ಪ್ರಧಾನ ಸುದ್ದಿ

ಮಣ್ಣಲ್ಲಿ ಮಣ್ಣಾದ ರಾಕೇಶ್ ಸಿದ್ದರಾಮಯ್ಯ; ಕುರುಬ ಸಂಪ್ರದಾಯದಂತೆ ಅಂತ್ಯಕ್ರಿಯೆ

Vishwanath S

ಮೈಸೂರು: ಮೈಸೂರಿನ ಟಿ. ಕಾಟೂರಿನ ಫಾರ್ಮ್ ಹೌಸ್ ನಲ್ಲಿ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಸಂಸ್ಕಾರವನ್ನು ಕುರುಬ ಸಂಪ್ರದಾಯದಂತೆ ಪುತ್ರ ಧವನ್ ರಾಕೇಶ್ ನೆರವೇರಿಸಿದರು.

ಕಾಗಿನೆಲೆ ಪೀಠದ ಕನಕಗುರು ನಿರಂಜನಾನಂದ ಸ್ವಾಮಿ ನೇತೃತ್ವದಲ್ಲಿ ಕಾಗಿನೆಲೆ ಪೀಠದ ಈಶ್ವರಾನಂದ ಮಹಾಪುರ ಸ್ವಾಮೀಜಿ ಸೇರಿದಂತೆ ಎಲ್ಲ ಹಿಂದುಳಿದ ವರ್ಗಗಳ ಮಹಾಸ್ವಾಮಿಗಳು ಭಾಗವಹಿಸಿ ಧಾರ್ಮಿಕ ಕಾರ್ಯ ನೆರವೇರಿಸಿದರು.

ರಾಕೇಶ್ ಅಂತ್ಯಕ್ರಿಯೆಗೆ ಮಾಧ್ಯಮ ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಸಿದ್ದರಾಮನಹುಂಡಿ ಹಾಗೂ ಸುತ್ತಮುತ್ತಲಿನ ಕೆಲವೇ ಗ್ರಾಮಸ್ಥರಿಗೆ, ರಾಜಕೀಯ ಗಣ್ಯಾತಿ ಗಣ್ಯರಿಗೆ, ಉನ್ನತ ಮಟ್ಟದ ಅಧಿಕಾರಿಗಳಿಗೆ ಹಾಗೂ ಸಂಬಂಧಿಕರನ್ನು ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಟಿ. ಕಾಟೂರಿನ ಫಾರಂ ಹೌಸ್ ನಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು.

SCROLL FOR NEXT