ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಪಾಕ್ ಭಯೋತ್ಪಾದನೆಯಿಂದ ಹೊರಬಂದರೆ ಮಾತ್ರ ಮಾತುಕತೆ ಸಾಧ್ಯ: ಪ್ರಧಾನಿ ಮೋದಿ

ಪಾಕಿಸ್ತಾನ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಬಯಸುವುದಾದರೆ ಮೊದಲು ಭಯೋತ್ಪಾದನೆಯಿಂದ ಹೊರಬರಲಿ...

ನವದೆಹಲಿ: ಪಾಕಿಸ್ತಾನ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಬಯಸುವುದಾದರೆ ಮೊದಲು ಭಯೋತ್ಪಾದನೆಯಿಂದ ಹೊರಬರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ವಿದೇಶಾಂಗ ವ್ಯವಹಾರ ಸಚಿವಾಲಯ ದೆಹಲಿಯಲ್ಲಿ ಸಂಘಟಿಸಿದ ಎರಡನೇ ಫ್ಲ್ಯಾಗ್​ಶಿಪ್ ರೈಸೀನಾ ಮಾತುಕತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸಂಪೂರ್ಣ ದಕ್ಷಿಣ ಏಷ್ಯಾದಲ್ಲಿ ಶಾಂತಿಯುತ ಬಾಂಧವ್ಯಗಳು ಇರಬೇಕು ಎಂದು ನಾನು ಬಯಸುತ್ತೇನೆ. ಈ ದೃಷ್ಟಿಕೋನವೇ ನನಗೆ ಪಾಕಿಸ್ತಾನವೂ ಸೇರಿದಂತೆ ಎಲ್ಲ ಸಾರ್ಕ್ ರಾಷ್ಟ್ರಗಳನ್ನೂ ನನ್ನ ಪ್ರಮಾಣವಚನ ಸಮಾರಂಭಕ್ಕೆ ಕರೆಯುವಂತೆ ಪ್ರೇರೇಪಿಸಿತು. ಇದೇ ಕಾರಣಕ್ಕಾಗಿ ನಾನು ಲಾಹೋರ್​ವರೆಗೂ ಪ್ರಯಾಣ ಬೆಳೆಸಿದೆ. ಆದರೆ ಭಾರತ ಮಾತ್ರವೇ ಶಾಂತಿಗಾಗಿ ನಡೆದರೆ ಸಾಲದು. ಪಾಕಿಸ್ತಾನವೂ ಶಾಂತಿಯ ಮಾರ್ಗದಲ್ಲಿ ಪಯಣಿಸಬೇಕು ಎಂದಿದ್ದಾರೆ.
ಇದೇ ವೇಳೆ ಭಾರತ ಮತ್ತು ಚೀನಾಕ್ಕೆ ಅಭೂತಪೂರ್ವ ಅವಕಾಶಗಳಿದ್ದು, ಎರಡು ದೊಡ್ಡ ರಾಷ್ಟ್ರಗಳ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇರುವುದು ಅಸಹಜವಲ್ಲ. ಉಭಯ ರಾಷ್ಟ್ರಗಳೂ ಪರಸ್ಪರರ ಕಾಳಜಿ ಮತ್ತು ಹಿತಾಸಕ್ತಿಗಳ ಬಗ್ಗೆ ಸೂಕ್ಷ್ಮವಾಗಿರಬೇಕು ಮತ್ತು ಗೌರವಿಸಬೇಕು ಎಂದು ಮೋದಿ ಚೀನಾಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನಮ್ಮ ನಾಗರಿಕರ ರಕ್ಷಣೆ ಬಹಳ ಮುಖ್ಯವಾದದ್ದು. ಹಾಗಂತ ಸ್ವಹಿತಾಸಕ್ತಿ ಅನ್ನೋದಷ್ಟೇ ನಮ್ಮ ಸಂಸ್ಕೃತಿ ಹಾಗೂ ನಡವಳಿಕೆಯೂ ಅಲ್ಲ. ಹಲವು ಕಾರಣಗಳಿಗಾಗಿ, ಹಲವು ಮಜಲುಗಳಿಂದ ಜಗತ್ತು ಬದಲಾವಣೆಗಳ ಜತೆಗೆ ಬೆಳೆಯುತ್ತಿದೆ. ಇಡೀ ಜಗತ್ತಿಗೆ ಭಾರತದ ಬೆಳವಣಿಗೆ ಎಷ್ಟು ಮುಖ್ಯವೋ, ಭಾರತಕ್ಕೆ ಈ ಜಗತ್ತು ಅಷ್ಟೇ ಮುಖ್ಯ. ಜಗತ್ತಿನ ಇತರ ರಾಷ್ಟ್ರಗಳ ಜತೆಗೆ ಭಾರತಕ್ಕೆ ಬೇರ್ಪಡಿಸಲಾಗದ ನಂಟು ಏರ್ಪಡಬೇಕು ಎಂಬುದು ನಮ್ಮ ಆಸೆ ಎಂದು ಮೋದಿ ಹೇಳಿದರು.
ಅಭಿವೃದ್ಧಿ ದೃಷ್ಟಿಯಿಂದ ಅಮೆರಿಕ-ಭಾರತ ಪರಸ್ಪರ ಸಾಮರಸ್ಯದಿಂದ ಕೆಲಸ ಮಾಡುವ ಬಗ್ಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗೆ ಮಾತನಾಡಿದ್ದೇನೆ. ಇನ್ನು ರಷ್ಯಾ ನಮ್ಮ ಮಿತ್ರ ರಾಷ್ಟ್ರ. ಅಧ್ಯಕ್ಷ ಪುಟಿನ್ ಹಾಗೂ ನನ್ನ ನಡುವೆ ಸುದೀರ್ಘ ಮಾತುಕತೆಗಳು ನಡೆದಿವೆ. ನಮ್ಮ ನೆರೆ ರಾಷ್ಟ್ರವಾಗಿ ಹಿಂಸಾಚಾರ, ದ್ವೇಷ ಪ್ರೋತ್ಸಾಹಿಸಿ, ಭಯೋತ್ಪಾದನೆ ರಫ್ತು ಮಾಡಿದವರು ಏಕಾಂಗಿಯಾಗಿ, ತಿರಸ್ಕೃತರಾಗಿದ್ದಾರೆ ಎಂದು ಮೋದಿ ಪರೋಕ್ಷವಾಗಿ ಪಾಕ್ ಗೆ ತಿರುಗೇಟು ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT