ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 
ಪ್ರಧಾನ ಸುದ್ದಿ

ವಿಜಯನ್ ಮಾಧ್ಯಮಗಳನ್ನು ದೂರವಿಡುತ್ತಿದ್ದಾರೆ: ಕಾಂಗ್ರೆಸ್

ಮಾಧ್ಯಮಗಳನ್ನು ದೂರವಿಡುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ವಿ ಎಂ ಸುಧೀಂದ್ರನ್

ತಿರುವನಂತಪುರಂ: ಮಾಧ್ಯಮಗಳನ್ನು ದೂರವಿಡುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ವಿ ಎಂ  ಸುಧೀಂದ್ರನ್ ಶನಿವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಸುಧೀಂದ್ರನ್ "ಗೊತ್ತಿಲ್ಲದ ಯಾವುದೋ ಕಾರಣಗಳಿಗೆ ಮಾಧ್ಯಮಗಳ ಮುಂದೆ ವಿಜಯನ್ ಕಾಣಿಸಿಕೊಳ್ಳದಿರುವುದು ವಿಚಿತ್ರವಾಗಿದೆ" ಎಂದಿದ್ದಾರೆ.

"ನಾವು ರಾಜಕೀಯಕ್ಕೆ ಪ್ರವೇಶ ಪಡೆದ 1970 ಇಸವಿಯಿಂದ ಹೇಳಬಲ್ಲೆ. ಅವಾಗಿಲಿಂದಲೂ ವಾರಕ್ಕೊಮ್ಮೆಯಾದರೂ ಮತ್ತು ಸಂಪುಟ ಸಭೆ ನಡೆದ ಮೇಲಾದರೂ ಮುಖ್ಯಮಂತ್ರಿಗಳು ಮಾಧ್ಯಮಗಳೊಂದಿಗೆ ಮಾತನಾಡುವುದು ವಾಡಿಕೆ. ಆದರೆ ವಿಜಯನ್ ಅದನ್ನು ಮಾಡುತ್ತಿಲ್ಲ" ಎಂದು ಸುಧೀಂದ್ರನ್ ಹೇಳಿದ್ದಾರೆ.

ವಿಜಯನ್ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ಮೇ 25 ರಂದು ಮೊದಲ ಸಂಪುಟ ಸಭೆ ಕರೆದಿದ್ದರು ಮತ್ತು ಅಂದು ಮಾತ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದು. ಅದರ ನಂತರ ಸಂಪುಟ ಸಭೆಯ ಚರ್ಚೆಯ ವಿಷಯಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಲೇ ಇಲ್ಲ.

"ಮಾಧ್ಯಮಗಳನ್ನು ದೂರವಿಟ್ಟ ಬಗೆಗೆ ನಮಗೆ ಆಶ್ಚರ್ಯವಾಗುತ್ತಿದೆ. ಮುಖ್ಯಮಂತ್ರಿ ಎಂದಿಗೂ ಜನರಿಗೆ ಉತ್ತರ ನೀಡಬೇಕಿರುತ್ತದೆ ಅದು ಮಾಧ್ಯಮಗಳ ಮೂಲಕ ನಡೆಯುತ್ತದೆ. ನಾವು ಒಂದು ಹೇಳುವುದಕ್ಕೆ ಇಷ್ಟ ಪಡುತ್ತೇವೆ. ಕೇರಳದಂತಹ ರಾಜ್ಯದಲ್ಲಿ ಈ ಹೊಸ ಸಂಸ್ಕೃತಿ ಸರಿಯಲ್ಲ" ಎಂದು ಸುಧೀಂದ್ರನ್ ಹೇಳಿದ್ದಾರೆ.

ವಿಜಯನ್ ಅವರಿಗೂ ಮುಂಚಿನ ಮುಖ್ಯಮಂತ್ರಿ ಊಮನ್ ಚಾಂಡಿ ಎಂದಿಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಉತ್ಸುಕರಾಗಿರುತ್ತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT