ಅಮೆರಿಕಾದಲ್ಲಿ ಹತ್ಯೆಯಾದ ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲ 
ಪ್ರಧಾನ ಸುದ್ದಿ

ಅಮೆರಿಕಾದಲ್ಲಿ ಭಾರತೀಯ ಎಂಜಿನಿಯರ್ ಹತ್ಯೆ; ಸತ್ಯ ನಾದೆಳ್ಲ ಖಂಡನೆ

'ಮಧ್ಯ ಪ್ರಾಚ್ಯ ದೇಶದ ನಾಗರಿಕರು' ಎಂದು ತಪ್ಪಾಗಿ ತಿಳಿದು, ನಮ್ಮ ದೇಶ ಬಿಟ್ಟು ತೊಲಗಿ ಎಂದು ಕಿರುಚಿ ಬಾರ್ ಒಂದರಲ್ಲಿ ಗುಂಡಿನ ದಾಳಿ ಮಾಡಿ ಒಬ್ಬ ಭಾರತಿಯನ್ನು ಹತ್ಯೆ ಮಾಡಿದ ಮತ್ತು ಮತ್ತೊಬ್ಬ

ನ್ಯೂಯಾರ್ಕ್: 'ಮಧ್ಯ ಪ್ರಾಚ್ಯ ದೇಶದ ನಾಗರಿಕರು' ಎಂದು ತಪ್ಪಾಗಿ ತಿಳಿದು, ನಮ್ಮ ದೇಶ ಬಿಟ್ಟು ತೊಲಗಿ ಎಂದು ಕಿರುಚಿ ಬಾರ್ ಒಂದರಲ್ಲಿ ಗುಂಡಿನ ದಾಳಿ ಮಾಡಿ ಒಬ್ಬ ಭಾರತಿಯನ್ನು ಹತ್ಯೆ ಮಾಡಿದ ಮತ್ತು ಮತ್ತೊಬ್ಬ ಗಾಯಗೊಳಿಸಿದ ಘಟನೆಯನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಖಂಡಿಸಿದ್ದಾರೆ. 
"ನಮ್ಮ ಸಮಾಜದಲ್ಲಿ ಹಿಂಸೆಗೆ ಮತ್ತು ಕೋಮು ಅಸಹಿಷ್ಣುತೆಗೆ ಜಾಗವಿಲ್ಲ. ಕಾನ್ಸಾಸ್ ನಲ್ಲಿ ನಡೆದ ಈ ಭೀಕರ ದಾಳಿಯ ಸಂತ್ರಸ್ತರಿಗೆ ನಾನು ಮರುಗುತ್ತೇನೆ" ಎಂದು ಭಾರತೀಯ ಮೂಲದ ಸಿಇಒ ಟ್ವೀಟ್ ಮಾಡಿದ್ದಾರೆ. 
ಅಮೆರಿಕಾದ ಕಾನ್ಸಾಸ್ ನ ಓಲಾಥೇಯಲ್ಲಿನ ಬಾರ್ ಒಂದರಲ್ಲಿ ೫೧ ವರ್ಷದ ನೌಕಾದಳದ ಅಧಿಕಾರಿ ಬುಧವಾರ ರಾತ್ರಿ ಗುಂಡು ಹಾರಿಸಿ ೩೨ ವರ್ಷದ ಶ್ರೀನಿವಾಸ್ ಕುಚಿಬೋಟ್ಲ ಅವರನ್ನು ಹತ್ಯೆಗೈದು ೩೨ ವರ್ಷದ ಅಲೋಕ್ ಮದಸಾನಿ ಅವರಿಗೆ ಗಾಯಗೊಳಿಸಿದ್ದಾನೆ. 
ಈ ದಾಳಿಕೋರನನ್ನು ಆ್ಯಡಮ್ ಪುರಿಂಟೋನ್ ಎಂದು ಗುರುತಿಸಲಾಗಿದೆ. ಭಾರತೀಯರನ್ನು ಉಳಿಸಲು ೨೪ ವರ್ಷದ ಇಯಾನ್ ಗ್ರಿಲ್ಲಾತ್ ಎಂಬುವವರು ಮಧ್ಯ ಪ್ರವೇಶಿಸಿದಾಗ ಅವರಿಗೂ ಗಾಯವಾಗಿದೆ. 
ಶ್ರೀನಿವಾಸ್ ಹೈದರಾಬಾದ್ ಮೂಲದವರಾಗಿದ್ದರೆ, ಅಲೋಕ್ ಅವರು ತೆಲಂಗಾಣದ ವಾರಂಗಲ್ ಮೂಲದವರು. ಇವರಿಬ್ಬರು ಗಾರ್ಮಿನ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT