ಪ್ರಧಾನ ಸುದ್ದಿ

ಸಾರ್ವಜನಿಕವಾಗಿ ಕೇಜ್ರಿವಾಲ್ ವಿರುದ್ಧ ಎಂದಿಗೂ ಮಾತನಾಡಲಿಲ್ಲ: ಜಂಗ್

Guruprasad Narayana
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ಎಂದಿಗೂ ಮಾತನಾಡಲಿಲ್ಲ ಎಂದು ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬುಧವಾರ ಹೇಳಿದ್ದಾರೆ. 
ಸುದ್ದಿವಾಹಿನಿಯೊಂದಿಗೆ ಜಂಗ್ ನೀಡಿರುವ ಸಂದರ್ಶನದಲ್ಲಿ "ಯಾವುದೇ ವಿಷಯದಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ನಾನು ಎಂದಿಗೂ ಮಾತನಾಡಲಿಲ್ಲ. ನನ್ನೆಲ್ಲ ಕ್ರಮಗಳು ಕಡತಗಳ ಮೂಲಕ ಆಗುತ್ತಿದ್ದವು."
ಬಹುತೇಕ ಎಲ್ಲ ವಿಷಯಗಳಲ್ಲೂ ಆಮ್ ಆದ್ಮಿ ಪಕ್ಷದ ಜೊತೆಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ಒಪ್ಪಿಕೊಂಡಿರುವ ಜಂಗ್, ದೆಹಲಿ ಸರ್ಕಾರ ಕಳುಹಿಸಿದ್ದ ೮೦ ಕಡತಗಳನ್ನು ಹಿಂದಿರುಗಿಸಿದ್ದಾಗಿ ಹೇಳಿದ್ದಾರೆ. 
"ನಾವು ನಿಲುವಗಳ ಮೇಲೆ ಭಿನ್ನಾಭಿಪ್ರಯ ತಾಳುತ್ತಿದ್ದೆವು ಆದರೆ ವಾದ ಮಾಡುತ್ತಿರಲಿಲ್ಲ. ನಾನು ಮಾಡಿದ್ದು ಸಂವಿಧಾನದ ರಕ್ಷಣೆಗಾಗಿ ಮಾತ್ರ. 
"ದೆಹಲಿ ಸರ್ಕಾರದ ಮುಖ್ಯಸ್ಥರಿಗೆ ಕೆಲವು ನಿರ್ಬಂಧಗಳಿದ್ದವು ಮತ್ತು ನಾನು ಸಂವಿಧಾನವನ್ನು ಕಾಪಾಡಬೇಕಿತ್ತು" ಎಂದು ಜಂಗ್ ಹೇಳಿದ್ದಾರೆ. 
SCROLL FOR NEXT