ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಮೈಸೂರಿಂದ ಚೆನ್ನೈಗೆ ಸೆಮಿ ಹೈಸ್ಪೀಡ್ ರೈಲು, 4 ಗಂಟೆ, 45 ನಿಮಿಷ ಪ್ರಯಾಣ ಅಷ್ಟೇ

ಇನ್ನುಮುಂದೆ ನೀವು ಮೈಸೂರಿನಿಂದ ಚೆನ್ನೈಗೆ ಕೇವಲ 4 ಗಂಟೆ, 45 ನಿಮಿಷಗಳಲ್ಲೇ ಹೋಗಬಹುದು.

ನವದೆಹಲಿ: ಇನ್ನುಮುಂದೆ ನೀವು ಮೈಸೂರಿನಿಂದ ಚೆನ್ನೈಗೆ ಕೇವಲ 4 ಗಂಟೆ, 45 ನಿಮಿಷಗಳಲ್ಲೇ ಹೋಗಬಹುದು.

ಹೌದು. ಮೈಸೂರು, ಬೆಂಗಳೂರು - ಚೆನ್ನೈ ಮಧ್ಯ 160 ಕಿ.ಮೀ ವೇಗದ ಸೆಮಿ ಹೈಸ್ಪೀಡ್ ರೈಲು ಯೋಜನೆ ಸಿದ್ಧವಾಗಿದ್ದು, ಇದಕ್ಕಾಗಿ 4,350 ಕೋಟಿ ರುಪಾಯಿ ವೆಚ್ಚ ಮಾಡಬೇಕಾಗದ ಅಗತ್ಯವಿದೆ.

ಈ ಸಂಬಂಧ ಚೀನಾ ಕಂಪನಿಯೊಂದು ಕಳೆದ ವಾರ ರೈಲ್ವೆ ಮಂಡಳಿಗೆ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಲ್ಲಿಸಿದ್ದು, ಮೈಸೂರಿನಿಂದ ಚೆನ್ನೈಗೆ 500 ಕಿ.ಮೀ.ದೂರವನ್ನು ಕ್ರಮಿಸಲು ಕೇವಲ 4ಗಂಟೆ 45 ನಿಮಿಷ ಸಾಕು ಎಂದು ಹೇಳಿದೆ. ಪ್ರಸ್ತೂತ ಈ ಮಾರ್ಗದಲ್ಲಿ ಸಂಚರಿಸುವ ಅತಿ ವೇಗದ ರೈಲು ಶತಾಬ್ದಿ ಎಕ್ಸ್ ಪ್ರೆಸ್ 7ಗಂಟೆ ತೆಗೆದುಕೊಳ್ಳುತ್ತಿದೆ.

ಮೈಸೂರಿನಿಂದ ಚೆನ್ನೈ ನಡುವಿನ ಸಂಪೂರ್ಣ ಮಾರ್ಗವನ್ನು ಮೇಲ್ದರ್ಜೆಗೇರಿಸಲು 4,350 ಕೋಟಿ ರುಪಾಯಿ ವೆಚ್ಚವಾಗುತ್ತದೆ ಮತ್ತು ಬೆಂಗಳೂರಿನಿಂದ ಚೆನ್ನೈಗೆ 3200 ಕೋಟಿ ರುಪಾಯಿ ವೆಚ್ಚವಾಗುತ್ತದೆ. ಒಂದು ವೇಳೆ ಬೆಂಗಳೂರಿನಿಂದ ಚೆನ್ನೈ ನಡುವಿನ ಮಾರ್ಗವನ್ನು ಮಾತ್ರ ಮೇಲ್ದರ್ಜೆಗೇರಿಸಿದರೆ ಈ ನಗರಗಳ ಮಧ್ಯ ಕೇವಲ 2ಗಂಟೆ 50 ನಿಮಿಷದಲ್ಲಿ ರೈಲು ಸಂಚರಿಸಲಿದೆ ಎಂದು ವರದಿ ವಿವರಿಸಿದೆ.

ಮೈಸೂರು-ಬೆಂಗಳೂರು ಮಧ್ಯದ ಮಾರ್ಗದಲ್ಲಿ ಅತಿ ಹೆಚ್ಚು ಗುಡ್ಡಗಳಿರುವುದರಿಂದ ಇದು ತುಂಬಾ ಕಠಿಣ ಕಾರ್ಯವಾಗಿದೆ. ಬೆಂಗಳೂರು-ಮೈಸೂರು ಮಧ್ಯಯೇ ಅತಿ ಹೆಚ್ಚು ಬದಲಾವಣೆ ಮಾಡಬೇಕಾದ ಅಗತ್ಯ ಇದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಹಂತಗಳಲ್ಲಿ ಈ ಯೋಜನೆ ಆರಂಭಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು-ಚೈನ್ನೈ ಹಾಗೂ ಎರಡನೇ ಹಂತದಲ್ಲಿ ಬೆಂಗಳೂರು - ಮೈಸೂರು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಚೀನಾ ಕಂಪನಿ ಸಲ್ಲಿಸಿರುವ ವರದಿಯಲ್ಲಿ ರೈಲ್ವೆ ಮಂಡಳಿ ಹಲವು ಬದಲಾವಣೆಯನ್ನು ಮಾಡಿದ್ದು, ಅಂತಿಮ ವರದಿಯಲ್ಲಿ ಅವುಗಳನ್ನು ಸರಿಪಡಿಸುವಂತೆ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT