ನವದೆಹಲಿ: ಉರಿ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರಿಗಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಡೊಂದನ್ನು ಹಾಡಲಿದ್ದಾರೆ.
ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ನಾಯಕ ತರುಣ್ ವಿಜಯ್, ಹುತಾತ್ಮ ಯೋಧರಿಗಾಗಿ ಸಂಯೋಜಿಸಲಾಗಿರುವ ಹಾಡಿಗೆ ಧ್ವನಿ ನೀಡುವಂತೆ ಅಮಿತಾಬ್ ಬಚ್ಚನ್ ಅವರಲ್ಲಿ ಮನವಿ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಹಾಡಲಿರುವ ಹಾಡನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿಯೇ ಸಂಯೋಜಿಸಲಾಗಿದೆ.
ವರ್ಷದ ಪ್ರಾರಂಭದಲ್ಲಿ ನಡೆದ ವಿಶ್ವಕಪ್ ಟಿ-20 ಪಂದ್ಯದಲ್ಲಿ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡುವ ಮೂಲಕ ಭಾರತ ಕ್ರಿಕೆಟ್ ತಂಡವನ್ನು ಉತ್ತೇಜಿಸಿದ್ದರು. ಈಗ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸಂಯೋಜನೆ ಮಾಡಲಾಗಿರುವ ಹಾಡಿಗೆ ಬಿಗ್ ಬಿ ಧ್ವನಿ ನೀಡಲಿದ್ದಾರೆ.