ರಕ್ಷಣಾ ಸಚಿವ ಮನೋಹರ್ ಪರ್ರಿಕರ್ 
ಪ್ರಧಾನ ಸುದ್ದಿ

ಸೇನಾ 'ನಿರ್ಧಿಷ್ಟ ದಾಳಿ'ಯನ್ನು ಬಿಜೆಪಿ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿದೆ: ವಿಪಕ್ಷ

ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ನಡೆಸಿದ ನಿರ್ಧಿಷ್ಟ ದಾಳಿಯ ಶ್ರೇಯಸ್ಸಿನ ದೊಡ್ಡ ಭಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂಬ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಹೇಳಿಕೆಯನ್ನು ಬುಧವಾರ ಖಂಡಿಸಿರುವ

ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ನಡೆಸಿದ ನಿರ್ಧಿಷ್ಟ ದಾಳಿಯ ಶ್ರೇಯಸ್ಸಿನ ದೊಡ್ಡ ಭಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂಬ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಹೇಳಿಕೆಯನ್ನು ಬುಧವಾರ ಖಂಡಿಸಿರುವ ವಿರೋಧ ಪಕ್ಷಗಳು, ಬಿಜೆಪಿ ಈ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
"ಬಿಜೆಪಿ ಪಕ್ಷದ ಎರಡು ನಾಲಿಗೆಯ ಪ್ರದರ್ಶನ ಇದು. ಅವರದ್ದು ಇಂದಿಗೂ ಎರಡು ಮಾತು" ಎಂದು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಹೇಳಿದ್ದಾರೆ. 
"ಈ ದಾಳಿಯ ಬಗ್ಗೆ ಎದೆ ತಟ್ಟಿಕೊಳ್ಳುವ ಅವಶ್ಯಕತೆ ಇಲ್ಲ ಎಂಬ ನಿಲುವನ್ನು ಮೋದಿ ವ್ಯಕ್ತಪಡಿಸುತ್ತಾರೆ ಆದರೆ ಅವರ ಸಂಪುಟ ಸಚಿವರು ಮತ್ತು ಕಾರ್ಯಕರ್ತರು ಅವರು ದೇವಮಾನವ ರಾಮ ಎಂದು ಪೋಸ್ಟರ್ ಗಳನ್ನು ಹಚ್ಚುತ್ತಾರೆ" ಎಂದು ಝಾ ಹೇಳಿದ್ದಾರೆ. 
ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣಾ ಲಾಭಕ್ಕಾಗಿ ಈ ನಿರ್ಧಿಷ್ಟ ದಾಳಿಗಳನ್ನು ಬಿಜೆಪಿ ಪಕ್ಷ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 
ಮುಂಬೈನ ಒಂದು ಕಾರ್ಯಕ್ರಮದಲ್ಲಿ ಭದ್ರತಾ ಸಚಿವ ಮನೋಹರ್ ಪರ್ರಿಕರ್ "ಗಡಿ ರೇಖೆಯಲ್ಲಿ ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿ ಸೇನೆ ನಡೆಸಿದ ನಿರ್ಧಿಷ್ಟ ದಾಳಿಯ ಶ್ರೇಯಸ್ಸಿನ ದೊಡ್ಡ ಭಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು" ಎಂದಿದ್ದ ಹೇಳಿಕೆಗೆ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ. 
"ಈ ಹಿಂದೆ ಕೂಡ ನಿರ್ದಿಷ್ಟ ದಾಳಿಗಳು ನಡೆದಿರುವುದಕ್ಕೆ ಆಪರೇಷನ್ ಜಿಂಜರ್ (2011) ಸಾಕ್ಷಿ" ಎಂದು ಕೂಡ ಝಾ ಹೇಳಿದ್ದಾರೆ. 
2011 ರಲ್ಲಿ 'ಆಪರೇಷನ್ ಜಿಂಜರ್' ಹೆಸರಿನಲ್ಲಿ ನಡೆದಿದ್ದ ದಾಳಿಯಲ್ಲಿ ಕನಿಷ್ಠ 8 ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿದ್ದಲ್ಲದೆ ಮತ್ತೆ ಹಲವರು ಗಾಯಗೊಂಡಿದ್ದರು. 
ಕಾಂಗ್ರೆಸ್ ಆರೋಪಗಳನ್ನು ಧ್ವನಿಸಿರುವ ಸಿಪಿಐ ಮುಖಂಡ ಡಿ ರಾಜ ಕೂಡ "ರಾಜಕೀಯ ಲಾಭಕ್ಕಾಗಿ ನಿರ್ಧಿಷ್ಟ ದಾಳಿಗಳನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ" ಎಂದು ಹೇಳಿದ್ದಾರೆ. 
"ಭಾರತೀಯ ಸೇನೆ ಸಿಕ್ಕಬೇಕಾದ ಖ್ಯಾತಿಯನ್ನು ಹಂಚುವುದೇಕೆ? ದಾಳಿ ನಡೆಸಿದ್ದು ಭಾರತೀಯ ಸೇನೆ ಬೇರೆ ಯಾವುದೋ ರಾಜಕೀಯ ಪಕ್ಷದ ಸೇನೆಯಲ್ಲ" ಎಂದು ಕೂಡ ಸಿಪಿಐ ಮುಖಂಡ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT