ಹೊನ್ನೇಮರುಡು 
ಪ್ರವಾಸ-ವಾಹನ

ಹೊನ್ನಿನ ಬೆನ್ನೇರಿ

ಜೋಗ್‌ಫಾಲ್ಸ್‌ಗೆ ಹೋದವರು ಇಲ್ಲಿಗೆ ಹೋಗದಿದ್ದರೆ ಹೊನ್ನನ್ನು ತಪ್ಪಿಸಿಕೊಂಡಂತೆ! ಪುಟ್ಟದೊಂದು ದ್ವೀಪದಂತೆ ಇರುವ ಈ ಹೊನ್ನೇಮರುಡಿನ ಸೊಬಗನ್ನು ನೋಡಿಯೇ ಆನಂದಿಸಬೇಕು. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 20 ಕಿ.ಮೀ ಅಂತರದಲ್ಲಿದೆ. ಶರಾವತಿ ಹಿನ್ನೀರಿನಿಂದ ತುಂಬಿದ ಕಾರಣ ಫೈರ್ ಕ್ಯಾಂಪ್‌ಗೆ ಪ್ರಶಸ್ತ. ಒಂದು ರೀತಿಯಲ್ಲಿ ಅಗ್ನಿ ಮತ್ತು ಮಳೆ! ಸಾಹಸಿಗಳಿಗೆ ಕೇನೋಯಿಂಗ್, ರ್ಯಾಫ್ಟಿಂಗ್, ವಿಂಡ್ ಸರ್ಫಿಂಗ್, ಸ್ವಿಮ್ಮಿಂಗ್! ಪಕ್ಷಿಗಳು, ಚಿಟ್ಟೆಗಳು, ಚಿತ್ತಾರ ಕಲೆಗೆ ಪ್ರಸಿದ್ಧವಾದ ಗದ್ದೆಮನೆ, ಜೈನ ಬಸದಿಗಳು ಆಸುಪಾಸಲ್ಲೇ ಇವೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ, ಶರಾವತಿ ನದಿಯ ತಪ್ಪಲಲ್ಲಿ, ಮಲೆನಾಡಿನ ಕಾಡಿನ ಜೋಗುಳದಲ್ಲಿ ಕಳೆದುಹೋಗಲು ಇದು ಕಾಲ.  
ಟೆಂಟ್ ಕಟ್ಟಿಕೊಂಡು ಮಲಗುವ ವ್ಯವಸ್ಥೆ, ಬೆಳಗಿನಿಂದ ಸಂಜೆಯವರೆಗೆ ನೀರಿನಲ್ಲಿ ಆಟ, ತೆಪ್ಪದಲ್ಲಿ ತೇಲಾಟ ಹಾಗೂ ಬೋಟಿಂಗ್‌ನ ಭವ್ಯತೆಯೂ ಇದೆ.
ಬೆಂಗಳೂರಿಂದ 370 ಕಿಮೀರಸ್ತೆಯಲ್ಲಿ: 9 ಗಂಟೆ
ರೈಲಿನಲ್ಲಿ: ಬೆಂಗಳೂರಿನಿಂದ ತಾಳಗುಪ್ಪ ಅಥವಾ ಸಾಗರದವರೆಗೆ. ತಾಳಗುಪ್ಪದಿಂದ ಆಟೋ ಅಥವಾ ಓಮ್ನಿ.  ನಡೆಯಲು ಇಷ್ಟಪಡುವವರಾದರೆ ತಾಳಗುಪ್ಪದಿಂದ ಹಿರೇಮನೆ ಎಂಬಲ್ಲಿ ಇಳಿದು ಅಲ್ಲಿಂದ ಸುಮಾರು 5 ಕಿ.ಮೀ. ನಡೆದರಾಯಿತು.
ಫೋನ್: 08182-251444

ಯಾವಾಗ?
ವರ್ಷಪೂರ್ತಿ, ಮಳೆಗಾಲವೊಂದನ್ನುಳಿದು. 'ಮಳೆ ನಿಂತು ಹೋದ ಮೇಲೆ' ಬೆಸ್ಟ್!
ಮಳೆಗಾಲದಲ್ಲಿ ಇಲ್ಲಿ ಉಂಬಳಗಳ ಹಾವಳಿ ಬಹಳ. ಟ್ರಕ್ಕಿಂಗ್ ಹೋಗಬೇಕಾದರೆ ಬಹಳ ಮುಂಜಾಗರೂಕರಾಗಿ ಅದಕ್ಕೆ ಬೇಕಾದ ಶೂಗಳನ್ನೂ ಹಾಕಿಕೊಂಡು ಹೋಗುವುದು ಉತ್ತಮ. ಜೊತೆಗೆ ರೈನ್‌ಕೋಟ್ ಮತ್ತು ರಾತ್ರಿ ಸಮಯದಲ್ಲಿ ಬೇಕಾಗುವ ಬ್ಯಾಟರಿಯನ್ನು ಕೊಂಡೊಯ್ಯಬೇಕು. ಮೊದಲೇ ಬುಕ್ ಮಾಡಿಟ್ಟರೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುತ್ತದೆ. ಆದರೂ ಬಿಸ್ಕೆಟ್, ಚಿಪ್ಸ್ ಇಂತವುಗಳನ್ನೆಲ್ಲ ಮೊದಲೇ ಪ್ಯಾಕ್ ಮಾಡಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಹತ್ತಿರದಲ್ಲೆಲ್ಲೂ ಅಂಗಡಿಗಳಿಲ್ಲ.

-ಅರ್ಪಿತಾ ಹರ್ಷ
arpithasagar@ gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT