ಅಮೆರಿಕಾದಲ್ಲಿ ಹತ್ಯೆಯಾದ ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲ 
ಪ್ರಧಾನ ಸುದ್ದಿ

ಅಮೆರಿಕಾದಲ್ಲಿ ಭಾರತೀಯ ಎಂಜಿನಿಯರ್ ಹತ್ಯೆ; ಸತ್ಯ ನಾದೆಳ್ಲ ಖಂಡನೆ

'ಮಧ್ಯ ಪ್ರಾಚ್ಯ ದೇಶದ ನಾಗರಿಕರು' ಎಂದು ತಪ್ಪಾಗಿ ತಿಳಿದು, ನಮ್ಮ ದೇಶ ಬಿಟ್ಟು ತೊಲಗಿ ಎಂದು ಕಿರುಚಿ ಬಾರ್ ಒಂದರಲ್ಲಿ ಗುಂಡಿನ ದಾಳಿ ಮಾಡಿ ಒಬ್ಬ ಭಾರತಿಯನ್ನು ಹತ್ಯೆ ಮಾಡಿದ ಮತ್ತು ಮತ್ತೊಬ್ಬ

ನ್ಯೂಯಾರ್ಕ್: 'ಮಧ್ಯ ಪ್ರಾಚ್ಯ ದೇಶದ ನಾಗರಿಕರು' ಎಂದು ತಪ್ಪಾಗಿ ತಿಳಿದು, ನಮ್ಮ ದೇಶ ಬಿಟ್ಟು ತೊಲಗಿ ಎಂದು ಕಿರುಚಿ ಬಾರ್ ಒಂದರಲ್ಲಿ ಗುಂಡಿನ ದಾಳಿ ಮಾಡಿ ಒಬ್ಬ ಭಾರತಿಯನ್ನು ಹತ್ಯೆ ಮಾಡಿದ ಮತ್ತು ಮತ್ತೊಬ್ಬ ಗಾಯಗೊಳಿಸಿದ ಘಟನೆಯನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಖಂಡಿಸಿದ್ದಾರೆ. 
"ನಮ್ಮ ಸಮಾಜದಲ್ಲಿ ಹಿಂಸೆಗೆ ಮತ್ತು ಕೋಮು ಅಸಹಿಷ್ಣುತೆಗೆ ಜಾಗವಿಲ್ಲ. ಕಾನ್ಸಾಸ್ ನಲ್ಲಿ ನಡೆದ ಈ ಭೀಕರ ದಾಳಿಯ ಸಂತ್ರಸ್ತರಿಗೆ ನಾನು ಮರುಗುತ್ತೇನೆ" ಎಂದು ಭಾರತೀಯ ಮೂಲದ ಸಿಇಒ ಟ್ವೀಟ್ ಮಾಡಿದ್ದಾರೆ. 
ಅಮೆರಿಕಾದ ಕಾನ್ಸಾಸ್ ನ ಓಲಾಥೇಯಲ್ಲಿನ ಬಾರ್ ಒಂದರಲ್ಲಿ ೫೧ ವರ್ಷದ ನೌಕಾದಳದ ಅಧಿಕಾರಿ ಬುಧವಾರ ರಾತ್ರಿ ಗುಂಡು ಹಾರಿಸಿ ೩೨ ವರ್ಷದ ಶ್ರೀನಿವಾಸ್ ಕುಚಿಬೋಟ್ಲ ಅವರನ್ನು ಹತ್ಯೆಗೈದು ೩೨ ವರ್ಷದ ಅಲೋಕ್ ಮದಸಾನಿ ಅವರಿಗೆ ಗಾಯಗೊಳಿಸಿದ್ದಾನೆ. 
ಈ ದಾಳಿಕೋರನನ್ನು ಆ್ಯಡಮ್ ಪುರಿಂಟೋನ್ ಎಂದು ಗುರುತಿಸಲಾಗಿದೆ. ಭಾರತೀಯರನ್ನು ಉಳಿಸಲು ೨೪ ವರ್ಷದ ಇಯಾನ್ ಗ್ರಿಲ್ಲಾತ್ ಎಂಬುವವರು ಮಧ್ಯ ಪ್ರವೇಶಿಸಿದಾಗ ಅವರಿಗೂ ಗಾಯವಾಗಿದೆ. 
ಶ್ರೀನಿವಾಸ್ ಹೈದರಾಬಾದ್ ಮೂಲದವರಾಗಿದ್ದರೆ, ಅಲೋಕ್ ಅವರು ತೆಲಂಗಾಣದ ವಾರಂಗಲ್ ಮೂಲದವರು. ಇವರಿಬ್ಬರು ಗಾರ್ಮಿನ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT