ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಕರೆ ಕಡಿತಕ್ಕೆ ಪರಿಹಾರ; ಟಿ ಆರ್ ಎ ಐ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್

ಮಾತಿನ ಮಧ್ಯದಲ್ಲಿ ದೂರವಾಣಿ ಕರೆ ಕಡಿತಗೊಂಡರೆ, ಸೇವೆ ಒದಗಿಸುವ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರ ನೀಡಬೇಕೆನ್ನುವ ಭಾರತೀಯ ದೂರನಿಯಂತ್ರಣ ಮಂಡಲಿ (ಟಿ ಆರ್ ಎ ಐ)

ನವದೆಹಲಿ: ಮಾತಿನ ಮಧ್ಯದಲ್ಲಿ ದೂರವಾಣಿ ಕರೆ ಕಡಿತಗೊಂಡರೆ, ಸೇವೆ ಒದಗಿಸುವ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರ ನೀಡಬೇಕೆನ್ನುವ ಭಾರತೀಯ ದೂರನಿಯಂತ್ರಣ ಮಂಡಲಿ (ಟಿ ಆರ್ ಎ ಐ) ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.

ದಿನದ ಮೊದಲ ಮೂರು ಕರೆಗಳ ಕಡಿತಕ್ಕೆ ಟೆಲಿಕಾಮ್ ಸೇವಾ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರ ನೀಡಬೇಕೆಂದು ಮುಖ್ಯ ನ್ಯಾಯಾಧೀಶೆ ಜಿ ರೋಹಿಣಿ ಮತ್ತು ನ್ಯಾಯಾಧೀಶ ಜಯಂತ್ ನಾಥ್ ಅವರುಗಳನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಪ್ರತಿ ಕರೆಯ ಕಡಿತಕ್ಕೆ ಜನವರಿ ೧ ೨೦೧೬ ರಿಂದ ಒಂದು ರೂ ಪರಿಹಾರ ನೀಡುವಂತೆ (ದಿನಕ್ಕೆ ಮೊದಲ ಮೂರು ಕರೆಗಳಿಗೆ) ಅಕ್ಟೋಬರ್ ೧೬ ೨೦೧೫ ರಂದು, ಟಿ ಆರ್ ಎ ಐ ಆದೇಶಿಸಿದ್ದ ಪರಿಹಾರ ನೀತಿಯನ್ನು ತಡೆ ಹಿಡಿಯುವಂತೆ ಟೆಲಿಕಾಮ್ ಸೇವಾ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

೨೦೧೫ ರ ಮೊದಲ ಭಾಗದಲ್ಲಿ ಗ್ರಾಹಕರು ಮಾಡಿದ್ದ ೨೫,೭೮೭ ಕರೆಗಳಲ್ಲಿ, ೨೦೦ ಕೋಟಿ ಕರೆಗಳು ಕಡಿತಗೊಂಡಿದ್ದು ದಾಖಲೆಯಾಗಿರುವ ಸನ್ನಿವೇಶದಲ್ಲಿ ಈ ಆದೇಶ ಮಾಡಲಾಗಿತ್ತು ಎಂದು ಟಿ ಆರ್ ಎ ಐ ವಾದ ಮಾಡಿತ್ತು.

ಕಡಿತಗೊಂಡ ಕರೆಗಳ ಪ್ರಮಾದ ೦.೭೭% ಇದ್ದು ಈ ಸಂದರ್ಭದಲ್ಲಿ ಟೆಲಿಕಾಮ್ ಸೇವಾ ಸಂಸ್ಥೆಗಳು ೩೬,೭೮೧ ಕೋಟಿ ರೂ ಆದಾಯ ಗಳಿಸಿವೆ ಎಂದು ಕೂಡ ಟಿ ಆರ್ ಎ ಐ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT