ರಾಜ್ಯಕ್ಕೆ ನಬಾರ್ಡ್ನಿಂದ ಕೃಷಿ ಸಾಲ ಕಡಿತ: ಸಿಎಂ ಸಿದ್ದು; ರಾಜ್ಯದಲ್ಲಿ 22 ಲಕ್ಷ ನಕಲಿ BPL ಕಾರ್ಡ್ ಪತ್ತೆ; ಸಿಪಿವೈ ವಿರುದ್ಧ ಪುತ್ರನಿಂದ ದೂರು!
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಂದ ಈ ವರ್ಷ ರಾಜ್ಯಕ್ಕೆ ಸಾಲದ ಮೊತ್ತವನ್ನು ಕಡಿತ ಮಾಡಿದ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.