ನಜೀಬ್ ಜಂಗ್-ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಸಾರ್ವಜನಿಕವಾಗಿ ಕೇಜ್ರಿವಾಲ್ ವಿರುದ್ಧ ಎಂದಿಗೂ ಮಾತನಾಡಲಿಲ್ಲ: ಜಂಗ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ಎಂದಿಗೂ ಮಾತನಾಡಲಿಲ್ಲ ಎಂದು ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬುಧವಾರ ಹೇಳಿದ್ದಾರೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ಎಂದಿಗೂ ಮಾತನಾಡಲಿಲ್ಲ ಎಂದು ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬುಧವಾರ ಹೇಳಿದ್ದಾರೆ. 
ಸುದ್ದಿವಾಹಿನಿಯೊಂದಿಗೆ ಜಂಗ್ ನೀಡಿರುವ ಸಂದರ್ಶನದಲ್ಲಿ "ಯಾವುದೇ ವಿಷಯದಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ನಾನು ಎಂದಿಗೂ ಮಾತನಾಡಲಿಲ್ಲ. ನನ್ನೆಲ್ಲ ಕ್ರಮಗಳು ಕಡತಗಳ ಮೂಲಕ ಆಗುತ್ತಿದ್ದವು."
ಬಹುತೇಕ ಎಲ್ಲ ವಿಷಯಗಳಲ್ಲೂ ಆಮ್ ಆದ್ಮಿ ಪಕ್ಷದ ಜೊತೆಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ಒಪ್ಪಿಕೊಂಡಿರುವ ಜಂಗ್, ದೆಹಲಿ ಸರ್ಕಾರ ಕಳುಹಿಸಿದ್ದ ೮೦ ಕಡತಗಳನ್ನು ಹಿಂದಿರುಗಿಸಿದ್ದಾಗಿ ಹೇಳಿದ್ದಾರೆ. 
"ನಾವು ನಿಲುವಗಳ ಮೇಲೆ ಭಿನ್ನಾಭಿಪ್ರಯ ತಾಳುತ್ತಿದ್ದೆವು ಆದರೆ ವಾದ ಮಾಡುತ್ತಿರಲಿಲ್ಲ. ನಾನು ಮಾಡಿದ್ದು ಸಂವಿಧಾನದ ರಕ್ಷಣೆಗಾಗಿ ಮಾತ್ರ. 
"ದೆಹಲಿ ಸರ್ಕಾರದ ಮುಖ್ಯಸ್ಥರಿಗೆ ಕೆಲವು ನಿರ್ಬಂಧಗಳಿದ್ದವು ಮತ್ತು ನಾನು ಸಂವಿಧಾನವನ್ನು ಕಾಪಾಡಬೇಕಿತ್ತು" ಎಂದು ಜಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT