀಡಿದ್ದಾರೆ.

ಆನೆಯ ಪ್ರತಿಮೆಗಳನ್ನು ಸ್ಥಾಪಿಸಿದ್ದಕ್ಕೆ ಇತರ ಪಕ್ಷಗಳು ನನ್ನ ವಿರುದ್ಧ ಪಿತೂರಿ ಹೂಡಿದರು ಎಂದು ಹೇಳಿರುವ ಅವರು "ಅವರು ನಮ್ಮ ಪಕ್ಷದ ಪ್ರಚಾರಕ್ಕಾಗಿ ಇವುಗಳನ್ನು ನಿಲ್ಲಿಸಿದ್ದು ಎಂದಿದ್ದರು ಬದಲಾಗಿ ಅವುಗಳನ್ನು ಸ್ಥಾಪಿಸಿದ್ದು ಸ್ವಾಗತ ಚಿಹ್ನೆಯಾಗಿ" ಎಂದಿದ್ದಾರೆ ಮಾಯಾವತಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸುರಂಗ ಕುಸಿತ; ಮಳೆಯಲ್ಲಿ ಕೊಚ್ಚಿಹೋದ 7 ಸಾವಿರ ಕೋಟಿ!

20 ವರ್ಷಗಳ ಬಳಿಕ ಗಾಜಾದಲ್ಲಿ Hamas 'ಉಗ್ರ' ಆಡಳಿತ ಅಂತ್ಯ; ಅಮೆರಿಕ ಸ್ಥಾಪಿತ NCAG ಗೆ ಅಧಿಕಾರ ಹಸ್ತಾಂತರ!

ರಾಜ್ಯದಲ್ಲಿ SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಹೃದಯಾಘಾತದಿಂದ ಕುಸಿದು ಬಿದ್ದು BLO ಸಾವು

ರಾಮನಗರ: ಹೋಂ ಸ್ಟೇ, ರೆಸಾರ್ಟ್‌ ಹೆಸರಲ್ಲಿ ಹೈಟೆಕ್ ಸೆಕ್ಸ್​ ದಂಧೆ; 10 ಯುವತಿಯರ ರಕ್ಷಣೆ, 52 ಜನರ ಬಂಧನ

ವಿಜಯಪುರದಲ್ಲಿ ಬಿಎಲ್‌ಡಿಇ-ಅಕ್ಷಯಕಲ್ಪ ವೈಜ್ಞಾನಿಕ ತರಬೇತಿ: ರೈತರಿಗೆ ಲಾಭದಾಯಕವಾದ ಹೈನುಗಾರಿಕೆ ಉದ್ಯಮ