ಎಟಿಎಂಗಳಲ್ಲಿ ಸರತಿ ಸಾಲು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಸರ್ಕಾರದ ಸೂಚನೆ ಇದ್ದರೂ ಎಟಿಎಂಗಳು ಭರ್ತಿಯಾಗಿಲ್ಲ ಏಕೆ?: ಬ್ಯಾಂಕ್ ಗಳಿಗೆ ಕೇಂದ್ರದ ಪ್ರಶ್ನೆ

500 ಮತ್ತು 1000 ರು.ನೋಟುಗಳ ನಿಷೇಧ ಬೆನ್ನಲ್ಲೇ ಎಟಿಎಂಗಳಿಗೆ 100ರು.ಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಿದ್ದರೂ ಸಾಕಷ್ಟು ಎಟಿಎಂಗಳು ಖಾಲಿಯಾಗಿದ್ದರ ಕುರಿತಂತೆ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: 500 ಮತ್ತು 1000 ರು.ನೋಟುಗಳ ನಿಷೇಧ ಬೆನ್ನಲ್ಲೇ ಎಟಿಎಂಗಳಿಗೆ 100ರು.ಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಿದ್ದರೂ ಸಾಕಷ್ಟು ಎಟಿಎಂಗಳು ಖಾಲಿಯಾಗಿದ್ದರ ಕುರಿತಂತೆ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡಿದೆ.

ನೋಟು ನಿಷೇಧದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಟಿಎಂಗಳನ್ನು 100 ರು. ನೋಟುಗಳಿಂದ ಭರ್ತಿ ಮಾಡುವಂತೆ ಸೂಚನೆ ನೀಡಿತ್ತಾದರೂ, ಬಹುತೇಕ ಎಟಿಎಂಗಳಲ್ಲಿ ಹಣ ಭರ್ತಿಯಾಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಅಸಮಾಧಾನಗಳು ಆಕ್ರೋಶಗಳು ವ್ಯಕ್ತವಾಗಿದ್ದವು. ಹೊಸ ನೋಟುಗಳು ಇಂದಿನಿಂದ ಎಟಿಎಂಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದ್ದು, ಗರಿಷ್ಟ ಪ್ರಮಾಣದ ನೋಟುಗಳಿಗೆ ಚಿಲ್ಲರೆ ಹಂಚಿಕೆ ಮಾಡುವುದು ಮಧ್ಯಮ ಗಾತ್ರದ ವ್ಯಾಪರಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಜನರ ಭವಣೆ ಮುಂದುವರೆದಿರುವಂತೆಯೇ ಮತ್ತು ನೋಟುಗಳ ನಿಷೇಧದ ಬಳಿಕ ದೇಶಾದ್ಯಂತ ಉಲ್ಬಣಗೊಂಡಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ಎಟಿಎಂಗಳ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು, ಜಿಲ್ಲೆಗೊಂದು ಎಟಿಎಂನಲ್ಲಿ 100 ರು. ನೋಟುಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಆ ಕಾರ್ಯವನ್ನು ಮಾಡಲಾಗಿದೆ.
ನೋಟು ನಿಷೇಧದ ಬಳಿಕ ಚಿಲ್ಲರೆಗೆ ವ್ಯಾಪಕ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಸಮಸ್ಯೆ ಉಲ್ಬಣವಾಗಿದೆ ಎಂದು ಹೇಳಿದರು.

ಇನ್ನು ಹೊಸ ನೋಟುಗಳು ಇಂದಿನಿಂದಲೇ ಎಟಿಎಂಗಳಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆಯಾದರೂ ಬಹುತೇಕ ಎಟಿಎಂಗಳಲ್ಲಿ ಹೊಸ ನೋಟು ವಿತರಣೆಗೆ ಬೇಕಾದ ತಾಂತ್ರಿಕ ಲೋಪದೋಷಗಳನ್ನು ಇನ್ನೂ ಸರಿಪಡಿಸಿಲ್ಲ.  ಹೀಗಾಗಿ ಎಟಿಎಂಗಳಲ್ಲಿ ಹೋಸ ನೋಟುಗಳ ಕೊರತೆ ಮತ್ತೊಂದಿಷ್ಟು ದಿನ ಮುಂದುವರೆಯುವ ಸಾಧ್ಯತೆ ಇದ್ದು, ಹಳೆಯ 100 ರು.ಮುಖಬೆಲೆಯ ನೋಟುಗಳೇ ದೊರೆಯುವ ಸಾಧ್ಯತೆ ಇದೆ.

ಒಟ್ಟಾರೆ ನೋಟು ನಿಷೇಧವಾಗಿ ಒಂದು ವಾರವೇ ಕಳೆದರೂ ಜನರ ಪರದಾಟ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹೊಸ ನೋಟು ಪಡೆಯಲು ಹಾಗೂ ಹಳೆಯ ನೋಟುಗಳ ಬದಲಾವಣೆ ಮತ್ತು ಠೇವಣಿಗಾಗಿ ಬ್ಯಾಂಕುಗಳ ಮುಂದೆ  ಜನರ ಸರತಿ ಸಾಲು ಮುಂದುವರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT