ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

'ರೋಹಿತ್ ವೇಮುಲಾ ಶಹಾದತ್ ದಿನ'; ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಬಿಗಿ ಭದ್ರತೆ

ಜನವರಿ ೧೭ ರನ್ನು 'ರೋಹಿತ್ ವೇಮುಲಾ ಶಹಾದತ್ ದಿನ'ವಾಗಿ ನೆನಪಿಸಿಕೊಳ್ಳುವ ವಿದ್ಯಾರ್ಥಿ ಸಂಘಟನೆಗಳ ಘೋಷಣೆಯಿಂದ ಎಚ್ಚೆತ್ತಿರುವ ಹೈದರಾಬಾದ್ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ,

ಹೈದರಾಬಾದ್: ಜನವರಿ ೧೭ ರನ್ನು 'ರೋಹಿತ್ ವೇಮುಲಾ ಶಹಾದತ್ ದಿನ'ವಾಗಿ ನೆನಪಿಸಿಕೊಳ್ಳುವ ವಿದ್ಯಾರ್ಥಿ ಸಂಘಟನೆಗಳ ಘೋಷಣೆಯಿಂದ ಎಚ್ಚೆತ್ತಿರುವ ಹೈದರಾಬಾದ್ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ, ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. 
ಗುರುತಿನ ಚಹರೆಗಳನ್ನು (ಸಿಬ್ಬಂದಿ) ಹೊರತುಪಡಿಸಿದರೆ, ಗೇಟ್ ನಿಂದ ಒಳಗೆ ಹೋಗುವವರನ್ನು ತಡೆದು ತಪಾಸಣೆ ಮಾಡಿ ಗುರುತಿನ ಚೀಟಿ ಪ್ರದರ್ಶಿಸಲು ಕೇಳಲಾಗುತ್ತಿದೆ. 
ಅಪರಾಹ್ನ ನಿಗದಿಯಾಗಿರುವ ಕಾರ್ಯಕ್ರಮಕ್ಕೆ, ಜೆ ಎನ್ ಯು ನಿಂದ ಕಾಣೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ, ಗೋಮಾಂಸ ನೆಪಕ್ಕೆ ಸೆಪ್ಟೆಂಬರ್ ೨೦೧೫ ರಲ್ಲಿ ಹತ್ಯೆಯಾದ ಮೊಹಮದ್ ಅಖಲಕ್ ಅವರ ಸಹೋದರ ಜಾನ್ ಮೊಹಮದ್, ಕಳೆದ ವರ್ಷ ಗುಜರಾತಿನ ಉನಾದಲ್ಲಿ ಗೋರಕ್ಷಕರು ಥಳಿಸಿದ ದಲಿತ ಯುವಕರು ಮತ್ತು ರೋಹಿತ್ ವೇಮುಲಾ ತಾಯಿ ಆಗಮಿಸುವ ಮುನ್ಸೂಚನೆಯಿದೆ. 
ಹೊರಗಿನವರನ್ನು ವಿಶ್ವವಿದ್ಯಾಲಯದ ಆವರಣದ ಒಳಗೆ ಬಿಡುವುದಿಲ್ಲ ಎಂದು ಭದ್ರತಾ ಸಿಬ್ಬಂದಿ ಘೋಷಿಸಿದ್ದು "ಇಲ್ಲಿಯವರೆಗೂ ಯಾರು ಬಂದಿಲ್ಲ. ಕಾರ್ಯಕ್ರಮ ೩:೩೦ ಕ್ಕೆ ನಿಗದಿಯಾಗಿದೆ" ಎಂದು ಭದ್ರತಾ ಸಿಬ್ಬಂದಿಯೊಬ್ಬರು ಮಂಗಳವಾರ ಮಧ್ಯಾಹ್ನಕ್ಕೂ ಮೊದಲು ಪ್ರತಿಕ್ರಿಯಿಸಿದ್ದರು. 
ಹೈದರಾಬಾದ್ ವಿಶ್ವವಿದ್ಯಾಲದ ಆವರಣದ ಒಳಹೋಗಲು ಪ್ರಯತ್ನಿಸಿದ ತೆಲಂಗಾಣ ಆಮ್ ಆದ್ಮಿ ಪಕ್ಷದ ಸದಸ್ಯರನ್ನು ತಡೆಯಲಾಗಿದೆ. 
ಇದೇ ದಿನ ಕಳೆದ ವರ್ಷ ವಿಶ್ವವಿದ್ಯಾಲಯದ ಆವರಣದಲ್ಲಿ ದಲಿತ ಸಂಶೋಧಕ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT