ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಾಂಬ್ ದಾಳಿ; ಕೇರಳ ಮೂಲದ ಇಸಿಸ್ ಉಗ್ರನ ಸಾವು!

ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ಅಮೆರಿಕ ಸೇನೆ ನಡೆಸಿದ್ದ ಅತೀ ದೊಡ್ಡ ಬಾಂಬ್ ದಾಳಿ ವೇಳೆ ಕೇರಳ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಕಾಸರಗೋಡು: ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ಅಮೆರಿಕ ಸೇನೆ ನಡೆಸಿದ್ದ ಅತೀ ದೊಡ್ಡ ಬಾಂಬ್ ದಾಳಿ ವೇಳೆ ಕೇರಳ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು  ತಿಳಿದುಬಂದಿದೆ.

ಅಮೆರಿಕ ಸೇನೆ ನಿನ್ನೆ ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ನಂಗರ್ಹಾರ್ ಪ್ರದೇಶದ ಮೇಲೆ ವಿಶ್ವದ 2ನೇ ಅತೀದೊಡ್ಡ ಬಾಂಬ್ ಮೊಅಬ್ ದಾಳಿ ನಡೆಸಿತ್ತು. ಈ ವೇಳೆ ಹಲವು ಇಸಿಸ್ ಉಗ್ರರು ಹತರಾಗಿದ್ದು, ಈ ಪೈಕಿ ಭಾರತದ ಕೇರಳ  ಮೂಲದ ಯುವಕ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿ ಯುವಕರ ಪೈಕಿ ಈತ ಕೂಡ ಓರ್ವನಾಗಿದ್ದು, ಈತ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವನು ಎಂದು  ತಿಳಿದುಬಂದಿದೆ. ಮೃತನನ್ನು 21 ವರ್ಷದ ಮುರ್ಷೀದ್ ಎಂದು ಗುರಿತಿಸಲಾಗಿದ್ದು, ಈತನ ಸಾವಿನ ಕುರಿತಂತೆ ಕೇರಳದ ಕಾಸರಗೋಡಿನಲ್ಲಿರುವ ಆತನ ಕುಟುಂಬಸ್ಥಕರಿಗೆ ಟೆಲಿಗ್ರಾಮ್ ಸಂದೇಶ ಬಂದಿದೆ.

ಮುರ್ಷೀದ್ ಸಹೋದರ ಸಂಬಂಧಿ ಹಫೀಜುದ್ದೀನ್ ಥೆಕೆ ಕೊಲೆತ್ ಎಂಬುವವರಿಗೆ ಸಂದೇಶ ಬಂದಿದ್ದು, ಮೃತದೇಹವನ್ನು ಆಫ್ಘಾನಿಸ್ತಾನದಲ್ಲೇ ಮಣ್ಣು ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು  ಅಂದರೆ ಕಳೆದ ಫೆಬ್ರವರಿಯಲ್ಲಿ ಮತ್ತೋರ್ವ ಕೇರಳ ಮೂಲದ ಯುವಕ ಇದೇ ಆಫ್ಘಾನಿಸ್ತಾನದ ಬುಡಕಟ್ಟು ಪ್ರದೇಶಗಳ ಮೇಲೆ ಅಮೆರಿಕ ಸೇನೆ ಡ್ರೋನ್ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸಾವಿಗೀಡಾಗಿದ್ದ.

ಕಳೆದ ವರ್ಷ ಕೇರಳ ಮೂಲದ 21 ಮಂದಿ ಯುವಕರು ದೇಶದಿಂದ ನಾಪತ್ತೆಯಾಗಿದ್ದರು. ಬಳಿಕ ಇವರ ಸಂಬಂಧಿಕರಿಗೆ ಬಂದ ಸಂದೇಶಗಳಲ್ಲಿ ಇವರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿರುವ ಕುರಿತು ಮಾಹಿತಿ  ಲಭ್ಯವಾಗಿತ್ತು. ಮೂಲತಃ ವಿವಿಧ ಕೋಮಿಗೆ ಸೇರಿದ್ದ ಇವರು ಬಳಿಕ ತಮ್ಮ ತಮ್ಮ ಧರ್ಮವನ್ನು ಬದಲಿಸಿಕೊಂಡು ಇಸ್ಲಾಂಗೆ ಮತಾಂತರಗೊಂಡಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT