ಸ್ವಾತಿ ಕೊಲೆ ಆರೋಪಿ ರಾಮ್ ಕುಮಾರ್ ನನ್ನು ಮೆಜೆಸ್ಟ್ರೇಟ್ ಮುಂದೆ ಹಾಜರು ಪಡಿಸುವಾಗ 
ಪ್ರಧಾನ ಸುದ್ದಿ

ರಾಮ್ ಕುಮಾರ್ ಕುತ್ತಿಗೆ ಇರಿದಿದ್ದು ಪೊಲೀಸರೇ; ಸ್ವಾತಿ ಕೊಲೆ ಆರೋಪಿ ತಂದೆ ಹೇಳಿಕೆ

ಚೆನೈ ಐ ಟಿ ಉದ್ಯೋಗಿ ಸ್ವಾತಿ ಕೊಲೆಯ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆ ಆರೋಪಿ ರಾಮ್ ಕುಮಾರ್ ಅವರ ತಂದೆ ಪರಮಶಿವನ್ ತಿರುನೆಲ್ವೇಲಿಯ ಸೆಂಗೋಟ್ಟಿ ಪೊಲೀಸ್

ತಿರುನೆಲ್ವೇಲಿ: ಚೆನೈ ಐ ಟಿ ಉದ್ಯೋಗಿ ಸ್ವಾತಿ ಕೊಲೆಯ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆ ಆರೋಪಿ ರಾಮ್ ಕುಮಾರ್ ಅವರ ತಂದೆ ಪರಮಶಿವನ್ ತಿರುನೆಲ್ವೇಲಿಯ ಸೆಂಗೋಟ್ಟಿ ಪೊಲೀಸ್ ಠಾಣೆಗೆ ಮಂಗಳವಾರ ಪೆಟಿಶನ್ ನೀಡಿದ್ದು, ತಮ್ಮ ಮಗನನ್ನು ಪೊಲೀಸರು ಹಿಡಿಯುವಾಗ ಅವನ ಕತ್ತು ಕೊಯ್ದರು ಎಂದು ಆರೋಪಿಸಿದ್ದಾರೆ. ಈ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. 
ಈ ಅರ್ಜಿಯಲ್ಲಿ ಪರಮಶಿವನ್ ಹೇಳಿರುವಂತೆ, ಜುಲೈ 1 ರ ರಾತ್ರಿ ಸೆಂಗೋಟ್ಟೈ ಬಳಿಯ ಮೀನಾಕ್ಷಿಪುರಂನ ತಮ್ಮ ಮನೆಯ ಕದವನ್ನು ಟೀಶರ್ಟ್ ಹಾಕಿದ್ದ ಇಬ್ಬರು ಬಡಿದರು. ನಾನು ಕದ ತೆರೆದಾಗ ಅವರು ಪರಿಚಯಿಸಿಕೊಂಡು ಇದು ಮುತ್ತುಕುಮಾರ್ ಅವರ ಮನೆಯೇ ಎಂದು ಕೇಳಿದರು. ಆಗ ಪರಮಶಿವನ್ ತಮ್ಮ ಮಗನ ಹೆಸರು ರಾಮಕುಮಾರ್ ಎಂದು ತಿಳಿಸಿದಾಗ ಹಿಂಬದಿ ಬಾಗಿಲಿನಿಂದ ಬಂದ ಕೆಲವು ಪೊಲೀಸರು ನನ್ನ ಮಗ ಕತ್ತು ಕೊಯ್ದುಕೊಂಡಿದ್ದಾನೆ ಎಂದು ತಿಳಿಸಿದರು ಎಂದು ಹೇಳಿದ್ದಾರೆ. 
ಆಗ ತಮ್ಮ ಕುಟುಂಬ ಸದಸ್ಯರು ಹಿಂಭಾಗಕ್ಕೆ ತೆರಳಿದಾಗ ರಾಮ್ ಕುಮಾರ್ ಕತ್ತಿಗೆ ಗಾಯವಾಗಿತ್ತು ಹಾಗೂ ಪೊಲೀಸ್ ಒಬ್ಬರು ಅವನನ್ನು ಹಿಡಿದಿದ್ದರು ಎಂದು ತಿಳಿಸಿದ್ದಾರೆ. "ಪೊಲೀಸ್ ಒಬ್ಬರ ಕೈಮೇಲೆ ರಕ್ತದ ಕಲೆ ಇತ್ತು" ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT