ವೋಲ್ವೋ ಎಸ್ 90 (ಸಂಗ್ರಹ ಚಿತ್ರ) 
ಪ್ರವಾಸ-ವಾಹನ

ಭಾರತದಲ್ಲಿ ರಾಡಾರ್ ತಂತ್ರಜ್ಞಾನ ಸಹಿತ ಕಾರು ಬಿಡುಗಡೆಗೆ ಮುಂದಾದ ವೋಲ್ವೋ

ಖ್ಯಾತ ಕಾರು ತಯಾರಿಕಾ ಸಂಸ್ಥೆ ವೋಲ್ವೋ, ಭಾರತದಲ್ಲಿ ತಾನು ಬಿಡುಗಡೆ ಮಾಡಬೇಕು ಎಂದು ಕೊಂಡಿರುವ ನೂತನ ಕಾರುಗಳಲ್ಲಿ ರಾಡಾರ್ ಆಧಾರಿತ ಸುರಕ್ಷತಾ ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ತರಲು ಮುಂದಾಗಿದೆ.

ನವದೆಹಲಿ: ಖ್ಯಾತ ಕಾರು ತಯಾರಿಕಾ ಸಂಸ್ಥೆ ವೋಲ್ವೋ, ಭಾರತದಲ್ಲಿ ತಾನು ಬಿಡುಗಡೆ ಮಾಡಬೇಕು ಎಂದು ಕೊಂಡಿರುವ ನೂತನ ಕಾರುಗಳಲ್ಲಿ ರಾಡಾರ್ ಆಧಾರಿತ ಸುರಕ್ಷತಾ  ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ತರಲು ಮುಂದಾಗಿದೆ.

ಮೂಲಗಳ ಪ್ರಕಾರ ವೋಲ್ವೋ ಸಂಸ್ಥೆಯ ನೂತನ ಎಸ್ 90 ಮಾದರಿಯ ಕಾರುಗಳಲ್ಲಿ ರಾಡಾರ್ ಆಧಾರಿತ ಸುರಕ್ಷತ್ರಾ ತಂತ್ರಜ್ಞಾನ ಅಳವಡಿಸುವುದಾಗಿ ವೋಲ್ವೋ ಹೇಳಿದೆ. ಈ ನೂತನ  ರಾಡಾರ್ ಸಹಿತ ಸುರಕ್ಷತಾ ತಂತ್ರಜ್ಞಾನದಿಂದಾಗಿ ಅಪಘಾತದಂತಹ ಘಟನೆಗಳನ್ನು ಸುಲಭವಾಗಿ ತಡೆಯಲು ಸಾಧ್ಯವಿದ್ದು, ಕಾರಿನಲ್ಲಿ ಅಳವಡಿಸಿರುವ ಸುರಕ್ಷತಾ ವ್ಯವಸ್ಥೆ ತನ್ನ ಸೆನ್ಸಾರ್  ಮೂಲಕ ಎದುರಿಗಿನ ಪಾದಾಚಾರಿ ಅಥವಾ ವಾಹನ ಇತರೆ ಯಾವುದೇ ವಸ್ತುವನ್ನು ಮೊದಲೇ ಗುರುತಿಸಿ ಕೂಡಲೇ ಸ್ವನಿಯಂತ್ರಿತ ಬ್ರೇಕ್ ಅಳವಡಿಸುತ್ತದೆ.

ಅಂತೆಯೇ ಈ ರಾಡಾರ್ ಸಹಿತ ತಂತ್ರಜ್ಞಾನದಿಂದಾಗಿ ನಾವು ತೆರಳಬೇಕಿರುವ ಮಾರ್ಗವನ್ನು ಸುಲಭವಾಗಿ ಮತ್ತು ನಿಖರವಾಗಿ ತಲುಪಲು ಸಾಧ್ಯ ಎಂದು ವೋಲ್ವೋ ಹೇಳಿಕೊಂಡಿದೆ.



ಟ್ರಾಯ್ ಅನುಮತಿಗಾಗಿ ಕಾದಿರುವ ವೋಲ್ವೋ
ಇನ್ನು ವೋಲ್ವೋ ಸಂಸ್ಥೆಯ ಉದ್ದೇಶಿತ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ವೋಲ್ವೋಗೆ ಭಾರತದ ಟ್ರಾಯ್ ಅನುಮತಿ ಬೇಕಿದ್ದು, ಪ್ರಸ್ತುತ ಈ ಬಗ್ಗೆ ವೋಲ್ವೋ ಸಂಸ್ಥೆ ಭಾರತ  ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ. ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ಈ ಹಿಂದೆ 2015 ಸೆಪ್ಟೆಂಬರ್ ನಲ್ಲಿ ರಾಡಾರ್ ನ 36-38 MHz, 433-434.79 MHz, 302 -351 kHz ಮತ್ತು 76-77 GHz ಫ್ರೀಕ್ವೆಂನ್ಸಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಹೀಗಾಗಿ ರಾಡಾರ್ ತಂತ್ರಜ್ಞಾನದ ಬಳಕೆಗೆ ಟ್ರಾಯ್ ನ ಅನುಮತಿ ಬೇಕಿದೆ.

ಈ ಹಿಂದೆ ಇದೇ ತಂತ್ರಜ್ಞಾನ ಹೊಂದಿದ್ದ ವೋಲ್ವೋ ಎಕ್ಸ್ ಸಿ 90 ಕಾರುಗಳನ್ನು ಭಾರತದಲ್ಲಿ ಮಾರಾಟಕ್ಕೆ ಮಾಡಲು ವೋಲ್ವೋ ಸಂಸ್ಥೆ ಮುಂದಾಗಿತ್ತಾದರೂ, ಟ್ರಾಯ್ ಅನುಮತಿ ನಿರಾಕರಿಸಿದ  ಹಿನ್ನಲೆಯಲ್ಲಿ ಸ್ವೀಡಿಷ್ ಮೂಲದ ತಯಾರಿಕಾ ಸಂಸ್ಥೆ ಈ ಮಾದರಿ ತಂತ್ರಜ್ಞಾನದ ಕಾರುಗಳನ್ನು ಹಿಂದಕ್ಕೆ ಪಡೆದಿತ್ತು. ಇದೀಗ ಮತ್ತೆ ರಾಡಾರ್ ಸಹಿತ ತಂತ್ರಜ್ಞಾನಕ್ಕಾಗಿ ವೋಲ್ವೋ ಭಾರತ  ಸರ್ಕಾರವನ್ನು ಸಂಪರ್ಕಿಸಿದ್ದು, ಒಂದು ವೇಳೆ ಸರ್ಕಾರ ಅನುಮತಿ ನೀಡಿದರೆ ಎಸ್ 90 ವಾಹನದೊಂದಿಗೆ ಈ ಹಿಂದೆ ತಯಾರಿಸಲಾಗಿದ್ದ ಎಕ್ಸ್ ಸಿ90 ಕಾರುಗಳನ್ನು ಕೂಡ ವೋಲ್ವೋ ಭಾರತದಲ್ಲಿ  ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT