ನಿವೇದಿತಾ 
ಲೇಖನಗಳು

ತ್ವಚೆಯ ಬಣ್ಣಕ್ಕೂ ಆತ್ಮವಿಶ್ವಾಸಕ್ಕೂ ಸಂಬಂಧ ಇಲ್ಲ

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ನಾನು ಹೇಳಬಯಸುವುದೇನೆಂದರೆ...

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ನಾನು ಹೇಳಬಯಸುವುದೇನೆಂದರೆ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಬೇಕು. ಆತ್ಮ ವಿಶ್ವಾಸದ ಬಲವಿದ್ದರೆ ಆಕೆ ಸಾಧನೆಯ ಮೆಟ್ಟಿಲುಗಳನ್ನೇರಬಹುದು. ನೀವೇ ನೋಡಿದ್ದೀರಿ, ಟೀವಿಯಲ್ಲಿ ತೋರಿಸುವ ಜಾಹೀರಾತಿನಲ್ಲಿ ಹುಡುಗಿ ಬೆಳ್ಳಗಿದ್ದರೆ ಮಾತ್ರ ಆಕೆಗೆ ಆತ್ಮವಿಶ್ವಾಸ ಬರುತ್ತೆ ಎಂದು ಬಿಂಬಿಸಲಾಗುತ್ತಿದೆ. ಆದರೆ ನಾನು ಹೇಳುವುದೇನೆಂದರೆ ತ್ವಚೆಯ ಬಣ್ಣಕ್ಕೂ ಆತ್ಮ ವಿಶ್ವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಮನುಷ್ಯನ ತ್ವಚೆಯ ಬಣ್ಣ ಅವನು ವಾಸಿಸುವ ಪರಿಸರಕ್ಕೆ ಹೊಂದಿಕೊಂಡು ಇರುತ್ತದೆ. ಅದರಲ್ಲಿ ತಾರತಮ್ಯ ಸಲ್ಲ. ಶ್ಯಾಮ ವರ್ಣದವರು ಆಕರ್ಷಣೀಯವಾಗಿ ಕಾಣುವುದಿಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಆಕರ್ಷಣೀಯವಾಗಿ ಕಾಣುವುದು ತ್ವಚೆಯ ಬಣ್ಣವನ್ನು ಅವಲಂಬಿಸಿರುವುದಿಲ್ಲ. ಜನರು ಜಾಹೀರಾತಿನ ಮೋಡಿಗೊಳಗಾಗಿ ಏನೇನೋ ಹಚ್ಚಿ ಗೌರವರ್ಣ ಪಡೆಯಲು ಯತ್ನಿಸುತ್ತಾರೆ. ಇದ್ಯಾವುದೂ ನಮ್ಮ ದೇಹಕ್ಕೆ ಒಳ್ಳೆಯದಲ್ಲ.
ನಂದಿತಾ ದಾಸ್ 'ಡಾರ್ಕ್ ಈಸ್ ಬ್ಯೂಟಿಫುಲ್ 'ಎಂಬ ಅಭಿಯಾನವನ್ನು ಆರಂಭಿಸಿದ್ದು ಗೊತ್ತೇ ಇದೆ. ತ್ವಚೆಯ ಬಣ್ಣದ ಬಗ್ಗೆ ಕೀಳರಿಮೆ ಹೊಂದುವುದಾಗಲೀ ತಾರತಮ್ಯ ಮಾಡುವುದಾಗಲೀ ಸರಿಯಲ್ಲ. ಆತ್ಮ ವಿಶ್ವಾಸವನ್ನು ನಾವು ನಮ್ಮಲ್ಲಿಯೇ ಬೆಳೆಸಿಕೊಂಡು ಬರಬೇಕು. ತ್ವಚೆಯ ಬಣ್ಣದ ಮೇಲೆ ಆತ್ಮ ವಿಶ್ವಾಸ ಅಥವಾ ಯಶಸ್ಸು ಅವಲಂಬಿತವಾಗಿಲ್ಲ.


-ನಿವೇದಿತಾ
ರಾಜ್ಯ ಪ್ರಶಸ್ತಿ ವಿಜೇತ ನಟಿ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT