ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಾಂಬ್ ದಾಳಿ; ಕೇರಳ ಮೂಲದ ಇಸಿಸ್ ಉಗ್ರನ ಸಾವು!

ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ಅಮೆರಿಕ ಸೇನೆ ನಡೆಸಿದ್ದ ಅತೀ ದೊಡ್ಡ ಬಾಂಬ್ ದಾಳಿ ವೇಳೆ ಕೇರಳ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಕಾಸರಗೋಡು: ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ಅಮೆರಿಕ ಸೇನೆ ನಡೆಸಿದ್ದ ಅತೀ ದೊಡ್ಡ ಬಾಂಬ್ ದಾಳಿ ವೇಳೆ ಕೇರಳ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು  ತಿಳಿದುಬಂದಿದೆ.

ಅಮೆರಿಕ ಸೇನೆ ನಿನ್ನೆ ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ನಂಗರ್ಹಾರ್ ಪ್ರದೇಶದ ಮೇಲೆ ವಿಶ್ವದ 2ನೇ ಅತೀದೊಡ್ಡ ಬಾಂಬ್ ಮೊಅಬ್ ದಾಳಿ ನಡೆಸಿತ್ತು. ಈ ವೇಳೆ ಹಲವು ಇಸಿಸ್ ಉಗ್ರರು ಹತರಾಗಿದ್ದು, ಈ ಪೈಕಿ ಭಾರತದ ಕೇರಳ  ಮೂಲದ ಯುವಕ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿ ಯುವಕರ ಪೈಕಿ ಈತ ಕೂಡ ಓರ್ವನಾಗಿದ್ದು, ಈತ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವನು ಎಂದು  ತಿಳಿದುಬಂದಿದೆ. ಮೃತನನ್ನು 21 ವರ್ಷದ ಮುರ್ಷೀದ್ ಎಂದು ಗುರಿತಿಸಲಾಗಿದ್ದು, ಈತನ ಸಾವಿನ ಕುರಿತಂತೆ ಕೇರಳದ ಕಾಸರಗೋಡಿನಲ್ಲಿರುವ ಆತನ ಕುಟುಂಬಸ್ಥಕರಿಗೆ ಟೆಲಿಗ್ರಾಮ್ ಸಂದೇಶ ಬಂದಿದೆ.

ಮುರ್ಷೀದ್ ಸಹೋದರ ಸಂಬಂಧಿ ಹಫೀಜುದ್ದೀನ್ ಥೆಕೆ ಕೊಲೆತ್ ಎಂಬುವವರಿಗೆ ಸಂದೇಶ ಬಂದಿದ್ದು, ಮೃತದೇಹವನ್ನು ಆಫ್ಘಾನಿಸ್ತಾನದಲ್ಲೇ ಮಣ್ಣು ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು  ಅಂದರೆ ಕಳೆದ ಫೆಬ್ರವರಿಯಲ್ಲಿ ಮತ್ತೋರ್ವ ಕೇರಳ ಮೂಲದ ಯುವಕ ಇದೇ ಆಫ್ಘಾನಿಸ್ತಾನದ ಬುಡಕಟ್ಟು ಪ್ರದೇಶಗಳ ಮೇಲೆ ಅಮೆರಿಕ ಸೇನೆ ಡ್ರೋನ್ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸಾವಿಗೀಡಾಗಿದ್ದ.

ಕಳೆದ ವರ್ಷ ಕೇರಳ ಮೂಲದ 21 ಮಂದಿ ಯುವಕರು ದೇಶದಿಂದ ನಾಪತ್ತೆಯಾಗಿದ್ದರು. ಬಳಿಕ ಇವರ ಸಂಬಂಧಿಕರಿಗೆ ಬಂದ ಸಂದೇಶಗಳಲ್ಲಿ ಇವರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿರುವ ಕುರಿತು ಮಾಹಿತಿ  ಲಭ್ಯವಾಗಿತ್ತು. ಮೂಲತಃ ವಿವಿಧ ಕೋಮಿಗೆ ಸೇರಿದ್ದ ಇವರು ಬಳಿಕ ತಮ್ಮ ತಮ್ಮ ಧರ್ಮವನ್ನು ಬದಲಿಸಿಕೊಂಡು ಇಸ್ಲಾಂಗೆ ಮತಾಂತರಗೊಂಡಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT