ಪುತ್ರಿ ಪಿಕ್ಸಿ ಜತೆ ಜೆನ್ನಿ ಬ್ಲೂಎಟ್ 
ಮಹಿಳೆ-ಮನೆ-ಬದುಕು

ಪತಿ ಸಾವಿಗೀಡಾಗಿ ಒಂದು ವರ್ಷದ ನಂತರ ಆತನದ್ದೇ ಮಗುವಿಗೆ ಜನ್ಮಕೊಟ್ಟಳು!

ಪತಿ ಸಾವಿಗೀಡಾಗಿ ಒಂದು ವರ್ಷ ಕಳೆದಿದೆ. ಆದರೆ ಒಂದು ವರ್ಷದ ನಂತರ ಆತನ ಪತ್ನಿ ಆತನ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾಳೆ...

ಮೆರ್ಸೆಸೈಡ್: ಪತಿ ಸಾವಿಗೀಡಾಗಿ ಒಂದು ವರ್ಷ ಕಳೆದಿದೆ. ಆದರೆ ಒಂದು ವರ್ಷದ ನಂತರ ಆತನ ಪತ್ನಿ ಆತನ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾಳೆ. ಇಂಗ್ಲೆಂಡ್‌ನ ಮೆರ್ಸೆಸೈಡ್‌ನ ಜೆನ್ನಿ ಬ್ಲೂಎಟ್  (31) ಎಂಬಾಕೆ ತನ್ನ ಪತಿ ಜಿಂ ಸಾವಿಗೀಡಾಗಿ ಒಂದು ವರ್ಷದ ನಂತರ ಆತನದ್ದೇ ವೀರ್ಯವನ್ನು ಬಳಸಿ ಗರ್ಭ ಧರಿಸಿ, ಗಂಡನ ಆಸೆ ಈಡೇರಿಸಿದ್ದಾರೆ.

ವಿಧಿವಶನವಾಗಿರುವ ಪತಿಯ ಇಚ್ಛೆಯನುಸಾರವಾಗಿ ಜೆನ್ನಿ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಐವಿಎಫ್ ( In vitro fertilisation ) ಮೂಲಕ ಪತಿಯ ವೀರ್ಯದಿಂದ ಅವಳಿ ಮಕ್ಕಳಿಗೆ ಅಮ್ಮನಾಗಿದ್ದಾಳೆ ಈಕೆ. ಇದರಲ್ಲಿ ಒಂದು ಮಗು 23 ದಿನವಷ್ಟೇ ಬದುಕಿತ್ತು. ಆದರೆ ಈಗ 16 ತಿಂಗಳಾಗಿರುವ ತಮ್ಮ ಪುತ್ರಿ ಪಿಕ್ಸಿ ಜತೆಗೆ ನಾನು ಸಂತಸದಿಂದ ಇದ್ದೇನೆ ಅಂತಾರೆ ಜೆನ್ನಿ.

ತನ್ನ ಮರಣಾನಂತರ ತನ್ನ ಪತ್ನಿ ಒಬ್ಬಂಟಿಯಾಗಿ ಬಿಡುತ್ತಾಳಲ್ಲಾ ಎಂಬ ಆತಂಕ ಜಿಮ್‌ಗೆ ಇತ್ತು. ನಾನು ಮಗುವಿನ ಅಪ್ಪನಾಗಬೇಕೆಂಬ ಆಸೆ ಅವರಿಗಿತ್ತು. ಅವರ ಆಸೆಯನ್ನು ಈಡೇರಿಸುವುದಕ್ಕಾಗಿಯೇ ಐವಿಎಫ್ ಮೂಲಕ ಮಗು ಪಡೆಯುವಂತೆ ಮಾಡಿತು ಅಂತಾರೆ ಶಿಕ್ಷಕಿಯಾಗಿರುವ ಜೆನ್ನಿ. ಪಿಕ್ಸಿ ಜತೆಗೆ ಹುಟ್ಟಿದ ಲಿಲ್ಲಿ ಸಾವನ್ನಪ್ಪಿದ್ದರೂ, ಆ ಮಗು ಸ್ವರ್ಗದಲ್ಲಿ ಜಿಮ್ ಜತೆ ಇರುತ್ತದೆ ಎಂಬ ನಂಬಿಕೆಯಲ್ಲಿ ನಾನಿದ್ದೇನೆ ಎನ್ನುವುದು ಜೆನ್ನಿ ಮಾತು.


ಐರ್‌ಲ್ಯಾಂಡ್‌ನಲ್ಲಿ ರಜಾ ಕಳೆಯಲು ಹೋದಾಗ ಜೆನ್ನಿ, ಜಿಮ್‌ನ್ನು ಭೇಟಿಯಾಗಿದ್ದರು. ಅಲ್ಲಿ ಪ್ರೀತಿ ಮೊಳಕೆಯೊಡೆಯಿತು. ಆಮೇಲೆ ಇಬ್ಬರೂ ಜತೆಯಾಗಿ ವಾಸಿಸಲು ತೊಡಗಿದಾಗ ಜಿಮ್‌ಗೆ ಶ್ವಾಸಕೋಶ ಕ್ಯಾನ್ಸರ್ ಬಂದಿತ್ತು.  ಹಲವಾರು ವರ್ಷಗಳ ಕಾಲ ಚಿಕಿತ್ಸೆ ನಡೆಸಿದರೂ ಕ್ಯಾನ್ಸರ್ ನಿಂದ ಮುಕ್ತವಾಗಲು ಸಾಧ್ಯವಾಗಲಿಲ್ಲ. ಈ ನಡುವೆ 2011 ಡಿಸೆಂಬರ್ 23ರಂದು ಇವರಿಬ್ಬರೂ ವಿವಾಹವಾದರು.

ವಿವಾಹವಾಗಿ ಒಂದು ವರ್ಷ ಅಂದರೆ 2012 ಫೆಬ್ರವರಿಯಲ್ಲಿ ಜಿಮ್ ಮರಣ ಹೊಂದಿದ. ಸಾವಿಗೆ ಮುನ್ನ ಮಕ್ಕಳು ಬೇಕು  ಎಂದು ಜಿಮ್ ಆಗ್ರಹಿಸಿದ್ದರು. ಅದು ಸಾಧ್ಯವಾಗದೇ ಇದ್ದಾಗ ಆತನ ವೀರ್ಯಾಣುವನ್ನು ಸಂಗ್ರಹಿಸಿಡಲಾಗಿತ್ತು. ಜಿಮ್ ಸಾವಿಗೀಡಾಗಿ 1 ವರ್ಷದ ನಂತರ ಆ ವೀರ್ಯಾಣುವನ್ನು ಜೆನ್ನಿ ಗರ್ಭಪಾತ್ರದಲ್ಲಿರಿಸಿ ಮಗುವಿಗೆ ಜನ್ಮ ನೀಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT