ಉಗ್ರ 
ಪ್ರಧಾನ ಸುದ್ದಿ

ಜಾವೇದ್ ರಫೀಕ್ 2008ರ ಸರಣಿ ಸ್ಫೋಟದ ರೂವಾರಿ!

ಪರಪ್ಪನ ಅಗ್ರಹಾರ ಜೈಲಿನ ಬಳಿ ಸೆರೆ ಸಿಕ್ಕ ಶಂಕಿತ ಭಯೋತ್ಪಾದಕ ಜಾವೇದ್ ರಫೀಕ್ 2008ರಲ್ಲಿ ದೇಶವನ್ನೇ ನಡುಗಿಸಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿ...

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಬಳಿ ಸೆರೆ ಸಿಕ್ಕ ಶಂಕಿತ ಭಯೋತ್ಪಾದಕ ಜಾವೇದ್ ರಫೀಕ್ 2008ರಲ್ಲಿ ದೇಶವನ್ನೇ ನಡುಗಿಸಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಮೂಲತಃ ದೆಹಲಿಯವನ್ನಾದ ರಫೀಕ್ ಇಂಡಿಯನ್ ಮುಜಾಹಿದ್ದೀನ್(ಐಎಂ) ಸಂಘಟನೆ ಸದಸ್ಯ. ಈತ ಐಎಂ 2008ರಲ್ಲಿ ಬ್ಯಾಡ್ ಆಪರೇಷನ್(ಬಿಡಿಎ) ಹೆಸರಿನಲ್ಲಿ ಬೆಂಗಳೂರು, ದೆಹಲಿ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧೆಡೆ ನಡೆಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ. ಅಂದು ತಪ್ಪಿಸಿಕೊಂಡಿದ್ದ ಈತನ ವಿರುದ್ಧ ಎನ್ಐಎ ಮತ್ತು ತೆಲಂಗಾಣ ಎಟಿಎಸ್ ಮತ್ತು ಸಿಐಎಯಲ್ಲಿ ಪ್ರಕರಣ ದಾಖಲಾಗಿದ್ದವು.

ಅಂದಿನಿಂದ ಈತನ ಬೆನ್ನುಬಿದ್ದದ್ದ ಪೊಲೀಸರು ಪ್ರತಿ ಚಟುವಟಿಕೆ ಬಗ್ಗೆ ಫೇಸ್ ಬುಕ್ ಬಳಸಿದ ಕಂಪ್ಯೂಟರ್ ಐಪಿ ವಿಳಾಸ ಜಾಲಾಡಿದ್ದರು. ಆದರೆ, ಬೆಂಗಳೂರಿನಲ್ಲೇ ಇದ್ದ ಈತ. ನಾಗನಾಥಪುರದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದುದನ್ನು ಪತ್ತೆ ಮಾಡಿದ್ದ ತನಿಖಾಧಿಕಾರಿಗಳು 4 ತಿಂಗಳಿಂದ ಈತನ ಮೇಲೆ ಕಣ್ಣಿಟ್ಟಿದ್ದರು.

ಈತನ ಪತ್ನಿ ಯಾಸ್ಮಿನ್ ಬೆಂಗಳೂರಿನ ಸಾರಾಯಿ ಪಾಳ್ಯದ ನಿವಾಸಿಯಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಇಬ್ಬರೂ ಮದುವೆಯಾಗಿದ್ದರು. ಈಕೆ ಕೂಡ ರಫೀಕ್ ನ ದೇಶದ್ರೋಹ ಕೆಲಸಗಳಿಗೆ ಸಾಥ್ ನೀಡುತ್ತಿದ್ದಳು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ತೆಲಂಗಾಣ ಪೊಲೀಸ್ ವಶಕ್ಕೆ: ದೇಶದಲ್ಲಿ ನಡೆದ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಜಾವೇದ್ ರಫೀಕ್ ಮತ್ತು ಪತ್ನಿ ಯಾಸ್ಮಿನ್ ಬಾನು ಅವರನ್ನು ತೆಲಂಗಾಣ ವಿಶೇಷ ಪೊಲೀಸರ ವಶಕ್ಕೆ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT