ಹೈದರಾಬಾದ್: ಜನವರಿ ೧೭ ರನ್ನು 'ರೋಹಿತ್ ವೇಮುಲಾ ಶಹಾದತ್ ದಿನ'ವಾಗಿ ನೆನಪಿಸಿಕೊಳ್ಳುವ ವಿದ್ಯಾರ್ಥಿ ಸಂಘಟನೆಗಳ ಘೋಷಣೆಯಿಂದ ಎಚ್ಚೆತ್ತಿರುವ ಹೈದರಾಬಾದ್ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ, ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.
ಗುರುತಿನ ಚಹರೆಗಳನ್ನು (ಸಿಬ್ಬಂದಿ) ಹೊರತುಪಡಿಸಿದರೆ, ಗೇಟ್ ನಿಂದ ಒಳಗೆ ಹೋಗುವವರನ್ನು ತಡೆದು ತಪಾಸಣೆ ಮಾಡಿ ಗುರುತಿನ ಚೀಟಿ ಪ್ರದರ್ಶಿಸಲು ಕೇಳಲಾಗುತ್ತಿದೆ.
ಅಪರಾಹ್ನ ನಿಗದಿಯಾಗಿರುವ ಕಾರ್ಯಕ್ರಮಕ್ಕೆ, ಜೆ ಎನ್ ಯು ನಿಂದ ಕಾಣೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ, ಗೋಮಾಂಸ ನೆಪಕ್ಕೆ ಸೆಪ್ಟೆಂಬರ್ ೨೦೧೫ ರಲ್ಲಿ ಹತ್ಯೆಯಾದ ಮೊಹಮದ್ ಅಖಲಕ್ ಅವರ ಸಹೋದರ ಜಾನ್ ಮೊಹಮದ್, ಕಳೆದ ವರ್ಷ ಗುಜರಾತಿನ ಉನಾದಲ್ಲಿ ಗೋರಕ್ಷಕರು ಥಳಿಸಿದ ದಲಿತ ಯುವಕರು ಮತ್ತು ರೋಹಿತ್ ವೇಮುಲಾ ತಾಯಿ ಆಗಮಿಸುವ ಮುನ್ಸೂಚನೆಯಿದೆ.
ಹೊರಗಿನವರನ್ನು ವಿಶ್ವವಿದ್ಯಾಲಯದ ಆವರಣದ ಒಳಗೆ ಬಿಡುವುದಿಲ್ಲ ಎಂದು ಭದ್ರತಾ ಸಿಬ್ಬಂದಿ ಘೋಷಿಸಿದ್ದು "ಇಲ್ಲಿಯವರೆಗೂ ಯಾರು ಬಂದಿಲ್ಲ. ಕಾರ್ಯಕ್ರಮ ೩:೩೦ ಕ್ಕೆ ನಿಗದಿಯಾಗಿದೆ" ಎಂದು ಭದ್ರತಾ ಸಿಬ್ಬಂದಿಯೊಬ್ಬರು ಮಂಗಳವಾರ ಮಧ್ಯಾಹ್ನಕ್ಕೂ ಮೊದಲು ಪ್ರತಿಕ್ರಿಯಿಸಿದ್ದರು.
ಹೈದರಾಬಾದ್ ವಿಶ್ವವಿದ್ಯಾಲದ ಆವರಣದ ಒಳಹೋಗಲು ಪ್ರಯತ್ನಿಸಿದ ತೆಲಂಗಾಣ ಆಮ್ ಆದ್ಮಿ ಪಕ್ಷದ ಸದಸ್ಯರನ್ನು ತಡೆಯಲಾಗಿದೆ.
ಇದೇ ದಿನ ಕಳೆದ ವರ್ಷ ವಿಶ್ವವಿದ್ಯಾಲಯದ ಆವರಣದಲ್ಲಿ ದಲಿತ ಸಂಶೋಧಕ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos