ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ನಾಲ್ಕು ತಿಂಗಳ ಗಲಭೆಯುಕ್ತ ವಾತಾವರಣದಿಂದ ಸಹಜಸ್ಥಿತಿಗೆ ಮರಳಿದ ಕಾಶ್ಮೀರ

೧೩೨ ದಿನಗಳಿಂದ ಬಂದ್ ಆಗಿದ್ದ ಕಾಶ್ಮೀರ ಕಣಿವೆ ಶನಿವಾರದಿಂದ ಮತ್ತೆ ಜೀವಂತವಾಗಿ ಚಟುವಟಿಕೆಯಿಂದ ಕೂಡಿದೆ. ರಸ್ತೆಯ ಮೇಲೆ ಹಲವಾರು ವಾಹನಗಳು ಓಡಾಡುತ್ತಿದ್ದು, ಮಾರುಕಟ್ಟೆಗಳು, ಶಾಲೆಗಳು

ಶ್ರೀನಗರ: ೧೩೨ ದಿನಗಳಿಂದ ಬಂದ್ ಆಗಿದ್ದ ಕಾಶ್ಮೀರ ಕಣಿವೆ ಶನಿವಾರದಿಂದ ಮತ್ತೆ ಜೀವಂತವಾಗಿ ಚಟುವಟಿಕೆಯಿಂದ ಕೂಡಿದೆ. ರಸ್ತೆಯ ಮೇಲೆ ಹಲವಾರು ವಾಹನಗಳು ಓಡಾಡುತ್ತಿದ್ದು, ಮಾರುಕಟ್ಟೆಗಳು, ಶಾಲೆಗಳು ಮತ್ತು ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. 
ನೋಟು ಹಿಂಪಡೆತದ ಬಿಸಿ ತಟ್ಟಿದ್ದರೂ ಶ್ರೀನಗರದ ಮಾರುಕಟ್ಟೆಗಳಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗಾರರು ಭಾಗಿಯಾಗಿದ್ದಾರೆ. 
ಇಂದು ಬೆಳಗಿನಿಂದಲೇ ಬಸ್ ಗಳು ಮತ್ತು ಇತರ ಸಾರ್ವಜನಿಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಜನರು ತಮ್ಮ ಹಣ ಹಿಂಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸಾಲುಗಟ್ಟುತ್ತಿರುವುದು ಕೂಡ ಸಾಮಾನ್ಯವಾಗಿದೆ. 
ಗಲಭೆ ಪ್ರರಾಂಭವಾದಾಗಿಲಿಂದಲೂ ಮೊದಲ ಬಾರಿಗೆ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳು ಹಾಜರಿ ಬಹುತೇಕ ಸಂಪೂರ್ಣವಾಗಿದೆ. 
ಜುಲೈ ೮ ರಿಂದ ಹಿಜಬುಲ್ ಕಮ್ಯಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆಗೈದಾಗಿಲಿಂದಲೂ ಪ್ರಾರಂಭವಾಗಿದ್ದ ಹಿಂಸಾಚಾರದಿಂದ ೧೦೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಪ್ರತಿಭಟನೆಗಳನ್ನು ಮುನ್ನಡೆಸುತ್ತಿದ್ದ ಪ್ರತ್ಯೇಕವಾದಿ ನಾಯಕರು ಎರಡು ದಿನಗಳವರೆಗೆ ಪ್ರತಿಭಟನೆಗಳನ್ನು ಹಿಂಪಡೆದಿದ್ದು, ವಾರಾಂತ್ಯದಲ್ಲಿ ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದಾರೆ. 
ಅಧಿಕಾರಿಗಳು ಕೂಡ ಶನಿವಾರ ಯಾವುದೇ ಪ್ರದೇಶದಲ್ಲಿ ನಿರ್ಬಂಧಗಳನ್ನು ಹೇರಿಲ್ಲ. ಶ್ರೀನಗರದಲ್ಲಿ ಹಲವು ಕಡೆ ವಾಹನ ದಟ್ಟಣೆ ಕೂಡ ಕಂಡುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT