ಪ್ರಧಾನಿ ಮೋದಿ ಕತಾರ್ ಗೆ ಭೇಟಿ ನೀಡಿದ ಸಂದರ್ಭ 
ಪ್ರಧಾನ ಸುದ್ದಿ

೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ ಕತಾರ್

ಪ್ರಧಾನಿಯವರ ಐದು ದೇಶಗಳ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಕತಾರ್ ಗೆ ಭೇಟಿ ನೀಡಿದ ನಂತರ ೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಕತಾರ್ ಸದ್ಭಾವನಾ ನಡೆಗೆ

ನವದೆಹಲಿ: ಪ್ರಧಾನಿಯವರ ಐದು ದೇಶಗಳ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಕತಾರ್ ಗೆ ಭೇಟಿ ನೀಡಿದ ನಂತರ ೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಕತಾರ್ ಸದ್ಭಾವನಾ ನಡೆಗೆ ಮುಂದಾಗಿದೆ.

ದೋಹಾದಲ್ಲಿ ಮೋದಿ ಅವರು ಕತಾರ್ ನ ಎಮೀರ್, ಶೇಕ್ ತಮೀಮ್ ಬಿನ್ ಹಮದ್ ಅಲ್-ತನಿ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಸೋಮವಾರ ಖೈದಿಗಳ ಬಿಡುಗಡೆಯಾಗಿದೆ. ರಂಜಾನ್ ಸಮಯದಲ್ಲಿ ಪ್ರತಿ ವರ್ಷ ಕತಾರ್ ಸರ್ಕಾರ ನಡೆಸುವ ಕ್ಷಮೆಯ ಸಂಪ್ರದಾಯದಂತೆ ಈ ಬಿಡುಗಡೆ ನೆರವೇರಿಸಿದೆ.

"ವಿಶೇಷ ತಿಂಗಳು (ರಂಜಾನ್) ಪ್ರಾರಂಭಕ್ಕೆ ವಿಶೇಷ ನಡೆ. ಕತಾರ್ ಸರ್ಕಾರ ೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ್ದು ಅವರೆಲ್ಲರೂ ಭಾರತಕ್ಕೆ ಹಿಂದಿರುಗಲಿದ್ದಾರೆ" ಎಂದು ಮೋದಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.

"ಈ ನಡೆಗಾಗಿ ಕತಾರ್ ನ ಎಮೀರ್ ಅವರಿಗೆ ನನ್ನ ಧನ್ಯವಾದ ಹೇಳುತ್ತೇನೆ" ಎಂದು ಅಮೆರಿಕಾದಿಂದ ಮೋದಿ ಬರೆದಿದ್ದಾರೆ.

ಐದು ರಾಷ್ಟ್ರಗಳ ಪ್ರವಾಸದಲ್ಲಿ ಆಪ್ಘಾನಿಸ್ಥಾನ, ಕತಾರ್ ಮತ್ತು ಸ್ವಿಟ್ಸರ್ ಲ್ಯಾಂಡ್ ದೇಶಗಳ ಪ್ರವಾಸ ಮುಗಿಸಿ ಸದ್ಯ ಅಮೆರಿಕಾದಲ್ಲಿರುವ ಮೋದಿ ನಂತರ ಮೆಕ್ಸಿಕೋ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಬಿಡುಗಡೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ "ಕತಾರ್ ಗೆ ಧನ್ಯವಾದಗಳು. ಪ್ರಧಾನಿಯವರ ಕೋರಿಕೆ ಮೇರೆ ೨೩ ಖೈದಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು" ಎಂದು ಅವರು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT