ನನ್ನ ಸ್ಫೂರ್ತಿ

ಅಮ್ಮ ನೀನೆ ನನ್ನ ದೇವರು

ಅಮ್ಮನನ್ನು ನೆನೆದಾಗೆಲ್ಲ (ನೆನೆಯುವುದೇನು ಬಂತು ಸದಾ ನನ್ನಲ್ಲಿಯೇ ಇದ್ದಾರೆ) ಈ ಹಾಡು ನೆನಪಿಗೆ ಬರುತ್ತದೆ. ನಾನು ಕೂಡ ಒಂದು ಮಗುವಿಗೆ ಅಮ್ಮನಾಗಿದ್ದರು, ನನಗೆ ನನ್ನ ಅಮ್ಮನೇ ದೇವರು...

ಅಮ್ಮ ಅಮ್ಮ ಅನ್ನೋಮಾತು ಬಂತು ಎಲ್ಲಿಂದ?

ಭೂಮಿಗೆ ಬಂದ ಮೊದಲಕಂದನ ಅಳುವ ತುಟಿಯಿಂದ

ಅಮ್ಮನನ್ನು ನೆನೆದಾಗೆಲ್ಲ(ನೆನೆಯುವುದೇನು ಬಂತು ಸದಾ ನನ್ನಲ್ಲಿಯೇ ಇದ್ದಾರೆ) ಈ ಹಾಡು ನೆನಪಿಗೆ ಬರುತ್ತದೆ. ನಾನು ಕೂಡ ಒಂದುಮಗುವಿಗೆ ಅಮ್ಮನಾಗಿದ್ದರು,ನನಗೆ ನನ್ನ ಅಮ್ಮನೇ ದೇವರು.

ನಾನು ಹೆಜ್ಜೆ ಇಡುವಹಾದಿಯಲ್ಲಿ ತಾ ಹೆಜ್ಜೆ ಇಟ್ಟು ಕಲ್ಲು ಮುಳ್ಳುಗಳು ಇದ್ದರೇ ಅದನ್ನು ತೆಗೆದು ಹಾಕಿ ನನ್ನ ಪಾದಗಳಿಗೆನೋವಾಗಬಾರದು ಎನ್ನುತ ಕಾಳಜಿ ಹೊಂದಿದ್ದವರು ನನ್ನ ಅಮ್ಮ. ಕಷ್ಟಗಳು ಏನೇ ಇದ್ದರೂ ಅದನ್ನು ತನ್ನ ಮಡಿಲಿಗೆ ಹಾಕಿಕೊಂಡು, ಆ ಹರಿದಜೋಳಿಗೆಯಿಂದ ಪ್ರೀತಿಯ ತುತ್ತನ್ನು ಮುತ್ತನ್ನು ಕೊಟ್ಟು ಬೆಳೆಸಿದ ನನ್ನ ಅಮ್ಮ ಇಂದು ಬರಿ ನೆನಪಾಗಿಉಳಿದಿದ್ದಾರೆ.

ತನ್ನ ಮನೆಯ ಎರಡುಕಂಗಳು "ಸೌಮ್ಯ"ವಾಗಿ ಮತ್ತು "ದಿವ್ಯ"ವಾಗಿ ಹರನ "ಪ್ರಸಾದ"ದಆಶೀರ್ವಾದದಲ್ಲಿ "ಗಿರಿ"ಯಂಥಹ ಕಷ್ಟಗಳು ಇದ್ದರೂ, ಆ ಕಷ್ಟಗಳಿಗೆ "ಜಾ ಜಾ"ಎನ್ನುತ್ತಾ ಗಿರಿಜಮ್ಮನಾದರು.

ನನಗೆ ಕೊಂಚ ಗೊಂದಲಉಂಟಾದರೂ ಅಮ್ಮನನ್ನು ನೆನೆಸಿಕೊಂಡರೆ ಸಾಕು ಆ ಗೊಂದಲಗಳು ರವಿಯನ್ನು ಕಂಡ ಮಂಜಿನಂತೆ ಕಾಣದಾಗುತ್ತದೆ.ಇಂದು ನನ್ನ ಸಾಧನೆ ಏಳಿಗೆ ಏನೇ ಇದ್ದರೂ ಅದು ಅಮ್ಮನ ಕಾಣಿಕೆ..

ಅದಕ್ಕೆ ನನಗೆ ದೇವರುಬಂದು ಏನು ವರ ಬೇಕು ಎಂದು ಕೇಳಿದರೆ ಇದೆ ತಾಯಿ ನನಗೆ ಎಲ್ಲಾ ಜನ್ಮಕ್ಕೂ ತಾಯಿ ದೇವರಾಗಿ ಬರಲಿ ಅಂದುಕೇಳುವೆ.

ಅಮ್ಮ ನೀನೆ ನನ್ನದೇವರು!!!

 -ಸೌಮ್ಯಹೆಗ್ಗಡೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಿರ್ಣಯಕ್ಕೆ ಒಪ್ಪಬೇಕು, ವರಿಷ್ಠರು ಹೇಳಿದಾಗ ದೆಹಲಿಗೆ ಹೋಗುವೆ: ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಪ್ರತಿಕ್ರಿಯೆ; ಡಿಕೆಶಿ ಆಪ್ತರ ನಡೆಗೆ CM ತೀವ್ರ ಅಸಮಾಧಾನ

ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

'ಸಿಎಂ ಕುರ್ಚಿ' ಕದನದ ನಡುವೆ ವರದಿಗಾರರ ಪ್ರಶ್ನೆಗೆ ಕೆರಳಿದ ಡಿಕೆಶಿ! ಹೇಳಿದ್ದೇನು?

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ: ನಾಯಕ ಯಾರು? ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್! ನಾಳೆ ನಿರ್ಧಾರ

"ನಾವೂ ಕಲಿಯಬೇಕು": ಮಾಮ್ದಾನಿ-ಟ್ರಂಪ್ ಭೇಟಿಯ ಬಗ್ಗೆ ತರೂರ್ ಪೋಸ್ಟ್; ನೀವು ಹೇಳಿದ್ದು ಸರಿ ಆದರೆ ರಾಹುಲ್ ಗೆ ಇದೆಲ್ಲಾ ಅರ್ಥ ಆಗತ್ತಾ?: BJP

SCROLL FOR NEXT